ಬೆಂಗಳೂರು
ಒಮ್ಮೆ ಬಿಜೆಪಿ ಮತ್ತೊಮ್ಮೆ ಕಾಂಗ್ರೆಸ್ ಅಂತಾರೆ-ನಿಖಿಲ್ ಕಿಡಿ

ಬೆಂಗಳೂರು: ಸಿ.ಪಿ,ಯೋಗೇಶ್ವರ ಅವರು ದ್ವಂದ್ವ ನಿಲುವು ತಾಳಿದ್ದು, ಅವರು ಒಂದ್ಸಲ ಬಿಜೆಪಿಯಿಂದ ಸ್ಪರ್ಧಿಸುವೆ ಅಂತಾರೆ ಮತ್ತೊಮ್ಮೆ ಕಾಂಗ್ರೆಸ್ ಅಂತಾರೆ ಎಂದು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು,
ಚನ್ನಪಟ್ಟಣಕ್ಕೆ ಅಭ್ಯರ್ಥಿ ಆಯ್ಕೆ ಕುರಿತಾಗಿ ಇಂದು ನಡೆದ ಸಭೆಯಲ್ಲಿ ಮಾತನಾಡಿ ಸಿಎಂ-ಡಿಸಿಎಂ ಅದಿಯಾಗಿ ಸಿಪಿವೈ ಕಾಂಗ್ರೆಸ್ ಗೆ ಬಂದರೆ ಟಿಕೆಟ್ ಕೊಡ್ತೀವಿ ಅಂತಾ ಹೇಳಿದ್ದಾರೆ, ಇಂತಹ ರಾಜಕೀಯ ಕುತಂತ್ರಗಳಿಗೆ ಚನ್ನಪಟ್ಟಣದ ಜನ ತಕ್ಕ ಉತ್ತರ ಕೊಡಲಿದ್ದಾರೆ ಎಂದರು ,
ಇನ್ನ ನಮ್ಮ ನಾಯಕರಾದ ಸಾರಾ ಮಹೇಶ್, ಪುಟ್ಟರಾಜು ಅವರು ಕುಮಾರಣ್ಣ ಹಾಗೂ ನನ್ನೊಂದಿಗೆ ಚರ್ಚಿಸಿ ನಾವು ಅನುಮತಿಸಿದರೆ ಯೋಗೇಶ್ವರ್ ಅವರನ್ನು ಜೆಡಿಎಸ್ ಪಕ್ಷದ ಚಿಹ್ನೆಯಡಿ ಸ್ಪರ್ಧೆಗೆ ಅವಕಾಶ ನೀಡಬಹುದು ಎಂದಿದ್ದರು, ಅದಕ್ಕೂ ನಾವು ಒಪ್ಪಿದ್ವಿ, ಜನತಾದಳ ಚಿಹ್ನೆ ಅಡಿ ಮಾತ್ರವಲ್ಲ ಯಾವ ಪಕ್ಷದ ಚಿಹ್ನೆ ಅಡಿ ಬೇಕಾದರೂ ಟಿಕೆಟ್ ಕೊಟ್ಟರೂ ನಿಲ್ಲುವೆ ಎಂದಿದ್ದ ಯೋಗೇಶ್ವರ್ ಈಗ್ಯಾಕೆ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ನಿಖಿಲ್ ಕುಟುಕಿದರು, ಮುಚ್ಚು ಮರೆ ಮಾಡಿ ಎಂದಿಗೂ ದೇವೇಗೌಡರ ಕುಟುಂಬ ರಾಜಕಾರಣ ಮಾಡಿಲ್ಲ ಎಂದು ತಿವಿದರು,
ಸಭೆಯ ಮಧ್ಯೆ ನಿಖಿಲ್ ಕುಮಾರಸ್ವಾಮಿಯವರೇ ನಮ್ಮ ಅಭ್ಯರ್ಥಿ..ಅವರೇ ಚುನಾವಣೆಗೆ ನಿಲ್ಲಬೇಕು ಎಂದು ಚನ್ನಪಟ್ಟಣದ ಜೆಡಿಎಸ್ ನಾಯಕರು ಪಟ್ಟು ಹಿಡಿದು ಗದ್ದಲ ಮಾಡಿಕ ಪ್ರಸಂಗ ನಡೆದಿದೆ,