ಬೆಂಗಳೂರು
ಕರ್ನಾಟಕದ ಜನ ಗ್ಯಾರೆಂಟಿಗಳ ಪರವಾಗಿ ಮತ ಚಲಾಯಿಸಲಿದ್ದಾರೆ-ಡಿಕೆಶಿ ಭರವಸೆ

ಬೆಂಗಳೂರು: ರಾಜ್ಯದ 3 ಕ್ಷೇತ್ರಗಳ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆಲ್ಲಲಿದೆ, ಬಿಜೆಪಿ ತಂತ್ರ ಫಲಿಸಲ್ಲ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ ,
ಬೆಂಗಳೂರಿನಲ್ಲಿ ಮಾತನಾಡಿದ ಅವರು ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ,
ಕರ್ನಾಟಕದ ಜನರು ಗ್ಯಾರಂಟಿ ಯೋಜನೆಗಳ ಪರವಾಗಿ ಇದ್ದಾರೆ, ಯಾವ ಯೋಜನೆಗಳು ನಿಲ್ಲೋದಿಲ್ಲ, ಗೃಹಲಕ್ಷ್ಮೀ ಯೋಜನೆ ನಿಲ್ಲಿಸುವ ಯಾವುದೇ ಪ್ರಸ್ತಾಪನೆ ಇಲ್ಲ, ಬಿಜೆಪಿಯಿಂದ ಮಾಡುವ ತಂತ್ರ ನಡೆಯಲ್ಲ, ಜನರು ಕಾಂಗ್ರೆಸ್ ಪರವಾಗಿದ್ದು ಎಲ್ಲಾ ಕಡೆ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ತಿಳಿಸಿದರು,
ಗೃಹಲಕ್ಷ್ಮೀ ಯೋಜನೆ ನಿಲ್ಲಲಿದೆ ಎಂದು ದೇವೇಗೌಡರು ಹೇಳಿದ್ದಾರೆ, ಇದು ಅವರ ಹಣೆಯಲ್ಲಿ ಬರೆದಿಲ್ಲ, ಜನ ಎಚ್ಚರಿಕೆಯಿಂದ ಇರಬೇಕು, ಪ್ರಧಾನಿ ಮೋದಿ ಹೇಳಿಕೆ ಸುಳ್ಳು, ಇಲ್ಲಿಂದ ಹಣ ಸಂಗ್ರಹಿಸಿ ಎಲ್ಲೂ ಎಲೆಕ್ಷನ್ ಮಾಡಲಾಗುತ್ತಿಲ್ಲ ಎಂದು ಡಿಕೆಶಿ ಟಾಂಗ್ ನೀಡಿದರು,
ವಯನಾಡಿನಲ್ಲಿ ಏಕಪಕ್ಷೀಯ ಚುನಾವಣೆ ನಡೆಯುತ್ತಿದ್ದು, ಪ್ರಿಯಾಂಕ ವಾದ್ರಾ ಗೆಲುವುದು ಶತಸಿದ್ಧ, ತಾವು ಪ್ರಚಾರ ಮಾಡಿದ ಸಂದರ್ಭ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಪ್ರಿಯಾಂಕ ವಯನಾಡು ಜನರ ಸೇವೆ ಮಾಡುತ್ತಾರೆ, ವಿಪಕ್ಷಗಳು ಸಹ ಅವರ ಗೆಲುವನ್ನು ನಿರೀಕ್ಷೆಯಿಂದ ನೋಡುತ್ತಿದೆ ಎಂದು ತಿಳಿಸಿದರು,