ಬೆಂಗಳೂರು

ಚಂದಾ ಎತ್ತಿ ರಸ್ತೆ ದುರಸ್ಧಿ ಮಾಡಿಸಿದ ಜನರು-ಕೈಗೆ ಕುಟುಕಿದ ಬಿಜೆಪಿ!

ಬೆಂಗಳೂರು: ಬೈ ಎಲೆಕ್ಷನ್ ಮಧ್ಯೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕೆಗಳ ಸುರಿಮಳೆಗೈಯ್ಯುತ್ತಿದೆ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸೋಷಿಯಲ್ ಮೀಡಿಯಾ ಸಖತ್ತಾಗಿಯೇ ಚಾಟಿ ಬೀಸಿದೆ,
ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಅಭಿವೃದ್ಧಿ ಕುಂಠಿತವಾಗಿದೆ, ಸರ್ಕಾರದಲ್ಲಿ ಹಣ ಇಲ್ಲ ಯಾವುದಕ್ಕೂ ಅನುದಾನ ಬಿಡುಗಡೆಯಾಗ್ತಿಲ್ಲ ಎಂದು ಜಾಡಿಸಿದೆ,
ಅಲ್ಲದೆ ಜನರೇ ಚಂದ ಎತ್ತಿ ರಸ್ತೆ ಮಾಡಿಸಿಕೊಳ್ಳುತ್ತಿರುವ ಫೋಟೋ ಶೇರ್ ಮಾಡಿ ಕಾಲಳೆದಿದೆ,

ಬಿಜೆಪಿ ಟ್ವೀಟ್ ನಲ್ಲಿ ಏನಿದೆ..?

ರಸ್ತೆ ಅಭಿವೃದ್ಧಿಗೆ ಹಣವಿಲ್ಲ, ರಾಜ್ಯದ ದರಿದ್ರ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನೇ ಮರೆತಿದೆ, ಗುಂಡಿಬಿದ್ದ ರಸ್ತೆಯೊಂದರನ್ನು ಸ್ವತಃ ಜನರೇ ಚಂದಾ ಎತ್ತಿ ರಿಪೇರಿ ಮಾಡುವ ಹಂತಕ್ಕೆ ರಾಜ್ಯ ತಲುಪಿದೆ, ನುಡಿದಂತೆ ನಡೆದಿದ್ದೇವೆ ಎಂದು ಹೋದಲ್ಲಿ ಬಂದಲ್ಲಿ ಬೊಬ್ಬೆ ಹಾಕುವ ಸಿಎಂ ಸಿದ್ದರಾಮಯ್ಯ ನವರಿಗೆ ರಸ್ತೆಗಳ ಗುಂಡಿ ಮುಚ್ಚುವುದಕ್ಕೂ ಬಿಡಿಗಾಸು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕೆ ಮಾಡಿದೆ,

Leave a Reply

Your email address will not be published. Required fields are marked *

Trending

Exit mobile version