ರಾಜ್ಯ
ರಾಜ್ಕುಮಾರ್ ‘ಸಂಪತ್ತಿಗೆ ಸವಾಲ್’ ಚಿತ್ರಕ್ಕೆ 50 ವರ್ಷ! 90ರ ದಶಕದಲ್ಲೇ ಅಣ್ಣಾವ್ರ ಪ್ಯಾನ್ ಇಂಡಿಯಾ ಸಿನಿಮಾ!
ಯಾರೇ ಕೂಗಾಡಲಿ, ಊರೇ ಹೋರಾಡಲಿ’ ಈ ಹಾಡು ಕೇಳಿದ್ರೆ ನೆನಪಾಗೋದು ಯಾವ ಸಿನಿಮಾ ಹೇಳಿ? ಅಣ್ಣಾವ್ರ ‘ಸಂಪತ್ತಿಗೆ ಸವಾಲ್’ ಚಿತ್ರ. ಸೂಪರ್ ಡೂಪರ್ ಹಿಟ್ ಕಂಡ ಈ ಸಿನಿಮಾಗೆ ಈಗ 50 ವರ್ಷದ ಸಂಭ್ರಮ.
ಸಂಪತ್ತಿಗೆ ಸವಾಲ್ 1974 ರಲ್ಲಿ ತೆರೆ ಕಂಡ ಸಿನಿಮಾ ಇವತ್ತಿಗೆ ಅದೇ ಘಮಲು ಉಳಿಸಿಕೊಂಡಿರುವ ಚಿತ್ರ. ಗಣೇಶ ಹಬ್ಬ ಇರಲಿ. ಅಣ್ಣಮ್ಮನ ಉತ್ಸವವೇ ಇರಲಿ ಅಣ್ಣವ್ರಾ ‘ಯಾರೇ ಕೂಗಾಡಲಿ’ ಹಾಡು ಇಲ್ಲದೇ ಆ ಕಾರ್ಯಕ್ರಮ ಮುಗಿಯೋದೆ ಇಲ್ಲ. ಎವಿ ಶೇಷಗಿರಿ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಮಂಜುಳಾ ರಾಜ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ರು. ರಾಜ್ಕುಮಾರ್ ಮತ್ತು ಮಂಜುಳ ಜುಗಲಬಂಧ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಇವತ್ತಿಗೂ ರಿಯಾಲಿಟಿ ಶೋಗಳಲ್ಲಿ ರೀಲ್ಸ್ಗಳಲ್ಲಿ ಸಂಪತ್ತಿಗೆ ಸವಾಲ್ ರಿಕ್ರಿಯೇಟ್ ಆಗ್ತಾನೆ ಇರುತ್ತೆ. ‘ಯಾವ ನಾಯಿಗೆ ಬೇಕೋ, ಯಾವ ನಾಯಿಗೆ ಬೇಕೋ ನಿನ್ನ ಋಣ’, ಬೇವರ್ಸಿ, ಹಳೆ ಬೇವರ್ಸಿ, ಬಿಕನಾಸಿ, ದರ್ವೇಸಿ ಈ ಡೈಲಾಗ್ಗಳಂತು ಇಂದಿಗೂ ಟ್ರೆಂಡಿಂಗ್ನಲ್ಲಿರೋದು ಸಂಪತ್ತಿಗೆ ಸವಾಲ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ,
ನಾಟಕದ ಕಥೆ ಸಿನಿಮಾ ಆಗಿದ್ದೇ ರೋಚಕ
ಹೌದು. ನಿಮಗೂ ಇದು ಅಚ್ಚರಿ ಅನಿಸಿದ್ರೂ ಇದು ಸತ್ಯನೇ. ಯಾಕಂದ್ರೆ ಸಂಪತ್ತಿಗೆ ಸವಾಲ್ ಅನ್ನೋದು ಮೂಲತಃ ಒಂದು ನಾಟಕ. ಉತ್ತರ ಕರ್ನಾಟಕದ ಕಂಪನಿ ಒಂದು ಈ ನಾಟಕವನ್ನ ಬರೆದಿತ್ತು. 1973 ರಲ್ಲಿ ಈ ನಾಟಕವನ್ನು ಶಾರದಾ ಸಂಗೀತಾ ನಾಟಕ ಮಂಡಳಿ ಕನಕಪುರದಲ್ಲಿ ಪ್ರದರ್ಶನ ನೀಡ್ತಿತ್ತು. ಆ ಕಾಲದಲ್ಲಿ ಸಂಪತ್ತಿಗೆ ಸವಾಲ್ ನಾಟಕ ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆದಿತ್ತು. ವಿಚಾರ ಏನಂದ್ರೆ ಖುದ್ದು ಡಾ. ರಾಜ್ಕುಮಾರ್ ಈ ನಾಟಕವನ್ನು ಹೋಗಿ ನೋಡಿ ಬಂದಿದ್ರಂತೆ. ಬಳಿಕ ಅದನ್ನ ಸಿನಿಮಾ ಮಾಡೋ ಆಸೆ ವ್ಯಕ್ತಪಡಿಸುತ್ತಾರೆ. ಅದ್ರಂತೆ ಶಾರದಾ ಸಂಗೀತಾ ನಾಟಕ ಮಂಡಳಿ ಮಾಲೀಕರಾದ ಬಸವರಾಜಪ್ಪ, ಮತ್ತು ನಾಟಕ ರಚನೆ ಮಾಡಿದಂತ ಪಿ ಬಿ ದುತ್ತರಿಗೆ ಒಪ್ಪಿಸಿ ನಾಟಕವನ್ನ ಸಿನಿಮಾವಾಗಿ ಮಾಡ್ತಾರೆ. ಸಿನಿಮಾ ಗಲ್ಲಾಪೆಟ್ಟಿಗಯಲ್ಲಿ ಸದ್ದು ಮಾಡಿ ಇತಿಹಾಸವನ್ನೇ ಸೃಷ್ಟಿ ಮಾಡಿಬಿಡುತ್ತೆ. ನಾವೆಲ್ಲ ಈಗ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನೋಡ್ತಿದ್ದೀವಿ. ಆದ್ರೆ ಅಣ್ಣಾವ್ರ ಸಂಪತ್ತಿಗೆ ಸವಾಲ್ ಸಿನಿಮಾ 90 ರ ದಶಕದಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಸಕ್ಸಸ್ ಕಂಡಿತ್ತು. 50 ವರ್ಷ ಪೂರೈಸಿರುವ ಸಂಪತ್ತಿಗೆ ಸವಾಲ್ ಚಿತ್ರ 90 ರ ಕಾಲದಲ್ಲೇ ತೆಲುಗು, ತಮಿಳು, ಹಿಂದಿ ಸೇರಿ ಮೂರು ಭಾಷೆಗಳಲ್ಲಿ ರಿಲೀಸ್ ಆಗಿತ್ತು.
ಚುನಾವಣೆ
GBA ವಾರ್ಡ್ಗಳಲ್ಲಿ ಬೂತ್ ಹಂಚಿಕೆ ಗೊಂದಲ: ತಿದ್ದುಪಡಿಸದಿದ್ದರೆ ಸುಪ್ರೀಂ ಕೋರ್ಟ್ಗೆ ಮನವಿ – ಸಿ.ಎಂ. ಸತ್ಯನಾರಾಯಣ ಎಚ್ಚರಿಕೆ
ಬೆಂಗಳೂರು (ಫೆಬ್ರವರಿ 13, 2026): ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಮಟ್ಟದ ಏಜೆಂಟ್ (BLA-1) ಆರ್.ಎಸ್. ದೀಪಕ್ ಕುಮಾರ್ ಅವರು ಹೊಸದಾಗಿ ರಚಿಸಲಾದ Greater Bengaluru Authority (GBA) ವಾರ್ಡ್ಗಳಲ್ಲಿನ ಬೂತ್ ಹಂಚಿಕೆ ಮತ್ತು ಮತದಾರರ ಪಟ್ಟಿಯಲ್ಲಿರುವ ಗಂಭೀರ ಲೋಪಗಳ ಕುರಿತು Karnataka State Election Commission ಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ GBA ಟಿಕೆಟ್ ಆಕಾಂಕ್ಷಿ ಸಿ.ಎಂ. ಸತ್ಯನಾರಾಯಣ (CMC) ಅವರು hosasuddi.in ಜೊತೆಗೆ ಮಾತನಾಡಿ, “ಈ ತಪ್ಪುಗಳನ್ನು ತಕ್ಷಣ ಸರಿಪಡಿಸದಿದ್ದರೆ ನಮ್ಮ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಮುಂದಾಗಬೇಕಾಗುತ್ತದೆ. ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಈ ವಿಷಯದಲ್ಲಿ ಜವಾಬ್ದಾರಿಯಾಗಿ ಕೆಲಸ ಮಾಡಬೇಕು. ಆದರೆ ಯಾರೂ ಗಮನ ಹರಿಸುತ್ತಿಲ್ಲ ಎಂಬುದು ವಿಷಾದನೀಯ. GBA ಅಧಿಕಾರಿಗಳು ಕೂಡಲೇ ಇದನ್ನು ಪರಿಶೀಲಿಸಿ ತಿದ್ದುಪಡಿ ಮಾಡಬೇಕು” ಎಂದು ಆಗ್ರಹಿಸಿದರು.
ಪ್ರಮುಖ ದೂರುಗಳು
ದೂರುದಲ್ಲಿ ಮೂರು ಪ್ರಮುಖ ತಾಂತ್ರಿಕ ಮತ್ತು ಆಡಳಿತಾತ್ಮಕ ಲೋಪಗಳನ್ನು ಎತ್ತಿ ತೋರಿಸಲಾಗಿದೆ:
- ವೆಬ್ಸೈಟ್ನಲ್ಲಿ ಮಾಹಿತಿ ಕೊರತೆ: ಹಲವಾರು ಬೂತ್ಗಳ ವಿವರಗಳು ಅಧಿಕೃತ GBA ವೆಬ್ಸೈಟ್ನಲ್ಲಿ ಲಭ್ಯವಿಲ್ಲ.
- ವಾರ್ಡ್ಗಳ ಅದಲು-ಬದಲು: ಒಂದು ವಾರ್ಡ್ಗೆ ಸೇರಬೇಕಾದ ಬೂತ್ಗಳನ್ನು ಮತ್ತೊಂದು ವಾರ್ಡ್ಗೆ ಸೇರಿಸಲಾಗಿದೆ.
- ಮತದಾರರ ಗೊಂದಲ: ಒಂದೇ ಪ್ರದೇಶದ ಮತದಾರರನ್ನು ಎರಡು ಬೇರೆ ವಾರ್ಡ್ಗಳಿಗೆ ಹಂಚಿರುವುದರಿಂದ ಮತದಾರರ ಪಟ್ಟಿಯಲ್ಲಿ ಅವ್ಯವಸ್ಥೆ.
ವಾರ್ಡ್ವಾರು ಕಂಡುಬಂದಿರುವ ಲೋಪಗಳು
ಶಿವನಪಾಳ್ಯ (19):
ಬೂತ್ ಸಂಖ್ಯೆ 25ರಿಂದ 31ರವರೆಗೆ ಕೆಂಗೇರಿ (21) ಅಥವಾ ಕೆಂಗೇರಿ ಕೋಟೆ (20) ವಾರ್ಡ್ಗೆ ಸೇರಬೇಕಿದೆ. ಬೂತ್ 19 ಮತ್ತು 31 ವೆಬ್ಸೈಟ್ನಲ್ಲಿ ಕಾಣುತ್ತಿಲ್ಲ.
ಉಲ್ಲಾಳ (16):
ಬೂತ್ ಸಂಖ್ಯೆ 1, 2, 3 ಮತ್ತು 6 ವೆಬ್ಸೈಟ್ನಲ್ಲಿ ಲಭ್ಯವಿಲ್ಲ.
ನಾಡಪ್ರಭು ಕೆಂಪೇಗೌಡ ನಗರ (13):
ಹಳೆಯ ಬೂತ್ 52ರ ಮತದಾರರು ಈಗ ವಾರ್ಡ್ 12ರಲ್ಲಿ ಸೇರಿದ್ದಾರೆ. ಬೂತ್ 37 ವೆಬ್ಸೈಟ್ನಲ್ಲಿ ನಾಪತ್ತೆಯಾಗಿದೆ. ಬೂತ್ 37-40 ಮತ್ತು 24-25 ಎರಡು ವಾರ್ಡ್ಗಳ ನಡುವೆ ಹಂಚಿಹೋಗಿವೆ.
ಬ್ಯಾಡರಹಳ್ಳಿ (15):
ಬೂತ್ ಸಂಖ್ಯೆ 23 ಮತ್ತು 24 ವೆಬ್ಸೈಟ್ನಲ್ಲಿ ಲಭ್ಯವಿಲ್ಲ.
ಕೆಂಗೇರಿ (21) ಮತ್ತು ಕೆಂಗೇರಿ ಕೋಟೆ (20):
ಶ್ರೀನಿವಾಸಪುರ, ಗಣಕಲ್ಲು ಮತ್ತು ಓಂಕಾರ ಆಶ್ರಮ ಬೂತ್ಗಳನ್ನು ಎರಡು ವಾರ್ಡ್ಗಳಿಗೆ ವಿಂಗಡಿಸಲಾಗಿದೆ. ಇವುಗಳನ್ನು ಒಂದೇ ವಾರ್ಡ್ಗೆ ಸೇರಿಸಲು ಮನವಿ.
ಕೆಂಗಲ್ ಹನುಮಂತಯ್ಯ ವೆಸ್ಟ್ (18):
ಬೆಥೆಸ್ಡಾ ಇಂಟರ್ನ್ಯಾಷನಲ್ ಸ್ಕೂಲ್ನ ಬೂತ್ ಸಂಖ್ಯೆ 5ರ ವಿವರ ವೆಬ್ಸೈಟ್ನಲ್ಲಿ ಕಾಣುತ್ತಿಲ್ಲ.
ತಕ್ಷಣದ ಕ್ರಮಕ್ಕೆ ಆಗ್ರಹ
“ಮತದಾರರ ಪಟ್ಟಿಯಲ್ಲಿ ಮತದಾರರು ಸಂಘಟಿತ ರೀತಿಯಲ್ಲಿ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ. ದಯವಿಟ್ಟು ಮೇಲಿನ ತಪ್ಪುಗಳನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಿ” ಎಂದು ಆರ್.ಎಸ್. ದೀಪಕ್ ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿನ ಪ್ರತಿಯನ್ನು ಯಶವಂತಪುರ ಕ್ಷೇತ್ರದ ಚುನಾವಣಾಧಿಕಾರಿಗೂ (R.O.) ರವಾನಿಸಲಾಗಿದೆ.
ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ದೂರು ಮಹತ್ವ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳ ಪ್ರತಿಕ್ರಿಯೆ ಏನಾಗಲಿದೆ ಎಂಬುದು ಕಾದು ನೋಡಬೇಕಿದೆ.
ದೇಶ
BMTC ಸಿಹಿ ಸುದ್ದಿ: ಪಿಯುಸಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಗಳಲ್ಲಿ ಉಚಿತ ಬಸ್ ಪ್ರಯಾಣ
ಬೆಂಗಳೂರು: ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ Bangalore Metropolitan Transport Corporation (BMTC) ಮಹತ್ವದ ಘೋಷಣೆ ಮಾಡಿದೆ. 2025-26ನೇ ಸಾಲಿನ ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಅವಧಿಯಲ್ಲಿ ಉಚಿತವಾಗಿ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಬಹುದು.
ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ (Hall Ticket) ತೋರಿಸಿದರೆ ಸಾಕು – ಯಾವುದೇ ಪ್ರಯಾಣ ದರ ಪಾವತಿಸಬೇಕಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಫೆಬ್ರವರಿ 28, 2026 ರಿಂದ ಮಾರ್ಚ್ 17, 2026ರವರೆಗೆ ನಡೆಯಲಿರುವ ಪರೀಕ್ಷೆಗಳ ಅವಧಿಯಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ.
ಉಚಿತ ಪ್ರಯಾಣದ ನಿಯಮಗಳು
▪ ಪ್ರವೇಶ ಪತ್ರ ಕಡ್ಡಾಯ: ಬಸ್ನಲ್ಲಿ ಪ್ರಯಾಣಿಸುವಾಗ ನಿರ್ವಾಹಕರಿಗೆ ಹಾಲ್ ಟಿಕೆಟ್ ತೋರಿಸಬೇಕು. ಅದೇ ಬಸ್ ಪಾಸ್ ಆಗಿ ಪರಿಗಣಿಸಲಾಗುತ್ತದೆ.
▪ ಸಾಮಾನ್ಯ ಬಸ್ಗಳಿಗೆ ಮಾತ್ರ ಅನ್ವಯ: ಈ ಸೌಲಭ್ಯವು ಬಿಎಂಟಿಸಿಯ ಸಾಮಾನ್ಯ (Ordinary) ಬಸ್ಗಳಿಗೆ ಮಾತ್ರ. ವಜ್ರ, ಎಸಿ ಅಥವಾ ಇತರೆ ಪ್ರೀಮಿಯಂ ಬಸ್ಗಳಿಗೆ ಅನ್ವಯಿಸುವುದಿಲ್ಲ.
▪ ಮನೆ–ಪರೀಕ್ಷಾ ಕೇಂದ್ರ ವ್ಯಾಪ್ತಿ: ವಿದ್ಯಾರ್ಥಿಯ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಹಾಗೂ ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುವಾಗ ಮಾತ್ರ ರಿಯಾಯಿತಿ ಸಿಗಲಿದೆ.
ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಕ್ರಮಗಳು
- ಹೆಚ್ಚುವರಿ ಟ್ರಿಪ್ಗಳು: ಪರೀಕ್ಷಾ ಕೇಂದ್ರಗಳಿರುವ ಮಾರ್ಗಗಳಲ್ಲಿ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ನಂತರ ಹೆಚ್ಚುವರಿ ಬಸ್ಗಳನ್ನು ಓಡಿಸಲು ಸೂಚನೆ.
- ಕೋರಿಕೆ ನಿಲುಗಡೆ (Request Stop): ಪರೀಕ್ಷಾ ಕೇಂದ್ರದ ಸಮೀಪ ಅಧಿಕೃತ ನಿಲುಗಡೆ ಇಲ್ಲದಿದ್ದರೂ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಬಸ್ ನಿಲ್ಲಿಸಲು ಚಾಲಕರಿಗೆ ನಿರ್ದೇಶನ.
- ಟ್ರಿಪ್ ರದ್ದು ಇಲ್ಲ: ಪರೀಕ್ಷಾ ದಿನಗಳಲ್ಲಿ ಯಾವುದೇ ಬಸ್ ಟ್ರಿಪ್ಗಳನ್ನು ರದ್ದು ಮಾಡದೆ ಕಡ್ಡಾಯ ಕಾರ್ಯಾಚರಣೆ ನಡೆಸುವಂತೆ ಸೂಚನೆ.
ವಿದ್ಯಾರ್ಥಿಗಳಿಗೆ ದೊಡ್ಡ ನೆರವು
ಬಿಎಂಟಿಸಿಯ ಈ ನಿರ್ಧಾರವು ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆರ್ಥಿಕ ಭಾರ ಕಡಿಮೆ ಮಾಡುವುದರ ಜೊತೆಗೆ, ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ನೆರವಾಗಲಿದೆ.
ದೇಶ
ಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಕೇಂದ್ರ ಅನುಮತಿ ನಿರೀಕ್ಷೆ: ಡಿ.ಕೆ. ಶಿವಕುಮಾರ್
ಬೆಂಗಳೂರು: ಕೇಂದ್ರ ಸರ್ಕಾರ ಅಗತ್ಯ ಅನುಮತಿ ನೀಡಿದರೆ ಕರ್ನಾಟಕ ಸರ್ಕಾರ ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಬಾಕಿ ಯೋಜನೆಗಳನ್ನು ಜಾರಿ ಮಾಡಲಿದೆ ಎಂದು ಡಿಸಿಎಂ D. K. Shivakumar ವಿಶ್ವಾಸ ವ್ಯಕ್ತಪಡಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆ (IISc)ಯ ಜೆಜೆ ಟಾಟಾ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ (ICDS) ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಸಹಕಾರ ಸಿಗುವ ಭರವಸೆ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆ ಜಾರಿಗೆ ಸಿದ್ಧತೆ
Mekedatu ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಯೋಜನೆ ಪರವಾಗಿದೆ. ಕೇಂದ್ರ ಅನುಮತಿ ದೊರೆತ ಕೂಡಲೇ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದರು. ಈ ಯೋಜನೆಯಿಂದ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಸುಮಾರು 400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ – ರೈತರಿಗೆ ಪರಿಹಾರ
Krishna River ಮೇಲ್ದಂಡೆ ಯೋಜನೆ ವಿಚಾರದಲ್ಲಿ 2013ರ ಕಾಯ್ದೆಯಂತೆ ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ. 2025ರ ಡಿಸೆಂಬರ್ ವೇಳೆಗೆ 1.72 ಲಕ್ಷ ಎಕರೆ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಅಣೆಕಟ್ಟು ಸುರಕ್ಷತೆ ರಾಷ್ಟ್ರದ ಆದ್ಯತೆ
ಅಣೆಕಟ್ಟುಗಳು ದೇಶದ ಶಕ್ತಿ ಹಾಗೂ ಪ್ರಗತಿಯ ಪ್ರತೀಕವಾಗಿದ್ದು, ಭಾರತದಲ್ಲಿ ಸುಮಾರು 6,500 ಅಣೆಕಟ್ಟುಗಳಿವೆ. ವಿಶ್ವದಲ್ಲಿ ಅತಿ ಹೆಚ್ಚು ಅಣೆಕಟ್ಟುಗಳಿರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 232 ಅಣೆಕಟ್ಟುಗಳಿದ್ದು, ಅವುಗಳಲ್ಲಿ ಬಹುಪಾಲು 25 ವರ್ಷಕ್ಕಿಂತ ಹಳೆಯದಾಗಿದೆ.
ಕೇಂದ್ರ ಸರ್ಕಾರವು ವಿಶ್ವ ಬ್ಯಾಂಕ್ ನೆರವಿನೊಂದಿಗೆ ಜಾರಿಗೊಳಿಸಿರುವ Dam Rehabilitation and Improvement Project (DRIP) ಯೋಜನೆಯಡಿ ರಾಜ್ಯದಲ್ಲಿ 58 ಅಣೆಕಟ್ಟುಗಳ ದುರಸ್ತಿಗೆ ಸುಮಾರು 1,500 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಣೆಕಟ್ಟುಗಳ ಬಳಿ ಪ್ರವಾಸೋದ್ಯಮಕ್ಕೆ ಮನವಿ
ಅಣೆಕಟ್ಟುಗಳ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಸಡಿಲಗೊಳಿಸಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
“ಜಲವೇ ಸಂಪತ್ತು, ಜಲವೇ ಇಂಧನ, ಜಲವೇ ಜೀವನ” ಎಂದು ಹೇಳಿದ ಅವರು, ಅಣೆಕಟ್ಟು ಸುರಕ್ಷತೆ ವಿಚಾರದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಬದ್ಧತೆ ವ್ಯಕ್ತಪಡಿಸಿದರು.
-
ಚುನಾವಣೆ1 hour agoGBA ವಾರ್ಡ್ಗಳಲ್ಲಿ ಬೂತ್ ಹಂಚಿಕೆ ಗೊಂದಲ: ತಿದ್ದುಪಡಿಸದಿದ್ದರೆ ಸುಪ್ರೀಂ ಕೋರ್ಟ್ಗೆ ಮನವಿ – ಸಿ.ಎಂ. ಸತ್ಯನಾರಾಯಣ ಎಚ್ಚರಿಕೆ
-
ದೇಶ7 hours agoSHAKTI SCHEME : ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್: ಸಚಿವ ಸಂಪುಟದ ಮಹತ್ವದ ನಿರ್ಧಾರ
-
ದೇಶ6 hours agoಫುಟ್ಪಾತ್ನಲ್ಲಿ ಬೈಕ್ಗೆ ಮಹಿಳೆಯ ಅಡ್ಡಿ: ಕೇರಳದಲ್ಲಿ ವೈರಲ್ ವಿಡಿಯೋ
-
ದೇಶ6 hours agoRBI : ಸಾಲ ವಸೂಲಿಗೆ ಹೊಸ ನಿಯಮಗಳು: ಆರ್ಬಿಐ ಕಟ್ಟುನಿಟ್ಟಿನ ಮಾರ್ಗಸೂಚಿ
-
ದೇಶ8 hours agoBangladesh Election 2026: ಬಿಎನ್ಪಿ ಭರ್ಜರಿ ಗೆಲುವು, ತಾರಿಖ್ ರೆಹಮಾನ್ ಮುಂದಿನ ಪ್ರಧಾನಿ
-
ಕ್ರೀಡೆ5 hours agoBENGALURU : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ಗೆ ಒಪ್ಪಿಗೆ: 35 ಸಾವಿರ ಜನ ಮಿತಿ, ಭದ್ರತೆಗೆ ಸಮಿತಿ
-
ದೇಶ7 hours agoದೇವನಹಳ್ಳಿ ಸಮೀಪ ಭೀಕರ ರಸ್ತೆ ಅಪಘಾತ: 7 ಮಂದಿ ದುರ್ಮರಣ
-
ದೇಶ4 hours agoಶಾಂಘೈನಲ್ಲಿ ದೈತ್ಯ ಸಿಂಕ್ಹೋಲ್: ರಸ್ತೆ ಕುಸಿದು ವಾಹನಗಳು ಒಳಗೆ, ಭಯಾನಕ ವಿಡಿಯೋ ವೈರಲ್
