ಬೆಂಗಳೂರು
ಆಯ್ತು ರೀ ಅವ್ರು ಒಪ್ಪಿಗೆ ಕೊಡಿಸಲಿ, ನಾನು ಡ್ಯಾಂ ಕಟ್ಟಿಸುವೆ- ದೇವೇಗೌಡರಿಗೆ ಡಿಕೆಶಿ ಟಾಂಗ್

ರಾಮನಗರ: ನಾನು ಕೊನೆಯುಸಿರೆಳೆಯುವ ಮುನ್ನ ಮೇಕೆದಾಟು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಒಪ್ಪಿಗೆ ಕೊಡಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌರ ಅವರು ಶಪಥ ಮಾಡಿದ್ದಾರೆ ,
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಹೊಡಿಕೆ ಹೊಸಹಳ್ಳಿ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚಿಸಿ ದೇವೇಗೌಡರು ನೀಡಿದ್ದ ಈ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಟಾಂಗ್ ನೀಡಿದ್ದಾರೆ, ಆಯ್ತು ಒಳ್ಳೆಯದ್ದು, ಅವರು ಕನಿಷ್ಠ ಮೇಕೆದಾಟು ಯೋಜನೆಗೆ ಕೇಂದ್ರದಿಂದ ಒಪ್ಪಿಗೆ ಕೊಡಿಸಲಿ, ಇನ್ನು ಮುಂದೆಯೂ ನಮ್ಮ ಸರ್ಕಾರವೇ ರಾಜ್ಯದಲ್ಲಿ ಆಡಳಿತಕ್ಕೆ ಬರಲಿದೆ, ಅವ್ರು ಒಪ್ಪಿಗೆ ಕೊಡಿಸಿದರೆ ನಾವು ಮೇಕೆದಾಟು ಜಲಾಶಯ ಕಟ್ಟಿಸುತ್ತೇವೆ ಎಂದು ಹೇಳಿದರು,
ಮೇಕೆದಾಟು ಯೋಜನೆ ಜಾರಿಯಾಗಬೇಕಾದರೆ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ ಅದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಗೌಡರು ನಿನ್ನೆ ಅಬ್ಬರಿಸಿದ್ದರು, ಮೇಕೆದಾಟು ಯೋಜನೆಗೆ ಅನುಮತಿ ಕೊಡಬೇಕೆಂದು ಈ ಹಿಂದೆ ಬಿಜೆಪಿ ಅವಧಿಯಲ್ಲಿ ಡಿಕೆಶಿ ಅವರು ಬೃಹತ್ ಪಾದಯಾತ್ರೆಯೂ ಮಾಡಿದ್ದರು,