ರಾಜಕೀಯ
ಬಿಟ್ರೆ ವೀರಪ್ಪನ್ನನ್ನೂ ದೇವರು ಮಾಡಿ ಮಲೈ ಮಹದೇಶ್ವರನನ್ನು ದೆವ್ವ ಮಾಡುತ್ತಾರೆ
ಮೈಸೂರು: ಮಹಿಷ ದಸರಾ ಮಾಡಲು ಬಿಟ್ರೆ ವೀರಪ್ಪನ್ನನ್ನೂ ದೇವರು ಮಾಡ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದಾರೆ, ಮೈಸೂರಿನಲ್ಲಿ ಮಾಧ್ಯಮ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಷಾ ದಸರಾಂದAತ ವಿಕೃತಿಗಳನ್ನು ಈಗಲೇ ಸದೆ ಬಡಿಯಬೇಕು, ಈಗಲೇ ಇವರನ್ನು ಕಂಟ್ರೋಲ್ ಮಾಡಬೇಕು ಇಲ್ಲದೆ ಇದ್ದರೆ ಮಲೈಮಹದೇಶ್ವರ್ ಬೆಟ್ಟಕ್ಕೆ ಹೋಗಿ ನರಹಂತಕ ವೀರಪ್ಪನ್ ನಮ್ಮ ದೇವರು, ನಮ್ಮ ಮೂಲ ಪುರುಷ ಅಂತ ಹೇಳಿ ಮಲೈ ಮಹದೇಶ್ವರನನ್ನು ದೆವ್ವ ಮಾಡುತ್ತಾರೆ ಎಂದು ಕಿಡಿ ಕಾರಿದ್ದಾರೆ,
ಆಕ್ಟೋಬರ್ ೧೩ರಂದು ನಡೆಯಲಿರುವ ಚಾಮುಂಡಿ ಬೆಟ್ಟ ಚಲೋದ ಮಾಹಿತಿ ನೀಡಿದ ಅವರು ಅ ೧೩ರಂದು ಬೆಳೆಗ್ಗೆ ೮ ಗಂಟಗೆ ಚಲೋ ಚಾಮುಂಡಿ ಬಟ್ಟ ಜಾಥಾ ನಡೆಸಲಿದೆ, ಐದು ಸಾವಿರಕ್ಕೂ ಹೆಚ್ಚು ಜನ ಜಾಥಾದಲ್ಲಿ ಭಾಗಿಯಾಗಲಿದ್ದಾರೆ, ಚಾಮುಂಡಿ ದೇವಿಗೆ ಪೂಜೆ ಮಾಡಿ ಮಾಹಿಷಾಸುರನ ಮುಂದೆ ಕುಳಿತು ಕೊಳ್ಳುತ್ತೇವೆ ಎಂದು ಹೇಳಿದರು, ಲಲಿತಾ ನಾಯಕ್ ಸಚಿವೆ ಆಗಿದ್ದಾಗ ಅವರ ಮಗ ಅಂಬೇಡ್ಕರ್ ಪ್ರತಿಮೆಗೆ ಮದ್ಯ ಕುಡಿಸಲು ಹೋಗಿದ್ದ ಈ ರೀತಿ ಅಂಬೇಡ್ಕರ್ಗೆ ಅಪಮಾನ ಮಾಡಿದ ವ್ಯಕ್ತಿಯ ತಾಯಿಯನ್ನು ಮಹಿಷಾ ದಸರಾ ಉದ್ಘಾಟನೆಗೆ ಕೆಲವು ದಲಿತರು ಕರೆದು ಕೊಂಡು ಬರುತ್ತಿರುವುದು ಸರಿನಾ, ಎಂದು ಅವರು ಪ್ರಶ್ನ ಮಾಡಿದರು,
೫೦ ವರ್ಷದಿಂದ ಯಾವತ್ತಾದರೂ ಮಹಿಷಾ ದಸರಾ ಎಲ್ಲಿ ಮಾಡಿದ್ದಾರೆ, ಯಾರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ? ಮಹಿಷಾ ದಸರಾದಂಥ ವಿಕೃತಿಗಳನ್ನು ಈಗಲೇ ಸದೆ ಬಡಿಯಬೇಕು, ಇಲ್ಲದೆ ಇದ್ದರೆ ವೀರಪ್ಪನ್ ನಮ್ಮ ಮೂಲ ನಿವಾಸಿ ಅವನು ಪ್ರಕೃತಿ ರಕ್ಷಕ ಅಂತಾ ಕಥೆ ಕಟ್ಟಿ ದೇವರು ಮಾಡಿಬಿಡುತ್ತಾರೆ, ಮಲೈ ಮಹದೇಶ್ವರನನ್ನು ದೆವ್ವ ಮಾಡಿ ಬಿಡುತ್ತಾರೆ ಎಂದು ಹೇಳಿದರು,