ರಾಜಕೀಯ
ವಕ್ಫ್ ಹೋರಾಟ ಕೈಬಿಡಲು ರೆಬೆಲ್ ಗಳಿಗೆ ಬಿಎಸ್ ವೈ ಮನವಿ

ವಕ್ಫ್ ವಿರುದ್ಧ ಬಿಜೆಪಿ ರೆಬೆಲ್ ನಿಂದ ಹೋರಾಟ ಮುಂದುವರೆದಿದ್ದು ಹೋರಾಟವನ್ನು ಕೈಬಿಡುವಂತೆ ಮಾಜಿ ಸಿಎಂ ಯಡಿಯೂರಪ್ಪ ಆಗ್ರಹಿಸಿದ್ದಾರೆ,
ವಕ್ಫ್ ವಿರುದ್ಧ ಬೀದರ್ ನಿಂದ ಚಾಮರಾಜನಗರ ವರೆಗೆ ಬಿಜೆಪಿ ಶಾಸಕ ಯತ್ನಾಳ್ ನೇತೃತ್ವದಲ್ಲಿ ಹೋರಾಟ ಮುಂದುವರೆದಿದ್ದು ಇದೀಗ ಹೋರಾಟವನ್ನು ಕೈಬಿಡುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಯಡಿಯೂರಪ್ಪ ವಕ್ಫ್ ಗೆ ಸಂಬಂಧಪಟ್ಟಂತೆ ರೆಬೆಲ್ ಗಳ ಪ್ರತ್ಯೇಕ ಹೋರಾಟವನ್ನು ಕೈಬಿಡುವಂತೆ ಸೂಚನೆ ನೀಡಿದ್ದೇವೆ, ಪಕ್ಷ ಬಲಪಡಿಸಲು ಸಂಘಟಿತ ಹೋರಾಟ ಮಾಡಬೇಕು, ಹೀಗಾಗಿ ಒಗ್ಗಟ್ಟಿನಿಂದ ಹೋರಾಟ ಮಾಡೋಣ ಎಂದು ಹೇಳಿದರು..