ರಾಜಕೀಯ

ವಿಜಯಪುರದಲ್ಲಿ ವಕ್ಫ್ ವಿರುದ್ಧ ಅಹೋರಾತ್ರಿ ಧರಣಿ- ಶೋಭಕ್ಕ ಸಾಥ್!

ವಿಜಯಪುರ: ವಕ್ಫ್ ವಿವಾದ ದೊಡ್ಡ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಕೇಸರಿಪಡೆ ರೊಚ್ಚಿಗೆದ್ದಿದ್ದು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೋಮವಾರ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ್ದಾರೆ ,
ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಅಕ್ರೋಶ ಹೊರಹಾಕಿದ್ದಾರೆ, ವಕ್ಫ್ ಕಾಯ್ದೆ ರದ್ದುಗೊಳಿಸಬೇಕು, ವಕ್ಫ್ ರಾಷ್ಟ್ರೀಕರಣಗೊಳಿಸಬೇಕು, 1974 ಗೆಜಟ್ ನೋಟಿಫಿಕೇಶನ್ ಹಿಂಪಡೆಯಬೇಕು ಎಂದು ಯತ್ನಾಳ್ ನೇತೃತ್ವದಲ್ಲಿ ಪ್ರತಿಭನಾಕಾರರು ಒತ್ತಾಯಿಸಿದ್ದಾರೆ, ಪ್ರತಿಭಟನೆಯಲ್ಲಿ ಸಚಿವೆ ಶೋಭಾ ಕರಂದ್ಲಾಜಿ ಸಹ ಭಾಗವಹಿಸಿದ್ದಾರೆ,
ಇದೆ ವೇಳೆ ಪ್ರತಿಭಟನಾಕಾರರ ಉದ್ದೇಶಿಸಿ ಯತ್ನಾಳ್ ಮಾತನಾಡಿದರು, ಪಹಣಿಯ ಯಾವುದೇ ಕಾಲಂ ದಲ್ಲಿಯೂ ವಕ್ಫ್ ಆಸ್ತಿ ಎಂದು ಇರಬಾರದು, ಪಹಣಿಯಲ್ಲಿ ರೈತರ ಹೆಸರು ಮಾತ್ರ ಇರಬೇಕು, ರೈತರ ಆಸ್ತಿಗಳಿಗೆ ಸಂಬಂಧಿಸಿದ ತಕರಾರು ಸಾಮಾನ್ಯ ಕೋರ್ಟ್‍ಗಳಲ್ಲೇ ಇತ್ಯರ್ಥ ಆಗಬೇಕು, ವಕ್ಫ್ ನ್ಯಾಯಾಲಯಕ್ಕೆ ಅವಕಾಶ ಕಲ್ಪಿಸಬಾರದು ಎಂದು ಹೇಳಿದರು, ವಕ್ಫ್ ಅದಾಲತ್ ಮಾಡುವುದರಿಂದ ಸರ್ಕಾರಿ ನ್ಯಾಯಲಯಕ್ಕೆ ಮಹತ್ವ ಕಡಿಮೆ ಆಗಲಿದೆ, ಎಲ್ಲಿಯು ವಕ್ಫ್ ಅದಾಲತ್ ನಡೆಸಬಾರದು ಎಂದು ಆಗ್ರಹಿಸಿದರು, ಚುನಾವಣೆ ಹಿನ್ನೆಲೆ ವಕ್ಫ್ ನೋಟಿಸ್ ಹಿಂಪಡೆಯಲಾಗಿದೆ, ರೈತರ ಮೇಲೆ ತೂಗುಗತ್ತಿ ಇದೆ, ನಾಡಿನ ಮಠಾಧೀಷರು ಈ ಹೋರಾಟಕ್ಕೆ ಬೆಂಬಲ ಕೊಡಬೇಕು ಎಂದು ತಿಳಿಸಿದರು,

Leave a Reply

Your email address will not be published. Required fields are marked *

Trending

Exit mobile version