ರಾಜಕೀಯ
ದಸರಾ ಉದ್ಘಾಟನೆ ವೇಳೆ ಮೈಸೂರು ಪೇಟ ಬೇಡ ಎಂದ ಸಿಎಂ!

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನಲೆ ಸಿಎಂ ಸಿದ್ದರಾಮಯ್ಯನವರು ಇಂದು ಮೈಸೂರು ಪ್ರವಾಸ ಕೈಗೊಂಡಿದ್ದು, ದಸರಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು, ಈ ವೇಳೆ ಸಿಎಂ ಎಡವಟ್ಟುವೊಂದನ್ನು ಮಾಡಿಕೊಂಡಿದ್ದು ಭಾರೀ ಜರ್ಚೆಗೆ ಗ್ರಾಸವಾಗಿದೆ,
ಹೌದು.. ಸಿಎಂ ಸಿದ್ದರಾಮಯ್ಯ ನವರು ಇಂದು ದಸರಾಗೆ ಅದ್ದೂರಿ ಚಾಲನೆ ನೀಡಿದ್ದು, ಇದೆ ವೇಳೆ ಗೌರವಾರ್ಥವಾಗಿ ಕಾಂಗ್ರೆಸ್ ಅಧಿಕಾರಿಗಳು ಸೇರಿದಂತೆ ಇನ್ನಿತರರು ಸಿಎಂಗೆ ಸನ್ಮಾನ ಮಾಡಲು ಮುಂದಾಗಿದ್ದಾರೆ, ಇದೇ ವೇಳೆ ಸಿಎಂ ಮೈಸೂರು ಪೇಟ ಹಾಕೋದು ಬೇಡ ಎಂದು ಹೇಳಿದ್ದಾರೆ,
ಇಂತಹ ಪೂಜೆ ಸಂದರ್ಭದಲ್ಲಿ ರಾಜ ವಂಶಸ್ಧರು ಹಾಗೂ ಇತರ ರಾಜ ಮನೆತನದವರು ಧರಿಸುವ ಪೇಟ ತನ್ನದೇ ಆದ ಇತಿಹಾಸ ಹೊಂದಿದೆ, ಇಂತಹ ಪೇಟವನ್ನು ಇದೀಗ ಸಿಎಂ ಸಿದ್ದರಾಮಯ್ಯ ಬೇಡ ಎಂದಿದ್ದು ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ,