ಬೆಂಗಳೂರು
ಬಾರ್ ಲೈಸೆನ್ಸ್ ಗೆ ಹಣದ ಬೇಡಿಕೆ- ಲೋಕಾಗೆ ದೂರು ನೀಡಿದ ಕೈ ಕಾರ್ಯಕರ್ತ

ಮಂಡ್ಯದಲ್ಲಿ ಅಬಕಾರಿ ಅಧಿಕಾರಿಗಳ ಲಂಚ ಆರೋಪ ಮತ್ತೆ ಮುಂದಾಗಿದ್ದು, ಬಾರ್ ಲೈಸನ್ಸ್ ಪಡೆಯಲು ಲಕ್ಷಾಂತರ ರೂಪಾಯಿ ಲಂಚ ಬೇಡಿಕೆ ಇಟ್ಟಿರುವ ಬಗ್ಗೆ ಲೋಕಾ ಅಧಿಕಾರಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ದೂರು ಸಲ್ಲಿಸಿದ್ದಾರೆ,
ಕಾಂಗ್ರೆಸ್ ಕಾರ್ಯಕರ್ತ ಪುನೀತ್ ಎಂಬುವವರು ಮದ್ದೂರು ತಾಲೂಕಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ಲೈಸೆನ್ಸ್ ಪಡೆಯಲು ಅವರ ತಾಯಿ ಲಕ್ಷಮ್ಮ ಹೆಸರಿನಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು, ಅದರೆ ಲಂಚ ನೀಡಲು ನಿರಾಕರಿಸಿದ ಹಿನ್ನಲೆ ನಾಲ್ಕು ಬಾರಿ ಅರ್ಜಿಯನ್ನು ತಿರಸ್ಕರಿಸಲಾಗಿತ್ತು,
ದಾಖಲೆಗಳೆಲ್ಲ ಸಿರಯಾಗಿದ್ದರು ಕೂಡ ಲಂಚ ನೀಡಿದ ಹಿನ್ನಲೆ ಲೈಸೆನ್ಸ್ ನೀಡಲು ಹಿಂದೇಟು ಹಾಕಲಾಗುತ್ತಿತ್ತು, ಈ ಬಗ್ಗೆ ಪುನೀತ್ ಅವರು ಅಬಕಾರಿ ಡಿಸಿ ರವಿಶಂಕರ್ ಹಾಗೂ ಇನ್ಸ್ ಪೆಕ್ಟರ್ ಶಿವಶಂಕರ್ ವಿರುದ್ಧ ಆಡಿಯೋ ಹಾಗೂ ವಿಡಿಯೋ ದಾಖಲೆಗಳೊಂದಿಗೆ ಲೋಕಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ,
ಅಲ್ಲದೇ ಅಧಿಕಾರಿಗಳು ತಮ್ಮ ಸ್ವಂತ ಲಾಭಕ್ಕಾಗಿ ಅರ್ಜಿಯನ್ನು ತಿರಸ್ಕರಿಸಿದ್ದಲ್ಲದೆ, 20 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಡಲಾಗಿದೆ ದಯವಿಟ್ಟು ಲಂಚಕೋರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಕಾರ್ಯಕರ್ತ ಪುನೀತ್ ಒತ್ತಾಯಿಸಿದ್ದಾರೆ,