Connect with us

ಬೆಂಗಳೂರು

ಕನ್ನಡದ ಒಂದೇ ಒಂದು ಸಿನಿಮಾ (Cinema) ಹಿಟ್ ಲಿಸ್ಟ್ ಸೇರಿಲ್ಲ Special Report

ಕನ್ನಡದ ಮಾರ್ಕೆಟ್ ನ ಕಬ್ಜಾ ಮಾಡ್ಕೊತಿದ್ದಾವಾ ಪರಭಾಷೆ ಸಿನಿಮಾಗಳು? ಮಲಯಾಳಂ ಸಿನಿಮಾಗಳು (Malayalam Cinema) ಗಳಿಸ್ತಿವೆ ಕೋಟಿ ಕೋಟಿ ಹಣ? ಈ ವರ್ಷ ಕನ್ನಡದ ಒಂದೇ ಒಂದು ಸಿನಿಮಾ (Cinema) ಹಿಟ್ ಲಿಸ್ಟ್ ಸೇರಿಲ್ಲ. ಆ ಕುರಿತ ಆ ಸ್ಪೆಷಲ್ ರಿಪೋರ್ಟ್ ಇಲ್ಲಿದೆ .

ಕನ್ನಡ ನೆಲದಲ್ಲಿ ಕನ್ನಡಿಗನೇ ಸಾರ್ವಭೌಮ. ಈ ಮಾತು ಸಿನಿಮಾ ವಿಚಾರದಲ್ಲಿ ಸುಳ್ಳಾಗ್ತಿದೆ. ಕನ್ನಡಿಗರು ಕನ್ನಡ ಸಿನಿಮಾಗಳತ್ತ ಬೆನ್ನು ಮಾಡಿ ಕೂತಿದ್ದಾರೆ. ಅದರಲ್ಲೂ ಥಿಯೇಟರಿಗೆ ಬರಲು ಜಪ್ಪಯ್ಯ ಅಂದ್ರೂ ಒಪ್ಪುತ್ತಿಲ್ಲ ಕನ್ನಡ ಸಿನಿರಸಿಕರು.

ಪರಿಣಾಮ ಈ ವರ್ಷ ಶುರುವಾಗಿ ನಾಲ್ಕು ತಿಂಗಳಾದ್ರೂ ಒಂದೇ ಒಂದು ಕನ್ನಡ ಸಿನಿಮಾ ಹಿಟ್ ಲಿಸ್ಟ್ ಸೇರಿಲ್ಲ. ಬಾಕ್ಸಾಫೀಸ್ ನಲ್ಲಿ ಝಣ ಝಣ ಕಾಂಚಾಣ ಎಣಿಸಿಲ್ಲ.

ಹೌದು, 2025 ಸ್ಯಾಂಡಲ್ ವುಡ್ ಪಾಲಿಗೆ ದುಸ್ವಪ್ನವಾಗಿದೆ. ಎಷ್ಟು ಒಳ್ಳೆಯ ಸಿನಿಮಾ ಕೊಟ್ರೂ ಜನ ಬರ್ತಿಲ್ಲ. ಇನ್ನೆಂಥ ಸಿನಿಮಾ ಕೊಡಬೇಕು ಗುರು ಅಂತ ಸಿನಿಮಾ ಮಂದಿ ತಲೆ ಕೆರೆದುಕೊಳ್ಳುವಂತೆ ಮಾಡಿದೆ.

ಜನವರಿಯಿಂದ ಏಪ್ರಿಲ್ ಕೊನೆಯ ತನಕ ಕನ್ನಡದ 80 ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲಿ ಛೂಮಂತರ್, ಯುದ್ಧಕಾಂಡ, ಫಾರೆಸ್ಟ್ ನಂತಹ ಸಿನಿಮಾಗಳು ಪಾಸಿಟಿವ್ ರಿಪೋರ್ಟ್ ಪಡ್ಕೊಂಡಿವೆ. ಪರ್ವಾಗಿಲ್ಲ ಒಮ್ಮೆ ನೋಡಬಹುದು ಎಂಬ ಟಾಕ್ ಪಡ್ಕೊಂಡಿವೆ.. ಆದ್ರೆ ರಿಸಲ್ಟ್ ಮಾತ್ರ ಶೂನ್ಯ.

ಅತ್ಯಧಿಕ ಗಳಿಕೆಯೇ 6 ಕೋಟಿಯಾ?

ಕನ್ನಡದ ಸಿನಿಮಾವೊಂದು ಈ ವರ್ಷ ಹೈಯೆಸ್ಟ್ ಗಳಿಕೆ ಕಂಡಿದೆ ಅಂದ್ರೆ? ಅದು ಶರಣ್ ನಟನೆಯ ಛೂಮಂತರ್ ಸಿನಿಮಾ. ಈ ಸಿನಿಮಾ 5 ರಿಂದ 6 ಕೋಟಿ ಗಳಿಸಿದೆ ಎನ್ನಲಾಗ್ತಿದೆ. ಇದುವೆ ಈ ವರ್ಷದ ಹೈಯೆಸ್ಟ್ ಗಳಿಕೆ ಇಲ್ಲಿತನಕ ಅಂದ್ರೆ? ಅದು ನಿಜಕ್ಕೂ ದುರಂತವೇ ಸರಿ.

ಕನ್ನಡ ಸಿನಿಮಾಗಳ ಕಡೆ ಮಾತ್ರ ಯಾಕೆ ನಿರಾಸಕ್ತಿ?

ಇದು ಕನ್ನಡ ನೆಲದಲ್ಲಿ ಕನ್ನಡ ಸಿನಿಮಾಗಳಿಗೆ ಮಾತ್ರ ನಿರಾಸಕ್ತಿ. ಆದ್ರೆ ಇದೇ ಕನ್ನಡ ಮಣ್ಣಲ್ಲಿ ಪರಭಾಷೆಯ ಸಿನಿಮಾಗಳು ಕೋಟಿ ಕೋಟಿಯನ್ನ ಲೂಟಿ ಮಾಡ್ತಾ ಇವೆ.. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ? ಮೋಹನ್ ಲಾಲ್ ನಟನೆಯ ಎಂಪುರಾನ್ ಸಿನಿಮಾ.. ಈ ಸಿನಿಮಾ ಬಗ್ಗೆ ಅಂತಹ ಪಾಸಿಟಿವ್ ಟಾಕ್ ಏನು ಕೇಳಿ ಬರಲಿಲ್ಲ.. ನೋಡಿದವರೆಲ್ಲಾ ಬಯ್ಕೊಂಡೇ ಆಚೆ ಬಂದ್ರು.. ಆದ್ರೂ ಸಹ ಈ ಸಿನಿಮಾ ಕರ್ನಾಟಕದಲ್ಲಿಯೇ 15 ಕೋಟಿ ಹಣ ಗಳಿಸಿದೆ.. ಹಂಗಂತ ಕೇವಲ ಮಲಯಾಳಿಗಳು ಮಾತ್ರ ಈ ಸಿನಿಮಾವನ್ನ ನೋಡಿಲ್ಲ.. ಕನ್ನಡಿಗರು ಸಹ ಮುಗಿಬಿದ್ದು ನೋಡಿದ್ದಾರೆ.

ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ ಪರಭಾಷೆ ಸಿನಿಮಾ

ಅಷ್ಟೇ ಅಲ್ಲದೆ ರಿಸೆಂಟಾಗಿ ಬಿಡುಗಡೆಯಾದ ತುಡರುಮ್ ಎಂಬ ಸಿನಿಮಾ ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಬಿಡುಗಡೆಯಾದ 9 ದಿನಗಳಾದ್ರೂ ಸಹ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.

ಬೆಂಗಳೂರಿನಲ್ಲಿಯೇ ತುಡರುಮ್ ಮಲಯಾಳಂ ವರ್ಷನ್ 300 ಪ್ಲಸ್ ಶೋ ಪ್ರದರ್ಶನ ಕಾಣ್ತಿದೆ. ಅಷ್ಟೂ ಶೋಸ್ ಫಾಸ್ಟ್ ಫಿಲ್ಲಿಂಗ್ ಆಗ್ತಿವೆ ಅಂದ್ರೆ? ಕರ್ನಾಟಕ ನೆಲದಲ್ಲಿ ಪರಭಾಷೆ ಸಿನಿಮಾಗಳ ಅಬ್ಬರ ಹೇಗಿದೆ ಎಂಬುದಕ್ಕೆ ಸಾಕ್ಷಿ.

ಕನ್ನಡ ಸಿನಿಮಾಗೆ ಮಾತ್ರ ನೀರಸ ಪ್ರತಿಕ್ರಿಯೆ

ಹಾಗೆ ಅಜಿತ್ ನಟನೆಯ ಗುಡ್ ಬ್ಯಾಡ್ ಅಗ್ಲಿ, ವೆಂಕಟೇಶ್ ನಟನೆಯ ಸಂಕ್ರಾತಿಕಿ ವಸ್ತುನ್ನಾಮ್, ನಾನಿ ನಟನೆಯ ಹಿಟ್3 ಸಿನಿಮಾಗಳು ಸಹ ಕರ್ನಾಟಕದಲ್ಲಿ ಒಳ್ಳೆಯ ಗಳಿಕೆಯನ್ನ ಕಾಣ್ತಿವೆ.. ಆದ್ರೆ ಕನ್ನಡ ಸಿನಿಮಾಗಳು ಮಾತ್ರ ಯಾವುದೇ ಪೈಪೋಟಿಯನ್ನ ಕೊಡಲಾಗದೆ ನೀರಸ ಪ್ರತಿಕ್ರಿಯೆಯನ್ನ ಪಡ್ಕೊಳ್ತಿವೆ.

ಕರ್ನಾಟಕದ ಎಷ್ಟೋ ಸಿನಿಮಾ ಮಂದಿರಗಳು ಹಾಕಲು ಒಳ್ಳೆಯ ಕನ್ನಡ ಸಿನಿಮಾಗಳಿಲ್ಲದೆ. ಅನಿವಾರ್ಯವಾಗಿ ಪರಭಾಷೆ ಸಿನಿಮಾಗಳಿಗೆ ಮಣೆ ಹಾಕುವ ನಿರ್ಧಾರಕ್ಕೆ ಬಂದಿವೆ.. ಇಷ್ಟೆಲ್ಲಾ ಆದ್ರೂ ಸಹ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಾಗಲಿ, ಕಲಾವಿದರ ಸಂಘವಾಗಲಿ, ನಿರ್ಮಾಪಕರ ಸಂಘವಾಗಲಿ ಮುಂದೇನು ಮಾಡಬೇಕು ಎಂಬ ಚಿಂತನೆ ನಡೆಸಿದಂತೆ ಇಲ್ಲ.

ಕನ್ನಡ ಸಿನಿಮಾಗಳ ಈ ಸ್ಥಿತಿಗೆ ಈ ಗತಿಗೆ ಪ್ಯಾನ್ ಇಂಡಿಯಾ ಎಂಬ ಟ್ರೆಂಡ್ ನ ಹಿಂದೆ ಬಿದ್ದಿದ್ದೇ ಕಾರಣ. ಸ್ಟಾರ್ ನಟರು ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡ್ಕಂಡು ಕಾಲಹರಣ ಮಾಡ್ತಿರೋದೆ ಕಾರಣ ಎಂಬುದು ಸಿನಿರಂಗದಲ್ಲಿಯೇ ಕೇಳಿ ಬರ್ತಿರೋ ಅಪಸ್ವರ. ಸದ್ಯಕ್ಕಂತೂ ಕನ್ನಡ ಚಿತ್ರರಂಗಕ್ಕೆ ಯಾವುದೇ ಆಶಕಿರಣ ಕಾಣಿಸ್ತಾ ಇಲ್ಲ. ಸದ್ಯದ ಪರಿಸ್ಥಿತಿ ಕಂಡು ದೊಡ್ಡ ದೊಡ್ಡವರೇ ಹೆದರುವಂತಹ ಪರಿಸ್ತಿತಿ ಇದೆ. ಹಾಗೆ ಕನ್ನಡ ಸಿನಿಮಾಗಳು ಅಂದ್ರೆ ಸ್ಯಾಟ್ ಲೈಟ್ ರೈಟ್ಸ್ ಸೇಲಾಗ್ತಿಲ್ಲ. ಒಟಿಟಿಗೆ ಕೇಳೋರೆ ಇಲ್ಲ.

ಹಿಂಗಾದ್ರೆ ಹೆಂಗೆ ಗುರು? ಇದಕ್ಕೆ ಶಾಸ್ವತ ಪರಿಹಾರ ಕಂಡು ಹಿಡಿಯೋ ನಿಟ್ಟಿನಲ್ಲಿ ಚಿತ್ರರಂಗ ಒಮ್ಮತದಿಂದ ಕಾರ್ಯಕ್ರಮವನ್ನ ರೂಪಿಸಬೇಕಿದೆ.

ಬೆಂಗಳೂರು

ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ ₹50,000 ಸಹಾಯಧನ: ಜಮೀರ್ ಅಹ್ಮದ್ ಘೋಷಣೆ

ಬೆಂಗಳೂರು:
ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಸಾಮೂಹಿಕ ವಿವಾಹಗಳಿಗೆ ಇನ್ಮುಂದೆ ಸರ್ಕಾರದಿಂದ ₹50,000 ಸಹಾಯಧನ ಸಿಗಲಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಘೋಷಿಸಿರುವ ಬಜೆಟ್ ಯೋಜನೆಗೆ ಈಗ ಅನುಮೋದನೆ ಲಭಿಸಿದ್ದು, ಈ ನಿಟ್ಟಿನಲ್ಲಿ ಬಡ ಅಲ್ಪಸಂಖ್ಯಾತರಿಗೆ ಸಹಾಯ ಮಾಡಲು ಸರ್ಕಾರ ಸಜ್ಜಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು:
ಮೌಲಾನಾ ಅಬ್ದುಲ್ ಕಲಾಂ ಸ್ಕೂಲ್‌ ಸೇರಿದಂತೆ ಪ್ರತಿಭಾವಂತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಗುತ್ತಿದೆ. ಈಗಾಗಲೇ 214 ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಲ್ಯಾಪ್‌ಟಾಪ್ ವಿತರಣೆ ನಡೆಸಲಾಗಿದೆ.

ಮದರಸಾಗಳಲ್ಲಿ ಕನ್ನಡ ಕಲಿಕೆ:
ಮದರಸಾಗಳಲ್ಲಿ ಕನ್ನಡ ಕಲಿಕೆ ಆರಂಭಿಸುವ ಯೋಜನೆಯೊಂದಿಗೆ, ಮೊದಲ ಹಂತದಲ್ಲಿ 200 ಮೌಲ್ವಿಗಳನ್ನು ಆಯ್ಕೆ ಮಾಡಲಾಗಿದೆ. ಮೂವರು ತಿಂಗಳಲ್ಲಿ ಅವರಿಗೆ ಕನ್ನಡ ಭಾಷಾ ತರಬೇತಿ ನೀಡಲಾಗುವುದು.

2,000 ಮದರಸಾಗಳಿಗೆ ಕನ್ನಡ ಪಾಠ್ಯಕ್ರಮ:
ರಾಜ್ಯದಲ್ಲಿ 2 ಸಾವಿರ ಮದರಸಾಗಳಿಗೆ ಕನ್ನಡ ಕಲಿಕೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಅಲ್ಪಸಂಖ್ಯಾತ ಆಯೋಗ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅಧ್ಯಕ್ಷ ಯು. ನಿಸಾರ್ ಅಹಮದ್ ಹೇಳಿದ್ದಾರೆ. very soon ಈ ಪಾಠ್ಯಕ್ರಮ ಮುದ್ರಣಕ್ಕೂ ಕ್ರಮ ಜರಗಲಿದೆ.

Continue Reading

ಬೆಂಗಳೂರು

ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಸೆನ್ಸೇಷನ್: ಶ್ರಾವಣದ ಹಬ್ಬಕ್ಕೂ ಮುನ್ನ ಧನಲಕ್ಷ್ಮೀ ವರ!

ಬೆಂಗಳೂರು: ಶ್ರಾವಣ ತಿಂಗಳು ಅಂದ್ರೆ ಬಂಗಾರದ ತಿಂಗಳು. ಮನೆಮಾಲೀಕರಿಗೆ ವರಮಹಾಲಕ್ಷ್ಮೀ ಹಬ್ಬ, ಕನ್ನಡ ಚಿತ್ರರಂಗಕ್ಕೆ “ಸು ಫ್ರಮ್ ಸೋ” ಚಿತ್ರದ ಯಶಸ್ಸು! ರಾಜ್ ಬಿ.ಶೆಟ್ಟಿ ಅಭಿನಯದ ಈ ಹಾರರ್-ಕಾಮಿಡಿ ಸಿನಿಮಾ ಇದೀಗ ಮೂರನೇ ವಾರದಲ್ಲೂ ಭರ್ಜರಿಯಾಗಿ ಓಡುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹವಾ ಸೃಷ್ಟಿಸಿದೆ.

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಂಟೆಂಟ್ ಹೊಂದಿರುವ ಸಿನಿಮಾಗಳಿಗೆ ಅಭಿಮಾನಿಗಳ ಮೆಚ್ಚುಗೆ ಹೆಚ್ಚಾಗುತ್ತಿದೆ. ‘ಎಕ್ಕ’, ‘ಜೂನಿಯರ್’ ನಂತರ ‘ಸು ಫ್ರಮ್ ಸೋ’ ಕೂಡ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
75 ಲಕ್ಷ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಈಗಾಗಲೇ ₹25 ಕೋಟಿ ಕಲೆಕ್ಷನ್ ಮಾಡಿದ್ದು, ಶೀಘ್ರದಲ್ಲೇ ₹50 ಕೋಟಿ ಕ್ಲಬ್ ಸೇರುವ ಲಕ್ಷಣವಿದೆ.

ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್, ಕೇರಳ ಹಾಗೂ ವಿದೇಶಗಳಲ್ಲೂ ರಿಲೀಸ್ ಆದ ಈ ಸಿನಿಮಾ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಪಡೆಯುತ್ತಿದೆ. ರಾಜ್ ಬಿ.ಶೆಟ್ಟಿ ಹಾಗೂ ನಿರ್ದೇಶಕ ಜೆ.ಪಿ. ತುಮಿನಾಡ್ ಅವರ ಶ್ರದ್ಧೆ ಫಲ ನೀಡಿದ್ದು, “ಬಂದರೋ ಬಂದರು.. ಬಾವ ಬಂದರು” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.

ಇನ್ನು ಮಲಯಾಳಂ ಡಬ್ಬಿಂಗ್ ಆಗಿ ಆಗಸ್ಟ್ 1ರಂದು ಬಿಡುಗಡೆಗೊಂಡ ‘ಸು ಫ್ರಮ್ ಸೋ’ ಚಿತ್ರ, ಕೊಚ್ಚಿಯಲ್ಲಿ ಒಂದೇ ದಿನ 8 ಸಾವಿರ ಟಿಕೆಟ್ ಮಾರಾಟ ಮಾಡಿದ ದಾಖಲೆ ಸ್ಥಾಪಿಸಿದೆ. ಆದುದರಿಂದ, ಚಿತ್ರದ ಬಯೋಪಿಕ್ ಮತ್ತಷ್ಟು ಭಾಷೆಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ.

Continue Reading

ಬೆಂಗಳೂರು

ವೇತನ ವಿವಾದದಲ್ಲಿ ಸಿಎಂ ಸ್ಪಷ್ಟನೆ: 14 ತಿಂಗಳ ಹಿಂಬಾಕಿಗೆ ಮಾತ್ರ ಸರ್ಕಾರ ಸಿದ್ಧ

ಬೆಂಗಳೂರು: ಸಾರಿಗೆ ನೌಕರರ 38 ತಿಂಗಳ ವೇತನ ಹಿಂಬಾಕಿ ಪಾವತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. “ಈ ಬೇಡಿಕೆ ಸಮಂಜಸವಲ್ಲ. ಸರ್ಕಾರ ಕೇವಲ 14 ತಿಂಗಳ ಹಿಂಬಾಕಿಗೆ ಸಿದ್ಧ” ಎಂದು ಅವರು ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಂಧಾನ ಸಭೆಯಲ್ಲಿ ತಿಳಿಸಿದ್ದಾರೆ.

2020ರಿಂದ 2023ರ ಫೆಬ್ರವರಿವರೆಗಿನ ಬಾಕಿ ವೇತನ ಪಾವತಿಗೆ ನೌಕರ ಸಂಘಗಳು ಒತ್ತಾಯಿಸಿದ್ದರೊಂದಿಗೆ, 2024ರಿಂದ ನೂತನ ವೇತನವನ್ನೂ ಜಾರಿಗೆ ತರುವಂತೆ ಒತ್ತಾಯಿಸಲಾಗಿದೆ. ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, “ನಿಗಮಗಳ ಆರ್ಥಿಕ ಪರಿಸ್ಥಿತಿ ಮತ್ತು ಹಿಂದಿನ ಸರ್ಕಾರದ ಆದೇಶಗಳ ದೋಷಗಳನ್ನು ಪರಿಗಣಿಸಿ 14 ತಿಂಗಳ ವೇತನ ಹಿಂಬಾಕಿಗೆ ಸಮ್ಮತಿಯಿದೆ,” ಎಂದು ಸ್ಪಷ್ಟಪಡಿಸಿದರು.

ವೇತನ ಪರಿಷ್ಕರಣೆ ಪಶ್ಚಾತ್ಪಟ
2016ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 12.5% ವೇತನ ಹೆಚ್ಚಳ ಜಾರಿಗೆ ಬಂದಿತ್ತು. ಆದರೆ 2020ರ ಕೋವಿಡ್ ಕಾರಣದಿಂದ ಆ ವೇಳೆಗೆ ಯಾವುದೇ ಪರಿಷ್ಕರಣೆ ಆಗಿರಲಿಲ್ಲ. ನಂತರದ ಕಾಂಗ್ರೆಸ್ ಸರ್ಕಾರದಲ್ಲಿ ಶ್ರೀನಿವಾಸ ಮೂರ್ತಿ ಸಮಿತಿ ಶಿಫಾರಸ್ಸಿನಂತೆ 2022ರ ಜೂನ್‌ 01ರಿಂದ 2023ರ ಫೆಬ್ರವರಿವರೆಗೆ ಹಿಂಬಾಕಿ ಪಾವತಿ ಮಾಡಲು ತೀರ್ಮಾನಿಸಲಾಗಿತ್ತು.

ಸರ್ಕಾರದ ಆರ್ಥಿಕ ಹೊಣೆಗಾರಿಕೆ
ಸಿದ್ದರಾಮಯ್ಯ ಅವರು ಹೇಳಿದ್ದಾರೆ: “ನಾವು ಅಧಿಕಾರಕ್ಕೆ ಬಂದಾಗ ನಿಗಮಗಳಿಗೆ ಒಟ್ಟಾರೆ ₹4000 ಕೋಟಿ ಸಾಲ ಇತ್ತು. 2018 ರಲ್ಲಿ ಈ ಮೊತ್ತ ಕೇವಲ ₹14 ಕೋಟಿ ಮಾತ್ರ ಇತ್ತು. ಯಾವುದೇ ನಿಗಮ ಲಾಭದಲ್ಲಿ ಇಲ್ಲ.” ಅಂತಹ ಪರಿಸ್ಥಿತಿಯಲ್ಲಿ ಎಲ್ಲಾ ನೌಕರರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಂಘದ ಚುನಾವಣೆ ಮತ್ತು ಮುಂದಿನ ಕ್ರಮ
ಸಾರಿಗೆ ನೌಕರರ ಸಂಘದ ಚುನಾವಣೆ ಹಾಗೂ ಬೇಡಿಕೆಗಳ ಕುರಿತಂತೆ ಸರ್ಕಾರ ಪರಿಶೀಲನೆ ನಡೆಸಲಿದ್ದು, ಮಾತುಕತೆ ಮೂಲಕ ಎಲ್ಲ ಅಹವಾಲುಗಳನ್ನು ಬಗೆಹರಿಸಲು ಸಿದ್ಧವಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

Continue Reading

Trending