Connect with us

ದೇಶ

ಮಂಗಳವಾರದ ಭವಿಷ್ಯ: ಈ ರಾಶಿಯವರಿಗೆ ಇಂದು ಹೊಸ ಯೋಜನೆ ಆರಂಭಿಸಲು ಸುದಿನ! 

ರಾಶಿ ಭವಿಷ್ಯ:

ಮೇಷ: ಕೆಲವೊಮ್ಮೆ ನೀವು ಒತ್ತಡದಲ್ಲಿರುವುದು ಒಳ್ಳೆಯದು ಏಕೆಂದರೆ ಇದು ನಿಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಹೊರತರುತ್ತದೆ. ನೀವು ನಿಮ್ಮ ಕೆಲಸದಲ್ಲಿ ಎಲ್ಲ ನಿಮ್ಮ ಸಹೋದ್ಯೋಗಿಗಳನ್ನೂ ಮೀರುತ್ತೀರಿ. ಆದರೆ, ಫಲಿತಾಂಶಗಳು ನಿಮ್ಮ ನಿರೀಕ್ಷೆಗಳಿಗೆ ಹೊಂದಿಕೊಳ್ಳುವುದಿಲ್ಲ. ಫಲಿತಾಂಶಗಳು ತಡವಾಗುವುದರಿಂದ ನೀವು ತಾಳ್ಮೆಯಿಂದ ಇರಬೇಕು.

ವೃಷಭ: ನಿಮ್ಮದೇ ಸಾಧನೆಗಳನ್ನು ಯೋಜಿಸುವುದು ಮತ್ತು ಮಿತ್ರರ ಯಶಸ್ಸಿಗೆ ಕೊಡುಗೆ ನೀಡುವುದು ಇಂದಿನ ಕಾರ್ಯಸೂಚಿ. ವ್ಯಾಪಾರ ಅಥವಾ ಕೆಲಸದಲ್ಲಿ ನಿಮ್ಮ ಆಲೋಚನೆಗಳು ಚಲನಶೀಲವಾಗಿರುತ್ತವೆ ಮತ್ತು ಯಾವುದೇ ಯೋಜನೆಗಳು ನಿಮ್ಮ ಭವಿಷ್ಯಕ್ಕೆ ಸದೃಢ ತಳಹದಿ ನಿರ್ಮಿಸುತ್ತವೆ.

ಮಿಥುನ: ಇಂದು ಎಲ್ಲ ಬಗೆಯ ಪಾಲುದಾರಿಕೆಗಳಿಗೆ ಪ್ರವೇಶಿಸಲು ಅತ್ಯುತ್ತಮ ದಿನವಾಗಿದೆ. ನೀವು ನಿಮ್ಮ ಆತ್ಮೀಯ ಮಿತ್ರರೊಂದಿಗೆ ಬಂಧ ಬೆಳೆಸಿಕೊಳ್ಳಲು, ಜಂಟಿ ಖಾತೆ ತೆರೆಯಲು, ವ್ಯವಹಾರಗಳನ್ನು ನಡೆಸಲು ಮತ್ತು ಉಜ್ವಲ ಭವಿಷ್ಯಕ್ಕೆ ಯೋಜನೆ ರೂಪಿಸಬಹುದಾದ ದಿನ. ನೀವು ಮಾಡುವ ಪ್ರತಿಯೊಂದರಲ್ಲೂ ಮೊದಲ ಸ್ಥಾನದಲ್ಲಿರುತ್ತೀರಿ. ಮತ್ತಷ್ಟು ಅಧ್ಯಯನಗಳಿಗೆ ಹೋಗಲು ಬಯಸುವ ನಿಮ್ಮಲ್ಲಿ ಕೆಲವರು, ಮಾಹಿತಿಪೂರ್ಣ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಬಹುದು.

ಕರ್ಕಾಟಕ: ಜನರು ನಿಮ್ಮನ್ನು ಸುತ್ತುವರಿಯುತ್ತಾರೆ. ನಿಮ್ಮ ಮನರಂಜನೆಯಿಂದ ಅವರನ್ನು ತೊಡಗಿಸಿಕೊಳ್ಳುತ್ತೀರಿ. ಸಾಮಾಜಿಕ ಸಂಪರ್ಕಗಳು ನಿಮಗೆ ಲಾಭ ತರುತ್ತವೆ. ವಿದ್ಯಾರ್ಥಿಗಳು ನಿರೀಕ್ಷೆ ಮೀರುತ್ತಾರೆ. ತಮ್ಮ ಕೆಲಸಕ್ಕೆ ಗಮನ ನೀಡುತ್ತಾರೆ. ಒಟ್ಟಾರೆ ಎಲ್ಲರಿಗೂ ಇದು ಒಳ್ಳೆಯ ದಿನವಾಗಿದೆ.

ಸಿಂಹ: ಕೆಲ ಭರವಸೆಗಳು ಖಾಸಗಿ ಮಾತುಗಳಂತೆ. ಎಂದಿಗೂ ವಾಸ್ತವಗೊಳ್ಳುವುದಿಲ್ಲ. ಇಂದು ಅದೇ ರೀತಿಯಲ್ಲಿದೆ, ನೀವು ಏನನ್ನು ಬಯಸುತ್ತೀರೋ ಅದಕ್ಕೆ ಎಷ್ಟೋ ಹತ್ತಿರ ಮತ್ತು ಎಷ್ಟೋ ದೂರವಿದ್ದೀರಿ. ನೀವು ಉದಾರ ವಿಜೇತ ಮತ್ತು ವಿನಯಶೀಲ ಸೋತವರು. ನೆನಪಿಟ್ಟುಕೊಳ್ಳಿ, ಪ್ರತಿದಿನವೂ ಭಾನುವಾರವಲ್ಲ; ಅಲ್ಲದೆ ನೀವು ಪ್ರತಿ ಸಲವೂ ಗೆಲ್ಲಲು ಸಾಧ್ಯವಿಲ್ಲ. ನಿರಾಸೆಗಳನ್ನು ತಪ್ಪಿಸಲು ನಿಮ್ಮ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಿ. ಬದಲಾವಣೆಯ ಗಾಳಿಗೆ ಕಾಯಿರಿ – ಅದು ಹೆಚ್ಚೇನೂ ಸಮಯ ತೆಗೆದುಕೊಳ್ಳುವುದಿಲ್ಲ.

ಕನ್ಯಾ: ಇಂದು, ನಿಮ್ಮ ದಕ್ಷತೆ ನಿಮಗೆ ಮೊಲಗಳಂತೆ ಐಡಿಯಾಗಳನ್ನು ಹುಟ್ಟುಹಾಕುತ್ತದೆ. ನಿಮಗೆ ವೈದ್ಯರ ಕೈಗಳಿವೆ ಮತ್ತು ನೀವು ಹಲವು ತಪ್ಪುಗಳನ್ನು ಸರಿಯಾಗಿ ಮಾಡಬಲ್ಲಿರಿ. ನೀವು ಬಹಳ ಅರ್ಥ ಮಾಡಿಕೊಳ್ಳಬಲ್ಲವರು ಮತ್ತು ಜನರ ಮನಸ್ಸನ್ನು ಓದುವುದು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಅದ್ಭುತಗಳನ್ನು ಮಾಡಬಲ್ಲದು.

ತುಲಾ: ಈ ದಿನ ಬಹಳ ಹಂಬಲದ ದಿನ. ನೀವು ಉತ್ತಮ ಭವಿಷ್ಯಕ್ಕಾಗಿ ಹಂಬಲಿಸುತ್ತೀರಿ. ನೀವು ವಿಶ್ವದ ಕುರಿತು ನಿಮ್ಮ ಹೊರನೋಟ ಬದಲಾಯಿಸುತ್ತೀರಿ. ಅದಕ್ಕೆ ನಿಮ್ಮ ಪ್ರೀತಿಪಾತ್ರರು ಮತ್ತು ಅವರ ಆರೈಕೆಯ ಪ್ರವೃತ್ತಿ ಕಾರಣ. ಹಾಗೆ ಮಾಡುವುದರಿಂದ ನಿಮ್ಮ ಜೀವನವನ್ನು ಉತ್ತಮಪಡಿಸಲು ನೆರವಾಗುತ್ತದೆ.

ವೃಶ್ಚಿಕ: ನಿಮ್ಮ ತಾರೆಗಳ ಜೋಡಣೆ ಇಂದು ನಿಮಗೆ ರಚನಾತ್ಮಕ ಅನುಕೂಲಕರ ದಿನವನ್ನು ಉತ್ಪಾದಿಸುವಂತಿದೆ. ನೀವು ಹಿರಿಯರು ಮತ್ತು ಕಿರಿಯರು ಪ್ರತಿಯೊಬ್ಬರನ್ನೂ ಸಮಾನರಂತೆ ಕಾಣುವ ತಂಡದ ಪ್ರಾಮುಖ್ಯತೆಯನ್ನು ಅರಿತಿದ್ದೀರಿ. ಇದು ನಿಮ್ಮ ಪರಿಸರವನ್ನು ಸಾಮರಸ್ಯಕರವಾಗಿಸುತ್ತದೆ.

ಧನು: ನಿಮ್ಮ ಕೋಪ ಬೆಂಕಿಯುಂಡೆಯಷ್ಟು ಬಿಸಿಯಾಗಿದೆ. ಕೋಪ ವಿಶ್ವವನ್ನು ನಾಶ ಮಾಡುತ್ತದೆ ಎಂದು ಜನರು ಹೇಳುತ್ತಾರೆ. ನೀವು ನಿಮ್ಮ ಆಕ್ರಮಣಕಾರಿ ವರ್ತನೆಯಿಂದ ನಿಮ್ಮದೇ ಕಾಲಿಗೆ ಏಟು ಮಾಡಿಕೊಳ್ಳುತ್ತೀರಿ. ಶಾಂತವಾಗಿರಿ ಮತ್ತು ಕೆಲಸ ಮಾಡುವ ಮುನ್ನ ಚಿಂತಿಸಿ. ನೀವು ಹಣಕಾಸಿನ ಕೊರತೆ ಎದುರಿಸುವ ಸಾಧ್ಯತೆಗಳಿವೆ, ಅದನ್ನು ಎಚ್ಚರಿಕೆಯಿಂದ ನಿಭಾಯಿಸಿ.

ಮಕರ: ನಿಮ್ಮ ಅಸಾಧಾರಣ ಬೌದ್ಧಿಕ ಸಾಮರ್ಥ್ಯ ನಿಮಗೆ ಉತ್ಸಾಹಕರ ಫಲಿತಾಂಶಗಳನ್ನು ನೀಡುವುದಲ್ಲದೆ ನಿಮ್ಮ ಹತ್ತಿರದ ಸಹವರ್ತಿಗಳಿಗೆ ನಿಮ್ಮ ಮೌಲಿಕ ಸಲಹೆಯಿಂದ ಅವರ ವೃತ್ತಿಯಲ್ಲಿ ಮಹತ್ತರವಾಗಿ ಪ್ರಗತಿ ಕಾಣಲು ನೆರವಾಗುತ್ತದೆ. ಅಸಂಖ್ಯ ಸಮಸ್ಯೆಗಳು ನಿಮ್ಮ ದಾರಿಯಲ್ಲಿವೆ, ಆದರೆ ನಿಮಗೆ ಆತಂಕಪಡಲು ಕಾರಣವಿಲ್ಲ. ನೀವು ಅವುಗಳ ಪ್ರತಿಯೊಂದನ್ನೂ ಸುಲಭವಾಗಿ ನಿವಾರಿಸುತ್ತೀರಿ. ಅನುಷ್ಠಾನಕ್ಕೆ ಅನುಮೋದನೆ ಪಡೆದ ಪ್ರಾಜೆಕ್ಟ್ ಯಶಸ್ವಿಯಾಗಲಿದೆ ಮತ್ತು ನಿಮಗೆ ಪರ್ಫೆಕ್ಷನಿಸ್ಟ್ ಎಂಬ ಗೌರವ ತಂದುಕೊಡಲಿದೆ.

ಕುಂಭ: ನೀವು ನಿಮ್ಮದೇ ಆದ ವೈಶಿಷ್ಟ್ಯತೆ ರೂಪಿಸಿಕೊಳ್ಳಲು ಯಶಸ್ವಿಯಾಗಿದ್ದೀರಿ. ಇಂದು, ನಿಮ್ಮ ಎಲ್ಲ ಹಿಂದಿನ ಕಠಿಣ ಪರಿಶ್ರಮದ ಸ್ಪಷ್ಟವಾದ ಲಾಭಗಳನ್ನು ಕಾಣುತ್ತೀರಿ. ಆದರೆ, ವ್ಯಾಪಾರದ ವಿರೋಧಿಗಳು ನೋವು ನೀಡುತ್ತಾರೆ. ನಿಮ್ಮ ಆರೋಗ್ಯವೂ ನಿಮಗೆ ತೊಂದರೆ ಕೊಡುತ್ತದೆ. ಆದರೆ, ನೀವು ನಗುನಗುತ್ತಾ ವಿಷಯಗಳನ್ನು ಸರಿಯಾದ ರೀತಿಯಲ್ಲಿ ಸ್ವೀಕರಿಸುತ್ತೀರಿ.

ಮೀನ: ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಪವಿತ್ರವಾದ ಸಮಯ. ಇಂದು ನಿಮ್ಮ ಭವಿಷ್ಯಕ್ಕೆ ಗಮನಾರ್ಹ ಹೂಡಿಕೆ ಮಾಡುವುದನ್ನು ಕಾಣುತ್ತೀರಿ. ನಿಮ್ಮ ಕುಟುಂಬ ನಿಮ್ಮ ಯಶಸ್ಸಿಗೆ ತಳಹದಿ, ಮತ್ತು ಅದನ್ನು ಮನದಲ್ಲಿಟ್ಟುಕೊಳ್ಳುವುದು ನಿಮಗೆ ಕೆಲವು ಪ್ರಮುಖ ಒಳನೋಟಗಳನ್ನು ನೀಡುತ್ತದೆ. ನಿಮ್ಮ ನಗು ಇಂದು ಹಲವು ಹೃದಯಗಳನ್ನು ಗೆಲ್ಲುತ್ತದೆ.

ದೇಶ

ವ್ಯಾಲೆಂಟೈನ್ಸ್ ಡೇ ನಿರಾಸೆ: ಬೆಂಗಳೂರಿನ ಬ್ರೂವರಿಯಲ್ಲಿ ಜೋಡಿಗಳ ದೀರ್ಘ ಸಾಲು ವೈರಲ್

ಬೆಂಗಳೂರು, ಫೆ.16: ವ್ಯಾಲೆಂಟೈನ್ಸ್ ಡೇ ಸಂಭ್ರಮಿಸಲು ಯೋಜಿಸಿದ್ದ ನೂರಾರು ಜೋಡಿಗಳಿಗೆ ಫೆ.14ರಂದು ನಿರಾಸೆ ಎದುರಾಗಿದೆ. ಬೆಂಗಳೂರಿನ ಜನಪ್ರಿಯ ಬ್ರೂವರಿಯೊಂದರಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಟೇಬಲ್ ಬುಕ್ಕಿಂಗ್ ಮಾಡಿದ್ದರಿಂದ ಜೋಡಿಗಳು ಗಂಟೆಗಳ ಕಾಲ ಹೊರಗೆ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇನ್‌ಸ್ಟಾಗ್ರಾಂ ಬಳಕೆದಾರ ಅಕ್ಷಯ್ ಕುಮಾವತ್ ಹಂಚಿಕೊಂಡಿರುವ ವಿಡಿಯೋದಲ್ಲಿ, “ಸಾಮರ್ಥ್ಯಕ್ಕಿಂತ ಹೆಚ್ಚು ಟೇಬಲ್ ಬುಕ್ ಮಾಡಿದಾಗ ಏನಾಗುತ್ತದೆ ನೋಡಿ” ಎಂಬ ಶೀರ್ಷಿಕೆ ನೀಡಲಾಗಿದೆ. ಸಂಜೆಯ ಚಳಿಯಲ್ಲಿ ನೂರಾರು ಜೋಡಿಗಳು ಮಳಿಗೆಯ ಹೊರಗೆ ಉದ್ದ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಾಣಿಸಿಕೊಂಡಿವೆ. ಟೇಬಲ್ ರಿಸರ್ವೇಶನ್ ಮಾಡಿಕೊಂಡಿದ್ದರೂ ಸೀಟು ಸಿಗದ ಕಾರಣ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿಗಳ ಪ್ರಕಾರ, ಒಬ್ಬ ವ್ಯಕ್ತಿಗೆ ತಲಾ ₹2,000ರವರೆಗೆ ಕವರ್ ಚಾರ್ಜ್ ವಸೂಲಿ ಮಾಡಲಾಗಿದೆ ಎನ್ನಲಾಗಿದೆ. ಇಷ್ಟೊಂದು ಹಣ ಪಾವತಿಸಿದರೂ ಸಮರ್ಪಕ ವ್ಯವಸ್ಥೆ ಇರಲಿಲ್ಲ ಎಂಬುದು ಗ್ರಾಹಕರ ಆರೋಪ. ಸೀಟು ಸಿಗದೆ ಹಿಂತಿರುಗಿದ ಕೆಲವರು ತಮ್ಮ ಹಣವನ್ನು ಮರಳಿ ಪಡೆಯಲು ಸಿಬ್ಬಂದಿಯೊಂದಿಗೆ ಹರಸಾಹಸ ಪಡಬೇಕಾಯಿತು ಎಂದು ಹೇಳಲಾಗಿದೆ.

ಫೆಬ್ರವರಿ 15ರಂದು ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ಬ್ರೂವರಿ ನಿರ್ವಹಣೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. “ಕೇವಲ ಸೋಶಿಯಲ್ ಮೀಡಿಯಾ ಹೈಪ್‌ಗಾಗಿ ಇಷ್ಟು ಕಷ್ಟ ಬೇಕೇ?” ಎಂದು ಕೆಲವರು ಪ್ರಶ್ನಿಸಿದರೆ, “ಮನೆಯಲ್ಲೇ ಉಳಿದವರೇ ಅದೃಷ್ಟವಂತರು” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

Continue Reading

ದೇಶ

ನೈನಾರ್ ಹೇಳಿಕೆಗೆ ತ್ರಿಶಾ ತಿರುಗೇಟು: “ಅಸಹ್ಯಕರ ಕಾಮೆಂಟ್ ನಿರೀಕ್ಷಿಸಿರಲಿಲ್ಲ”

ಚೆನ್ನೈ: “ಇಂತಹ ಅಸಹ್ಯಕರ ಮತ್ತು ಅನುಚಿತ ಹೇಳಿಕೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ” ಎಂದು ತಮಿಳು ನಟಿ Trisha Krishnan, ಬಿಜೆಪಿ ರಾಜ್ಯಾಧ್ಯಕ್ಷ Nainar Nagenthran ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಟ Vijay ಅವರ Tamilaga Vettri Kazhagam (TVK) ಪಕ್ಷವನ್ನು ಟೀಕಿಸುವ ವೇಳೆ ತ್ರಿಶಾ ಅವರ ಹೆಸರನ್ನು ಉಲ್ಲೇಖಿಸಿದ್ದ ನೈನಾರ್ ನಾಗೇಂದ್ರನ್ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆ ತ್ರಿಶಾ ತಮ್ಮ ವಕೀಲರ ಮೂಲಕ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ವಕೀಲರ ಹೇಳಿಕೆ ಏನು?

“ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಅಸಹ್ಯಕರ ಕಾಮೆಂಟ್‌ಗಳ ಬಗ್ಗೆ ಈ ಹೇಳಿಕೆ ನೀಡುತ್ತಿದ್ದೇವೆ. ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಹೊಂದಿರುವ ವ್ಯಕ್ತಿಯಿಂದ ಇಂತಹ ಹೇಳಿಕೆ ನಿರೀಕ್ಷಿಸಲಿಲ್ಲ. ನಮ್ಮ ಕಕ್ಷಿದಾರರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ರಾಜಕೀಯ ವಿಚಾರಗಳಲ್ಲಿ ಅವರು ಯಾವಾಗಲೂ ತಟಸ್ಥ ನಿಲುವು ತೆಗೆದುಕೊಳ್ಳುತ್ತಾರೆ. ತ್ರಿಶಾ ಅವರನ್ನು ಕಲಾವಿದೆಯಾಗಿ ಮಾತ್ರ ಗುರುತಿಸಬೇಕು; ರಾಜಕೀಯ ಹೊಂದಾಣಿಕೆಗಳೊಂದಿಗೆ ಕೊಂಡೊಯ್ಯಬಾರದು” ಎಂದು ವಕೀಲರು ತಿಳಿಸಿದ್ದಾರೆ.

ವೈಯಕ್ತಿಕ ಜೀವನವನ್ನು ಸಾರ್ವಜನಿಕ ಚರ್ಚೆಗೆ ಎಳೆಯಬಾರದು. ಉನ್ನತ ಹುದ್ದೆಯವರು ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.

ನೈನಾರ್ ಹೇಳಿಕೆ ಏನು?

“ವಿಜಯ್ ಒಬ್ಬ ಉತ್ತಮ ನಟ, ಆದರೆ ರಾಜಕೀಯದಲ್ಲಿ ಅನುಭವ ಇಲ್ಲ. ರಾಜಕಾರಣ ಏನೆಂದು ತಿಳಿಯಬೇಕಾದರೆ ಮೊದಲು ಅವರ ಮತ್ತು ತ್ರಿಶಾ ಮನೆಯಿಂದ ಹೊರಬರಬೇಕು” ಎಂಬ ವಿವಾದಾತ್ಮಕ ಹೇಳಿಕೆಯನ್ನು ನೈನಾರ್ ನಾಗೇಂದ್ರನ್ ನೀಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ಹುಟ್ಟುಹಾಕಿದೆ.

Continue Reading

ದೇಶ

ಕೋಲಾರದಲ್ಲಿ ಟಾಟಾ–ಏರ್‌ಬಸ್ ಹೆಲಿಕಾಪ್ಟರ್ ಘಟಕಕ್ಕೆ ಮೋದಿ–ಮ್ಯಾಕ್ರಾನ್ ಚಾಲನೆ

ಕೋಲಾರ, ಫೆಬ್ರವರಿ 16: ಚಿನ್ನದ ನಾಡು ಕೋಲಾರ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಕೋಲಾರ ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಟಾಟಾ–ಏರ್‌ಬಸ್ ಮಿನಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕಕ್ಕೆ ನಾಳೆ (ಫೆ.17) ಸಂಜೆ 4.20ಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಪ್ರಧಾನಿ Narendra Modi ಹಾಗೂ ಫ್ರಾನ್ಸ್ ಅಧ್ಯಕ್ಷ Emmanuel Macron ವರ್ಚುವಲ್ ಮೂಲಕ ಘಟಕವನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ Rajnath Singh ಹಾಗೂ ಫ್ರಾನ್ಸ್ ರಕ್ಷಣಾ ಸಚಿವೆ Catherine Vautrin ಖುದ್ದಾಗಿ ವೇಮಗಲ್‌ಗೆ ಆಗಮಿಸಲಿದ್ದಾರೆ. ಭದ್ರತಾ ದೃಷ್ಟಿಯಿಂದ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಜಿಲ್ಲಾಧಿಕಾರಿ ಎಂ.ಆರ್. ರವಿ ಹಾಗೂ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ವರ್ಷಕ್ಕೆ 10 H125 ಹೆಲಿಕಾಪ್ಟರ್‌ಗಳು

Tata Advanced Systems Limited ವತಿಯಿಂದ ಸುಮಾರು 16 ಎಕರೆ ಪ್ರದೇಶದಲ್ಲಿ ನಿರ್ಮಿತ ಈ ಘಟಕವು ದೇಶದಲ್ಲೇ ಮೊದಲ ಮಿನಿ ನಾಗರಿಕ ಹೆಲಿಕಾಪ್ಟರ್ ಜೋಡಣಾ ಕೇಂದ್ರ ಎನ್ನಲಾಗುತ್ತಿದೆ. ಮೊದಲ ಹಂತದಲ್ಲಿ ವರ್ಷಕ್ಕೆ H125 ಮಾದರಿಯ 10 ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಸಾಮರ್ಥ್ಯ ಇದಕ್ಕಿದೆ. ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹೆಲಿಕಾಪ್ಟರ್‌ಗಳನ್ನೂ ಇಲ್ಲಿ ಜೋಡಿಸಲಾಗಲಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಯೋಜನೆಗಳಿವೆ.

ವೇಮಗಲ್ ಕೈಗಾರಿಕಾ ಪ್ರದೇಶವು Kempegowda International Airport ಹಾಗೂ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಸಮೀಪದಲ್ಲಿರುವುದು ಸ್ಥಳ ಆಯ್ಕೆಗೆ ಪ್ರಮುಖ ಕಾರಣವಾಗಿದೆ. ಘಟಕ ಆರಂಭದಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಳವಾಗಲಿದ್ದು, ಕೋಲಾರ ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಹೊಸ ಉತ್ತೇಜನ ಸಿಗಲಿದೆ.

Continue Reading

Trending