ರಾಜಕೀಯ
ಒಂದೇ ವರ್ಷ ಅವಕಾಶ ಕೊಡಲಿ.. ಒಂದೇ ವರ್ಷ..! ಸಿಎಂ ಭಾಷಣದ ಹಿಂದೆ ಅಧಿಕಾರ ಹಸ್ತಾಂತರ ಸಂದೇಶ?

ಮೈಸೂರು: ಇನ್ನೊಂದು ವರ್ಷ.. ಇನ್ನೊಂದು ವರ್ಷ ಜನರ ಸೇವೆ ಮಾಡೋಕೆ ಚಾಮುಂಡೇಶ್ವರಿ ಅವಕಾಶ ಮಾಡಿಕೊಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ,
ಮೈಸೂರಲ್ಲಿ ದಸರಾ ಉದ್ಘಾಟನೆ ಬಳಿಕ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ ನಾಡಿನ ಜನತೆಯ ಮಾಡ್ತಿದ್ದೇನೆ, ತಪ್ಪು ಮಾಡಿದ್ದರೆ ಇಷ್ಟು ದಿನ ಜನ ನನ್ನನ್ನು ಒಪ್ಪುತ್ತಿರಲಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿ ಮಾಡಿ ಪಾರದರ್ಶಕ ಆಡಳಿತ ಕೊಡುತ್ತಿದೆ, ಇದನ್ನು ಸಹಿಸಲಾಗದೆ ಕೆಲವರು ಅಪಪ್ರಚಾರ ಮಾಡ್ತಿದ್ದಾರೆ ಎಂದಿದ್ದಾರೆ,
1 ವರ್ಷ ಅವಕಾಶ ಕೊಡಲಿ..!
ಸಿಎಂ ಮುಂದಿನ 1 ವರ್ಷ ಚಾಮುಂಡೇಶ್ವರಿ ಸೇವೆ ಮಾಡೋಕೆ ಅವಕಾಶ ಕೊಡಲಿ ಎಂದು ಹೇಳಿರೋದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ,
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಿಎಂ ಪ್ರಮಾಣವಚನಕ್ಕೂ ಮುನ್ನ ಅಧಿಕಾರ ಹಂಚಿಕೆಯಾಗಿದೆ ಎಂಬ ಮಾತು ಕೇಳಿಬಂದಿತ್ತು, ಸಿಎಂ ಸಿದ್ದರಾಮಯ್ಯ ಗೆ 2.5 ವರ್ಷ ಹಾಗೂ ಡಿಕೆಶಿ ಅವರಿಗೆ 2.5 ಅಧಿಕಾರ ಎಂದು ಹೇಳಲಾಗ್ತಿತ್ತು, ಮುಂದಿನ ವರ್ಷ ದಸರೆಗೆ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿ 2.5 ವರ್ಷ ಮುಗಿಯಲಿದ್ದು, ಭಾವನಾತ್ಮಕವಾಗಿ ಸಿಎಂ ಇನ್ನೊಂದು ವರ್ಷ ಅವಕಾಶ ಕೊಡಲಿ ಎಂದು ಭಾಷಣ ಮಾಡಿರೋದು ಇದೀಗ ಸಿಎಂ ತಮ್ಮ ಸ್ಧಾನವನ್ನು ಬಿಟ್ಟುಕೊಡ್ತಾರಾ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ,
ಸದ್ಯ ಮುಡಾ ಸುಳಿಯಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕಿದ್ದಾರೆ, ಲೋಕಾಯುಕ್ತ ಹಾಗೂ ಇಡಿ ಭಯದಲ್ಲಿ ಒದ್ದಾಡುತ್ತಿದ್ದಾರೆ, ಈ ಮಧ್ಯೆಯೇ ಕೊಂಚ ಭಾವನಾತ್ಮಕ ಭಾಷಣ ಮಾಡಿರೋದು ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ,