ಬೆಂಗಳೂರು
ಆನೆ ಸ್ವಚ್ಛಗೊಳಿಸುವ ವೇಳೆ ದುರಂತ-ನೀರಲ್ಲಿ ಮುಳುಗಿ ಕಾವಾಡಿ ಸಾವು!

ಬೆಂಗಳೂರು: ಬನ್ನೇರಘಟ್ಟ ಉದ್ಯಾನವನದ ಆನೆ ಕಾವಡಿ ಗೋಪಾಲ್ ಎಂಬುವವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ, ಆನೆ ಪಾಲನೆ ಕೇಂದ್ರ ಪ್ರದೇಶದ ಸೀಗೆಕಟ್ಟೆ ಕೆರೆಯಲ್ಲಿ ಆನೆಯನ್ನು ಸ್ವಚ್ಛಗೊಳಿಸುವ ವೇಳೆ ನೀರಲ್ಲಿ ಮುಳುಗಿ ಗೋಪಾಲ್ ಸಾವನ್ನಪ್ಪಿದ್ದಾರೆ,
ಆನೆ ಕಾವಾಡಿ ಗೋಪಾಲ್ 10 ವರ್ಷದ ಸಂಪತ್ ಎಂಬ ಆನೆಯನ್ನು ಸ್ವಚ್ಛಗೊಳಿಸುವ ವೇಳೆ ನೀರಲ್ಲಿ ಮುಳುಗಿ ಗೋಪಾಲ್ ಸಾವನ್ನಪ್ಪಿದ್ದಾರೆ,
ಆನೆಯನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ಆಕಸ್ಮಿಕವಾಗಿ ಆನೆ ಗಾಬರಿಗೊಂಡು ಕೆರೆಯ ಆಳಕ್ಕೆ ಇಳಿದ ಪರಿಣಾಮ ನೀರಿನ ಆಳದಲ್ಲಿ ಮುಳುಗಿ ಕಾವಡಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ,
ಈ ವೇಳೆ ಸ್ಧಳದಲ್ಲಿಯೇ ಇದ್ದ ಇತರೆ ಸಿಬ್ಬಂದಿಗಳು ಅವರನ್ನು ರಕ್ಷಿಸಿಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ, ತಕ್ಷಣಕ್ಕೆ ಸ್ಧಳೀಯ ಪೂಲೀಸರು ಮತ್ತು ರಕ್ಷಣಾ ಸೇವೆಗಳಿಗೆ ಮಾಹಿತಿಯನ್ನು ನೀಡಿ ರಕ್ಷಣಾ ಕಾರ್ಯವನ್ನು ಕೈಗೊಳ್ಳಲಾಗಿತಾದ್ರೂ 2 ಗಂಟೆಗಳ ಹುಡುಕಾಟದ ನಂತರ ತುರ್ತು ಸೇವೆಗಳ ಸಹಾಯದಿಂದ ಮೈತದೇಹವನ್ನು ಹೊರತೆಯಲಾಗಿದೆ,