ರಾಜ್ಯ

ಪುಟಾಣಿಗಳಿಂದ ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಧಾನದಲ್ಲಿ ದಸರಾ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ

ಕಟೀಲು: ನಾಡ ಹಬ್ಬ ದಸರಾ ಹಬ್ಬದ ಪ್ರಯುಕ್ತ ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಧಾನದಲ್ಲಿ ಪುಟ್ಟ ಮಕ್ಕಳಿಂದ ಭಜನಾ ಕಾರ್ಯಕ್ರಮಗಳನ್ನು ನಡೆಸಿದರು.

ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಾರಥಿನಗರದ ಪುಟ್ಟ ಮಕ್ಕಳು ನಡೆಸಿಕೊಟ್ಟ ಭಜನೆ ಕಾರ್ಯಕ್ರಮ ಎಲ್ಲರ ಮನಸೆಳೆಯಿತು. ಬೆಂಗಳೂರಿನಿಂದ ಬಂದ ಪೋಷಕರಾದ ಹರೀಶ್ ಅವರು ಮಾತನಾಡುತ್ತ ಭಾರತ ದೇಶದಲ್ಲಿ ದಸರಾ ಹಬ್ಬವು ಎಲ್ಲರ ಅಚ್ಚುಮೆಚ್ಚಿನ ಹಬ್ಬವಾಗಿದೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ದಸರಾ ಹಬ್ಬವು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಮೈಸೂರಿನಲ್ಲಿ ನಡೆಯುವ ವಿಶೇಷ ದಸರಾ ಆಚರಣೆಯಂತೆ, ರಾಜ್ಯದ ಪ್ರತಿಯೊಂದು ದೇವಾಸ್ಧಾನದಲ್ಲಿ ದಸರಾವನ್ನು ಅಚರಿಸಲಾಗುವುದು, ಈ ದಸರಾ ಆಚರಣೆಯು ವಿಜಯನಗರ ಯುಗದಲ್ಲಿ ಹೆಚ್ಚು ಸಾಂಸ್ಕೃತಿಕ ಮತ್ತು ಕಲಾತ್ಮಕ ಆಯಾಮವನ್ನು ಪಡೆದುಕೊಳ್ಳಲು ಪ್ರಾರಂಭಿಸಿತು, ಕ್ರಿ.ಶ.1136 ರಿಂದ 1565 ರವರೆಗೆ ವಿಜಯನಗರದ ಅರಸರು ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ಗುರುತಿಸಿ ಉತ್ಸವಕ್ಕೆ ರಾಜಮನೆತನದ ಆಶ್ರಯವನ್ನು ನೀಡಿದರು, ಈ ಬೆಂಬಲವು ದಸರಾವನ್ನು ಸಂಪೂರ್ಣವಾಗಿ ಧಾರ್ಮಿಕ ಕಾರ್ಯಕ್ರಮದಿಂದ ರಾಜ್ಯದ ಕಲೆ, ಸಾಂಸ್ಕೃತಿಕ ಮತ್ತು ಪರಂಪರೆಯ ಭವ್ಯತೆಯನ್ನು ಹೆಚ್ಚಿಸುತ್ತಿದೆ ಎಂದರು.

Leave a Reply

Your email address will not be published. Required fields are marked *

Trending

Exit mobile version