ಬೆಂಗಳೂರು

MUDA SCAM ಇಂದು ರಾತ್ರಿಯೇ ಬೆಂಗಳೂರಿಗೆ ಸರ್ಜೇವಾಲಾ- ಬುಧವಾರ ಬೆಳಗ್ಗೆ ಕೈ ಮೀಟಿಂಗ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ತಳಮಳ ಶುರುವಾಗಿದ,
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಹೊರಬೀಳುತ್ತಿದಂತೆಯೇ ದೆಹಲಿಯಲ್ಲಿ ಕೈ ನಾಯಕರು ಸಭೆ ನಡೆಸಿದ್ದಾರೆ, ಕೋರ್ಟ್ ತೀರ್ಪು ಹೊರಬಿದ್ದ 24 ಗಂಟೆಯೊಳಗೆ ಸಭೆ ನಡೆಸಲು ಹೈಕಮಾಂಡ್ ಸೂಚನೆ ನೀಡಿದೆ, ಈ ಸೂಚನೆಯ ಬೆನ್ನಲ್ಲೇ ಸುರ್ಜೇವಾಲಾ ಅವರು ಬುಧವಾರ ಶಾಸಕಾಂಗ ಸಭೆ ನಡೆಸುವಂತೆ ರಾಜ್ಯ ದ ನಾಯಕರಿಗೆ ಸೂಚಿಸಿದ್ದಾರೆ,
ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ, ಸಭೆಯ ಹಿನ್ನೆಲೆಯಲ್ಲಿ ಇಂದು ರಾತ್ರಿಯೇ ಸುರ್ಜೇವಾಲಾ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ, ನಾಳೆ ಬೆಳಗ್ಗೆ 11 ಗಂಟೆಗೆ ನಗರದ ಖಾಸಗಿ ಹೋಟೆಲ್‍ನಲ್ಲಿ ಸಂಪುಟ ಸಭೆ ನಡೆಯಲಿದೆ, ಈ ಸಭೆಯಲ್ಲಿ ಶಾಸಕರ ಅಭಿಪ್ರಾಯವನ್ನು ಉಸ್ತುವಾರಿ ಪಡೆಯಲಿದ್ದಾರೆ, ಅಲ್ಲದೇ ಸಿಎಂ ಬೆಂಬಲಿಸುವ ನಿರ್ಧಾರವನ್ನು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ,

Leave a Reply

Your email address will not be published. Required fields are marked *

Trending

Exit mobile version