ರಾಜ್ಯ

ಅರಮನೆ ಆವರಣದಲ್ಲಿ ಪಾರಿವಾಳಗಳಿಗೆ ಆಹಾರ ನೀಡಬೇಡಿ-ಒಡೆಯರ್ ಮನವಿ

ಮೈಸೂರು: ಮೈಸೂರು ಅರಮನೆಯಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಲ್ಲಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು,
ಸಮಾಲೋಚನಾ ಸಭೆಯಲ್ಲಿ ಮೈಸೂರು ಅರಮನೆಯ ಉತ್ತರ ದ್ವಾರದಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಲ್ಲಿಸಲು ಜೈನ ಸಮಾಜದ ಸದಸ್ಯರು ಒಪ್ಪಿಕೊಂಡರು, ಪಾರಂಪರಿಕೆ ರಚನೆಗಳು ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿಯಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದರು,
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅರಮನೆ ಬಳಿ ಪಾರಿವಾಳಗಳ ಆಹಾರ ಸೇವನೆ ತಡೆಯಲು ಕಾನೂನು ಚೌಕಟ್ಟು ಹಾಗೂ ಜನಜಾಗೃತಿ ಆಂದೋಲನ ಕುರಿತು ಚರ್ಚೆ ನಡೆಸಲಾಯಿತು.

Leave a Reply

Your email address will not be published. Required fields are marked *

Trending

Exit mobile version