Connect with us

ಬೆಂಗಳೂರು

ಬಿಬಿಎಂಪಿ ಚುನಾವಣೆ ದಿನಾಂಕ ಶೀಘ್ರವೇ ಘೋಷಣೆ: ರೆಡಿಯಾಗಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟ ಡಿಸಿಎಂ ಡಿಕೆಶಿ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸದ್ದಿಲ್ಲದೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಿದ್ಧತೆ ಶುರು ಮಾಡಿಕೊಂಡಿದೆ. ಈ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಚುನಾವಣೆಗೆ ಅಣಿಯಾಗುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾದ ಎಚ್‌.ಎಸ್‌. ಮಂಜುನಾಥ್‌ ಅವರನ್ನು ನಗರದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ಗುರುವಾರ ಅಭಿನಂದಿಸಿ ಮಾತನಾಡಿದ ಶಿವಕುಮಾರ್‌, ”ಬಿಬಿಎಂಪಿ ಚುನಾವಣೆಯನ್ನು ಯಾವ ತಿಂಗಳು ನಡೆಸಲಾಗುತ್ತದೆ ಎಂಬ ಬಗ್ಗೆ ಕೋರ್ಟ್‌ಗೆ ತಿಳಿಸಲು ಸರಕಾರ ತಯಾರಿ ಮಾಡಿಕೊಂಡಿದೆ. ಪಾಲಿಕೆ ಚುನಾವಣೆ ಶೀಘ್ರವೇ ಘೋಷಣೆಯಾಗಲಿದ್ದು, ಸಿದ್ಧರಾಗಿ,” ಎಂದರು.

”ಪಾಲಿಕೆ ಚುನಾವಣೆ ಸಂಬಂಧ ಸದ್ಯದಲ್ಲೇ ಪಕ್ಷದ ಪದಾಧಿಕಾರಿಗಳು ಹಾಗೂ ಪ್ರಮುಖರ ಸಭೆ ನಡೆಸಲಾಗುತ್ತಿದ್ದು, ಪ್ರತಿ ಬೂತ್‌ ಮಟ್ಟದಲ್ಲಿ ಸಿದ್ಧತೆ ಆಗಬೇಕು. ಯುವ ಕಾಂಗ್ರೆಸ್‌ ಕಾರ್ಯಕರ್ತರು ತಕ್ಷಣದಿಂದ ಕೆಲಸ ಆರಂಭಿಸಬೇಕು,” ಎಂದು ಸೂಚಿಸಿದರು.

”ರಾಜ್ಯದ ಇತರೆ ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೂ ಸಜ್ಜಾಗಬೇಕು. ಇನ್ನು 2 ತಿಂಗಳಲ್ಲಿ ಪಂಚಾಯಿತಿ ಚುನಾವಣೆ ಬರುವ ಸಾಧ್ಯತೆಯಿದೆ. ಈ ಕುರಿತು ಕೋರ್ಟ್‌ನಲ್ಲೂ ಅಫಿಡವಿಟ್‌ ಹಾಕಲಾಗುತ್ತಿದೆ,” ಎಂದು ಹೇಳಿದರು.

25ಕ್ಕೆ ಸುಪ್ರೀಂ ಕೋರ್ಟ್‌ ವಿಚಾರಣೆ
ರಾಜ್ಯದ ಪ್ರಮುಖ ಹಾಗೂ ಬೃಹತ್‌ ಪಾಲಿಕೆಗಳಲ್ಲಿ ಬಿಬಿಎಂಪಿ ಸೇರಿದೆ. ಕಳೆದ 5 ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆದಿಲ್ಲ. ಇದರಿಂದ ರಾಜಧಾನಿಯಲ್ಲಿ ಮೂಲಸೌಕರ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಫೆಬ್ರವರಿ 25ರಂದು ವಿಚಾರಣೆ ನಡೆಯಲಿದ್ದು, ಪಾಲಿಕೆ ಚುನಾವಣೆಗೆ ಕಾಂಗ್ರೆಸ್‌ ಮೊದಲ ಹೆಜ್ಜೆ ಇರಿಸಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್‌ ಅವರು ಕೊಟ್ಟಿರುವ ಹೇಳಿಕೆಯಿಂದ ಕಾಂಗ್ರೆಸ್‌ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಬಿಬಿಎಂಪಿ ಚುನಾವಣೆ ನಡೆಸುವುದು ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ಬೇಕಾಗಿಲ್ಲ ಎಂದೇ ಹೇಳಲಾಗುತ್ತಿತ್ತು. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಬಿಬಿಎಂಪಿ ಚುನಾವಣೆಯನ್ನು ನಡೆಸಿಲ್ಲ. ಒಂದಿಲ್ಲೊಂದು ಕಾರಣ ನೀಡಿ ಚುನಾವಣೆಯನ್ನು ಮುಂದೂಡುತ್ತಲ್ಲೇ ಬಂದಿವೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿರ್ಣಾಯಕ ತೀರ್ಪು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ, ಕಾಂಗ್ರೆಸ್‌ ಒಲ್ಲದ ಮನಸ್ಸಿನಿಂದಲೇ ಚುನಾವಣೆಗೆ ಸಿದ್ಧತೆ ಶುರು ಮಾಡಿದೆ.

ಬೆಂಗಳೂರು

ಪತ್ನಿ ಬಳಿಯೂ ರಾಜಕೀಯ ಮಾತಾಡಲ್ಲ, ಪರಂ ಗರಂ!

ಬೆಂಗಳೂರು: ಮಂಗಳೂರಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳ ಬಳಿಕ ಇತ್ತೀಚಿಗೆ ಆರ್‍ಸಿಬಿ ತಂಡ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಜನ ಉಸಿರು ಚೆಲ್ಲಿದ್ದಾರೆ,
ನಿರಂತರವಾಗಿ ಕಾನೂನು ವ್ಯವಸ್ಧೆ ಹದಗೆಡುತ್ತಿದೆ, ಗೃಹ ಸಚಿವ ಜಿ.ಪರಮೇಶ್ವರ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳ ಆಗ್ರಹ ಬೆನ್ನಲ್ಲೇ ತಮಗಿರುವ ಗೃಹ ಇಲಾಖೆ ಖಾತೆ ಬದಲಾಯಿಸಿ ಎಂದು ಪರಮೇಶ್ವರ್ ಅವರು ಕೇಳಿಕೊಂಡಿದ್ದಾರೆ ಎಂಬ ವದಂತಿಗೆ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ,
ಏನೇ ಇದ್ದರೂ ನನ್ನ ಬಳಿಯೇ ಸ್ಪಷ್ಟನೇ ಕೇಳಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ನಾನು ನನ್ನ ಪತ್ನಿ ಬಳಿಯೂ ಯಾವತ್ತೂ ರಾಜಕೀಯ ಮಾತನಾಡಲ್ಲ, ಹೀಗಿರವಾಗ ಈ ವದಂತಿ ಏಕೆ? ಖಾತೆ ಬದಲಾವಣೆ ಅಂತಾ ನಿಮಗೆ ಯಾರು ಹೇಳಿದ್ದಾರೆ? ಏನೇ ಇದ್ದರೂ ನನ್ನ ಬಳಿ ಮಾಹಿತಿ ಪಡೆಯಿರಿ ಎಂದಿದ್ದಾರೆ,
ನಾನು ಸಾಫ್ಟ್ ಆಗಿಯೇ ನಡೆದುಕೊಂಡಿದ್ದೇನೆ, ಏನೇ ಕೇಳಿ ನಾನೇ ಉತ್ತರ ಕೊಡುತ್ತೇನೆ, ಸುಮ್ಮನೇ ಒಬ್ಬರ ವ್ಯಕ್ತಿತ್ವದ ಕೊಲೆ ಮಾಡಬಾರದು, ಅದು ಯಾರಿಗೂ ಶೋಭೆ ತರಲ್ಲ, ಖಾತೆ ಬದಲಾಯಿಸಿ ಎಂದು ಸಿಎಂ ಹೇಳಿದ್ದಾರೆ ಎಂಬ ಸುದ್ದಿ ಸುಳ್ಳು, ಈ ರೀತಿ ಹೇಳಬೇಡಿ, ಇಂತಹ ವದಂತಿಯಿಂದ ನಮ್ಮ ಮತದಾರರು ಅಭಿಮಾನಿಗಳಿಗೆ ತಪ್ಪಾಗಿ ಸಂದೇಶ ಹೋಗುತ್ತದೆ, ಇದೇ ಖಾತೆಯನ್ನೇ ನೀಡಿ ಎಂದು ನಾನು ಯಾರಿಗೂ ಕೇಳಿಲ್ಲ, ಕಾಲ್ತುಳಿತ ದುರಂತದಿಂದ ಎಲ್ಲರಿಗೂ ನೋವಾಗಿದೆ, ಇದರ ಮಧ್ಯೆ ಖಾತೆ ಬದಲಾವಣೆ ಎಂಬ ಸಂಗತಿ ಸತ್ಯಕ್ಕೆ ದೂರವಾದದ್ದು ಎಂದು ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.

Continue Reading

ಬೆಂಗಳೂರು

ಚಿನ್ನಸ್ವಾಮಿ ಸ್ಟೇಡಿಯಂ ಸೇನೆ ಜಾಗ, ವಶಕ್ಕೆ ಪಡೆಯಿರಿ! ಪ್ರಧಾನಿಗೆ ಪತ್ರ ಬರೆಯಲು ಮುಂದಾದ ಸಂಘಟನೆ!

ಬೆಂಗಳೂರು: ಆರ್‍ಸಿಬಿ ತಂಡದ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದ ಘಟನೆಯಲ್ಲಿ 11 ಜನರ ಸಾವಿನ ದುರಂತ ಇಡೀ ಸರ್ಕಾರಕ್ಕೆ ಮುಜುಗರವುಂಟು ಮಾಡಿದೆ, ಇನ್ನೊಂದೆಡೆ ಪ್ರತಿಪ್ಕಷಗಳು ಮಾತ್ರವಲ್ಲ ಹೈಕೋರ್ಟ್ ಸಹ ಘಟನೆ ಟೀಕಿಸಿ ರಾಜ್ಯ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದೆ,
ರಾಜ್ಯಕ್ಕೆ ಈ ಘಟನೆ ಕಪ್ಪು ಚುಕ್ಕೆಯಾಗಿರುವ ಬೆನ್ನಲ್ಲೇ ಇದೀಗ ಚಿನ್ನಸ್ವಾಮಿ ಸ್ಟೇಡಿಯಂ ಸ್ಧಳಾಂತರದ ಬಗ್ಗೆ ಚರ್ಚೆಗಳೂ ಆರಂಭವಾಗಿದೆ, ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು ಕಡಿಮೆ ಸಾರ್ಮಥ್ಯವಿರುವ ಕ್ರಿಕೆಟ್ ಕ್ರೀಡಾಂಗಣವನ್ನು ಬೇರೆಡೆಗೆ ಸ್ಧಳಾಂತರಿಸುವ ಬಗ್ಗೆ ಸರ್ಕಾರ ಗಮನಹರಿಸಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಈ ವಿಷಯ ಸರ್ಕಾರ ಪರಿಶೀಲಿಸಲಿದೆ, ಯಾವ ಸರ್ಕಾರದ ಅವಧಿಯಲ್ಲಿಯೂ ಇಂತಹ ಅಹಿತಕರ ಘಟನೆ ನಡೆಯಬಾರದು, ವೈಯಕ್ತಿಕವಾಗಿ ಈ ಘಟನೆ ಸರ್ಕಾರಕ್ಕೆ ನೋವು ತಂದಿದೆ ಎನ್ನುತಲೇ ಸ್ಧಳಾಂತರದ ಸುಳಿವು ನೀಡಿದ್ದರು,
ಇದೀಗ ಮಹತ್ವದ ಬೆಳವಣಿಗೆ ಎಂಬಂತೆ ಚಿನ್ನಸ್ವಾಮಿ ಸ್ಟೇಡಿಯಂ ಸ್ಧಳಾಂತರಿಸುವಂತೆ ಕೋರಿ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ನಿರ್ಧರಿಸಿದೆ, ಕ್ರೀಡಾಂಗಣವಿರುವ ಜಾಗ ಭಾರತೀಯ ಸೇನೆಗೆ ಸೇರಿದ್ದು, ಈ ಸ್ಧಳ ವಶಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿಸಿದ್ದೇವೆ ಎಂದು ಸಂಘಟನೆ ತಿಳಿಸಿದೆ, ಈ ಕುರಿತು ಮಾತನಾಡಿರುವ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಶೆಟ್ಟಿ ಚಿನ್ನಸ್ವಾಮಿ ಸ್ಟೇಡಿಯಂ ಸೇನೆಗೆ ಸೇರಿದ ಜಾಗ, 18.50 ಎಕರೆ ಈ ಜಾಗವಾಗಿದೆ, ಇದು ಆರ್ಮಿಗೆ ಸೇರಿದ್ದು, ನಗರದಿಂದ ಇದನ್ನು ಸ್ಧಳಾಂತರಿಸಲಿ, ಸ್ಟೇಡಿಯಂ ನಿಂದಲೇ ಟ್ರಾಫಿಕ್ ಸಮಸ್ಯೆಯೂ ಆಗುತ್ತಿದೆ, ಹೀಗಾಗಿ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವರಿಗೆ ಪತ್ರ ಬರೆದು ಈ ಕುರಿತು ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ,

Continue Reading

ಬೆಂಗಳೂರು

ಆರೋಗ್ಯ ಇಲಾಖೆಯಿಂದ ಗಂಭೀರ ರೋಗಿಗಳಿಗೆ ಉಚಿತ ಒಪಿಡಿ ಸೇವೆ: ಇನ್ಮುಂದೆ ಮನೆ ಬಾಗಿಲಿಗೆ ಚಿಕಿತ್ಸೆ!

ಕರ್ನಾಟಕ ಆರೋಗ್ಯ ಇಲಾಖೆಯು ಬಡವರಿಗೆ, ಕ್ಯಾನ್ಸರ್ ಪೀಡಿತರಿಗೆ, ವಯೋವೃದ್ಧರಿಗೆ ಮತ್ತು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮನೆ ಬಾಗಿಲಿಗೆ ಉಚಿತ ಒಪಿಡಿ (OPD) ಸೇವೆ ಒದಗಿಸಲು ಹೊಸ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ, ಸಿವಿ ರಾಮನ್ ನಗರದ ಸಾರ್ವಜನಿಕ ಆಸ್ಪತ್ರೆಯಿಂದ ಮೊಬೈಲ್ ಆಸ್ಪತ್ರೆ ಮಾದರಿಯಲ್ಲಿ ಚಿಕಿತ್ಸೆ ಆರಂಭವಾಗಿದೆ. ಈ ಕಾರ್ಯಕ್ರಮವು ಆರೋಗ್ಯ ಕ್ಷೇತ್ರದಲ್ಲಿ ಸಮಾಜದ ದುರ್ಬಲ ವರ್ಗಕ್ಕೆ ಗುಣಮಟ್ಟದ ಚಿಕಿತ್ಸೆಯನ್ನು ತಲುಪಿಸುವ ಗುರಿಯನ್ನು ಹೊಂದಿದೆ.

ಯೋಜನೆಯ ವಿಶೇಷತೆಗಳೇನು?

ರಾಜ್ಯದಲ್ಲಿ ಮೊದಲ ಬಾರಿಗೆ, ಕ್ಯಾನ್ಸರ್, ಹೃದಯ ಸಮಸ್ಯೆ, ಬ್ರೇನ್ ಹೆಮರೇಜ್ ಮತ್ತು ಇತರ ಗಂಭೀರ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಆರೋಗ್ಯ ಇಲಾಖೆಯು ಮನೆಗೆ ತೆರಳಿ ಉಚಿತ ಒಪಿಡಿ ಸೇವೆ ಒದಗಿಸಲಿದೆ. ಸಿವಿ ರಾಮನ್ ನಗರದ ಸಾರ್ವಜನಿಕ ಆಸ್ಪತ್ರೆಯಿಂದ ಈ ಯೋಜನೆಯನ್ನು ಪೈಲಟ್ ಯೋಜನೆಯಾಗಿ ಆರಂಭಿಸಲಾಗಿದೆ. ಈ ಸೇವೆಯಿಂದ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡದೆಯೇ ತಮ್ಮ ಮನೆಯ ಬಳಿಯೇ ಚಿಕಿತ್ಸೆ ಪಡೆಯಬಹುದು.

ಗಂಭೀರ ರೋಗಿಗಳಿಗೆ ಆಸ್ಪತ್ರೆಗೆ ತೆರಳುವುದು ಕಷ್ಟಕರವಾಗಿರುತ್ತದೆ. ಆಸ್ಪತ್ರೆಯಲ್ಲಿ ಕಾಯುವ ಸಾಲುಗಳು, ದೀರ್ಘ ಕಾಯುವಿಕೆ, ಮತ್ತು ಆರ್ಥಿಕ ಒತ್ತಡದಿಂದ ಬಳಲುವವರಿಗೆ ಈ ಯೋಜನೆಯು ತುರ್ತು ಚಿಕಿತ್ಸೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ, ಮೊಬೈಲ್ ಆಸ್ಪತ್ರೆಗಳ ಮೂಲಕ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ನೇರವಾಗಿ ರೋಗಿಗಳ ಮನೆಗೆ ತೆರಳಿ ಚಿಕಿತ್ಸೆ ನೀಡಲಿದ್ದಾರೆ.

ಪ್ರಸ್ತುತ, ಸಿವಿ ರಾಮನ್ ನಗರದಿಂದ ಐದಕ್ಕೂ ಹೆಚ್ಚು ಪ್ರದೇಶಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಬೆಂಗಳೂರಿನ ಇತರ ಪ್ರದೇಶಗಳಿಗೆ ಮತ್ತು ರಾಜ್ಯದ ಇತರ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆಯಿದೆ ಎಂದು ಸಿವಿ ರಾಮನ್ ನಗರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್ ತಿಳಿಸಿದ್ದಾರೆ.

ಈ ಯೋಜನೆಯಿಂದ ಬಡವರಿಗೆ, ವಯೋವೃದ್ಧರಿಗೆ, ಮತ್ತು ಗಂಭೀರ ರೋಗಿಗಳಿಗೆ ಆರ್ಥಿಕ ಹೊರೆಯಿಲ್ಲದೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಲಿದೆ. ಒಬ್ಬ ರೋಗಿಯ ತಾಯಿ ಆಶಾದೇವಿ, “ಈ ಸೇವೆಯಿಂದ ಬಡವರಿಗೆ ತುಂಬಾ ಉಪಯೋಗವಾಗಲಿದೆ. ಸರ್ಕಾರ ಈ ಯೋಜನೆಯನ್ನು ಎಲ್ಲೆಡೆ ವಿಸ್ತರಿಸಬೇಕು,” ಎಂದು ಒತ್ತಾಯಿಸಿದ್ದಾರೆ.

ಯೋಜನೆಯ ಪ್ರಯೋಜನಗಳು:
  • ಉಚಿತ ಚಿಕಿತ್ಸೆ: ಕ್ಯಾನ್ಸರ್, ಹೃದಯ ಸಮಸ್ಯೆ, ಬ್ರೇನ್ ಹೆಮರೇಜ್ ಇತ್ಯಾದಿ ಗಂಭೀರ ರೋಗಿಗಳಿಗೆ ಉಚಿತ ಒಪಿಡಿ ಸೇವೆ.
  • ಮನೆ ಬಾಗಿಲಿಗೆ ಸೇವೆ: ಆಸ್ಪತ್ರೆಗೆ ತೆರಳುವ ತೊಂದರೆ ತಪ್ಪಿಸಲು ಮೊಬೈಲ್ ಆಸ್ಪತ್ರೆ ಮಾದರಿ.
  • ದುರ್ಬಲ ವರ್ಗಕ್ಕೆ ಒತ್ತು: ಬಡವರು, ವಯೋವೃದ್ಧರು, ಮತ್ತು ಗಂಭೀರ ರೋಗಿಗಳಿಗೆ ಆದ್ಯತೆ.
  • ತುರ್ತು ಚಿಕಿತ್ಸೆ: ಆಸ್ಪತ್ರೆಯ ಕಾಯುವಿಕೆಯಿಂದ ರೋಗಿಗಳಿಗೆ ಮುಕ್ತಿ.
Continue Reading

Trending