Connect with us

ದೇಶ

ಆಸ್ಕರ್ 2026 ವಿಜೇತರ ಪಟ್ಟಿ ಪ್ರಕಟ: ‘ಸಿನ್ನರ್ಸ್’ ಮತ್ತು ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಸಿನಿಮಾಗಳಿಗೆ ದೊಡ್ಡ ಜಯ

Published

on

ಲಾಸ್ ಏಂಜಲೀಸ್: ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಲ್ಲೊಂದಾದ Academy Awards ಸಮಾರಂಭ ಈ ಬಾರಿ ಅಮೆರಿಕದ Dolby Theatre ನಲ್ಲಿ ಅದ್ದೂರಿಯಾಗಿ ನಡೆಯಿತು. 88ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಹಲವಾರು ಸಿನಿಮಾಗಳು ಮತ್ತು ಕಲಾವಿದರು ಪ್ರಶಸ್ತಿಗಳನ್ನು ಗೆದ್ದು ಗಮನ ಸೆಳೆದರು.

ಈ ಬಾರಿ Sinners ಸಿನಿಮಾ ಒಟ್ಟು 16 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದು, ಹಲವು ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. ಇದೇ ಚಿತ್ರಕ್ಕಾಗಿ ನಟ Michael B. Jordan ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ಇನ್ನೊಂದೆಡೆ One Battle After Another ಸಿನಿಮಾಗೂ ದೊಡ್ಡ ಯಶಸ್ಸು ದೊರೆತಿದ್ದು, ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ Sean Penn ಪ್ರಶಸ್ತಿ ಪಡೆದಿದ್ದಾರೆ. ಈ ಚಿತ್ರದ ನಟನೆಯ ಮೂಲಕ Cassandra Kulukundis ತಮ್ಮ ಮೊದಲ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ Amy Madigan ಅವರು Weapons ಚಿತ್ರದಿಗಾಗಿ ಪ್ರಶಸ್ತಿ ಪಡೆದಿದ್ದಾರೆ. ಅನಿಮೇಟೆಡ್ ವಿಭಾಗದಲ್ಲಿ K‑Pop Demon Hunters ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಇದರ ಜೊತೆಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ Paul Thomas Anderson ಅವರಿಗೆ ಲಭಿಸಿದೆ. ಅತ್ಯುತ್ತಮ ಮೂಲ ಸಂಗೀತ ವಿಭಾಗದಲ್ಲಿ Ludwig Göransson ಪ್ರಶಸ್ತಿ ಪಡೆದಿದ್ದಾರೆ.

ಇದೇ ವೇಳೆ Frankenstein ಚಿತ್ರಕ್ಕೆ ವಸ್ತ್ರ ವಿನ್ಯಾಸ, ಮೇಕಪ್ ಮತ್ತು ಪ್ರೊಡಕ್ಷನ್ ಡಿಸೈನ್ ಸೇರಿದಂತೆ ಹಲವು ತಾಂತ್ರಿಕ ವಿಭಾಗಗಳಲ್ಲಿ ಪ್ರಶಸ್ತಿಗಳು ಲಭಿಸಿವೆ.

ಒಟ್ಟಿನಲ್ಲಿ ಈ ಬಾರಿ ನಡೆದ ಆಸ್ಕರ್ 2026 ಸಮಾರಂಭದಲ್ಲಿ ಹಲವು ಹೊಸ ಸಿನಿಮಾಗಳು ಮತ್ತು ಕಲಾವಿದರು ಗಮನ ಸೆಳೆದಿದ್ದು, ಜಾಗತಿಕ ಸಿನಿ ಪ್ರೇಕ್ಷಕರ ಗಮನ ಸೆಳೆದಿವೆ.

ಕ್ರೀಡೆ

“ಇಲ್ಲಿಂದ ಶುರುವಾಗಿತ್ತು, ಇಲ್ಲೇ ಮುಗಿಯಿತು” – ನೈಮರ್‌ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಭಾವನಾತ್ಮಕ ವಿದಾಯ

Published

on

ಹೈಲೈಟ್ಸ್: ನಾರ್ವೆ ವಿರುದ್ಧದ ಸೋಲಿನ ಬಳಿಕ ಕಣ್ಣೀರಿಟ್ಟ ನೈಮರ್ | 80 ಗೋಲುಗಳೊಂದಿಗೆ ಬ್ರೆಜಿಲ್‌ನ ಸರ್ವಕಾಲದ ನಂ.1 ಗೋಲುಗಾರರಾಗಿ ವೃತ್ತಿಜೀವನ ಮುಕ್ತಾಯ | ಪೀಲೆ ಬಳಿಕ ನಾಲ್ಕು ವಿಶ್ವಕಪ್‌ಗಳಲ್ಲಿ ಗೋಲು ಬಾರಿಸಿದ ಎರಡನೇ ಬ್ರೆಜಿಲಿಯನ್ | ಥಿಯರಿ ಹೆನ್ರಿ, ಇಬ್ರಾಹಿಮೋವಿಚ್‌ರಿಂದ ಗೌರವ ನಮನ


ಬ್ರೆಜಿಲ್ ಫುಟ್‌ಬಾಲ್‌ನ ಒಂದು ಅಧ್ಯಾಯ ಅಂತಿಮಗೊಂಡಿದೆ. FIFA ವಿಶ್ವಕಪ್ 2026ರ ರೌಂಡ್ ಆಫ್ 16ರಲ್ಲಿ ನಾರ್ವೆ ವಿರುದ್ಧ ಬ್ರೆಜಿಲ್ 1-2 ಗೋಲುಗಳಿಂದ ಸೋತು ಟೂರ್ನಿಯಿಂದ ಆಚೆಗೆ ಬಿದ್ದ ಬೆನ್ನಲ್ಲೇ, ಸಾಂಬಾ ತಂಡದ ಮಹಾತಾರೆ ನೈಮರ್ ಜೂನಿಯರ್ ತಮ್ಮ ಅಂತಾರಾಷ್ಟ್ರೀಯ ಫುಟ್‌ಬಾಲ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಈ ಸುದ್ದಿ ಫುಟ್‌ಬಾಲ್ ಪ್ರಪಂಚದಾದ್ಯಂತ ಅಭಿಮಾನಿಗಳ ಕಣ್ಣಂಚಲ್ಲಿ ನೀರು ತರಿಸಿದೆ.

ಮೈದಾನದಲ್ಲೇ ಕುಸಿದು ಕಣ್ಣೀರಿಟ್ಟ ನೈಮರ್

ಅಮೆರಿಕದ ಈಸ್ಟ್ ರುದರ್‌ಫೋರ್ಡ್‌ನ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದ ಅಂತಿಮ ಬಿಗಿಲ್ ಬಾರಿಸಿದ ಕೂಡಲೇ, ಎಂದೂ ಅಳುಕದ ನೈಮರ್ ಮೈದಾನದಲ್ಲೇ ಕುಸಿದು ಕಣ್ಣೀರಿಟ್ಟರು. ಸಹ ಆಟಗಾರರು ಸುತ್ತುವರೆದು ಅವರನ್ನು ಸಮಾಧಾನಪಡಿಸುವ ದೃಶ್ಯ ಎಲ್ಲರ ಮನ ಕಲಕಿತು. ಬಳಿಕ ಬ್ರೆಜಿಲ್‌ನ ಗ್ಲೋಬೊ ಚಾನೆಲ್‌ಗೆ ಪ್ರತಿಕ್ರಿಯಿಸಿದ ನೈಮರ್, ತಾನು ಪ್ರಯತ್ನ ಪಟ್ಟೆ, ಆದರೆ ಇನ್ನಿಲ್ಲಿಗೆ ತನ್ನ ಪ್ರಯಾಣ ಮುಕ್ತಾಯ ಎಂದು ಭಾವುಕರಾಗಿ ಹೇಳಿಕೊಂಡರು. ತಾನು ಎಲ್ಲಿ ಆರಂಭಿಸಿದ್ದೆನೋ ಅಲ್ಲೇ ಮುಗಿಸುತ್ತಿರುವುದಾಗಿಯೂ ಅವರು ತಿಳಿಸಿದರು.

ಇದು ಕೇವಲ ಕಾಕತಾಳೀಯವಲ್ಲ — 2010ರ ಆಗಸ್ಟ್‌ನಲ್ಲಿ ಅಮೆರಿಕ ವಿರುದ್ಧದ ಸ್ನೇಹಪಂದ್ಯದಲ್ಲಿ ಬ್ರೆಜಿಲ್ ಪರ ಚೊಚ್ಚಲ ಗೋಲು ಬಾರಿಸುವ ಮೂಲಕ ಅಂತಾರಾಷ್ಟ್ರೀಯ ವೃತ್ತಿಜೀವನ ಆರಂಭಿಸಿದ್ದ ಅದೇ ಮೆಟ್‌ಲೈಫ್ ಸ್ಟೇಡಿಯಂನಲ್ಲಿ, 16 ವರ್ಷಗಳ ಬಳಿಕ ಅವರ ಪ್ರಯಾಣ ಅಂತ್ಯಗೊಂಡಿತು.

ಗಾಯದ ನೋವಿನ ನಡುವೆಯೂ ಕೊನೆಯ ಪೆನಾಲ್ಟಿ ಗೋಲು

ಬಲಗಾಲಿನ ನಿರಂತರ ಸ್ನಾಯು ಸಮಸ್ಯೆಯಿಂದ ಬಳಲುತ್ತಿದ್ದ 34 ವರ್ಷದ ನೈಮರ್, ಈ ವಿಶ್ವಕಪ್‌ನ ಐದು ಪಂದ್ಯಗಳಲ್ಲಿ ಕೇವಲ ಎರಡು ಬಾರಿ ಮಾತ್ರ ಮೈದಾನ ಪ್ರವೇಶಿಸಿದ್ದರು — ಸ್ಕಾಟ್ಲೆಂಡ್ ವಿರುದ್ಧ ಬದಲಿಯಾಗಿ ಬಂದು 15 ನಿಮಿಷ, ಮತ್ತು ನಾರ್ವೆ ವಿರುದ್ಧ 67ನೇ ನಿಮಿಷದಲ್ಲಿ ಪ್ರವೇಶ. ಆದರೆ ಈ ಚಿಕ್ಕ ಅವಕಾಶದಲ್ಲೇ ಇತಿಹಾಸ ಬರೆದರು. ಎರ್ಲಿಂಗ್ ಹಾಲೆಂಡ್‌ ಎರಡು ಗೋಲುಗಳ ಮೂಲಕ ಪಂದ್ಯವನ್ನು ನಾರ್ವೆ ಪಾಲಾಗಿಸಿದ ಬಳಿಕ, ಹೆಚ್ಚುವರಿ ಸಮಯದ 10ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಯಶಸ್ವಿಯಾಗಿ ಗೋಲಾಗಿ ಬದಲಿಸಿ ತಮ್ಮ ಬ್ರೆಜಿಲ್ ಜೆರ್ಸಿಯಲ್ಲಿನ ಅಂತಿಮ ಸ್ಪರ್ಶವನ್ನು ಗೋಲಿನೊಂದಿಗೆ ಮುಗಿಸಿದರು.

ಅಂಕಿ-ಅಂಶಗಳಲ್ಲಿ ನೈಮರ್ – ಬ್ರೆಜಿಲ್‌ನ ಸರ್ವಕಾಲದ ಶ್ರೇಷ್ಠ

ಈ ಒಂದೇ ಗೋಲಿನೊಂದಿಗೆ ನೈಮರ್ ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 80ಕ್ಕೆ ಹೆಚ್ಚಿಸಿಕೊಂಡು, ದಂತಕಥೆ ಪೀಲೆಗಿಂತ ಮೂರು ಗೋಲುಗಳ ಮುಂದೆ ಇರುವ ಬ್ರೆಜಿಲ್‌ನ ಸರ್ವಕಾಲದ ನಂ.1 ಗೋಲುಗಾರರಾಗಿ ವೃತ್ತಿಜೀವನ ಮುಗಿಸಿದರು. ಇದೇ ಗೋಲಿನ ಮೂಲಕ ಪೀಲೆ ಬಳಿಕ ನಾಲ್ಕು ಬೇರೆ ಬೇರೆ ವಿಶ್ವಕಪ್‌ಗಳಲ್ಲಿ (2014, 2018, 2022, 2026) ಗೋಲು ಬಾರಿಸಿದ ಎರಡನೇ ಬ್ರೆಜಿಲಿಯನ್ ಆಟಗಾರ ಎಂಬ ಗೌರವಕ್ಕೂ ಭಾಜನರಾದರು.

129 ಪಂದ್ಯಗಳಲ್ಲಿ ಬ್ರೆಜಿಲ್ ಜೆರ್ಸಿ ತೊಟ್ಟ ನೈಮರ್, ಅತಿ ಹೆಚ್ಚು ಪಂದ್ಯ ಆಡಿದವರ ಪಟ್ಟಿಯಲ್ಲಿ ಕಫುಗಿಂತ (142 ಪಂದ್ಯ) ಹಿಂದೆ ಎರಡನೇ ಸ್ಥಾನದಲ್ಲಿದ್ದಾರೆ. ಜೊತೆಗೆ 2012 ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು 2016 ರಿಯೊ ಒಲಿಂಪಿಕ್ಸ್‌ನಲ್ಲಿ ತಮ್ಮ ತಂಡವನ್ನು ಚಿನ್ನದ ಪದಕದತ್ತ ನಡೆಸಿದ ಕೀರ್ತಿಯೂ ಅವರಿಗಿದೆ.

2014ರ ವಿಶ್ವಕಪ್‌ನಲ್ಲಿ ಸ್ವದೇಶದಲ್ಲೇ ಪ್ರಶಸ್ತಿ ಗೆಲ್ಲುವ ಅವಕಾಶ ಗಾಯದಿಂದ ತಪ್ಪಿಹೋಗಿ, ಜರ್ಮನಿ ವಿರುದ್ಧದ ಚೊಚ್ಚಲ ಸೆಮಿಫೈನಲ್‌ನಲ್ಲಿ ತಂಡ 7-1ರ ಘೋರ ಸೋಲು ಕಂಡಿದ್ದನ್ನು ಅಭಿಮಾನಿಗಳು ಇಂದಿಗೂ ಮರೆತಿಲ್ಲ. ವಿಶ್ವಕಪ್ ಪ್ರಶಸ್ತಿ ಎಂಬ ಒಂದೇ ಗುರಿ ಎಂದೂ ನೈಮರ್‌ರಿಂದ ದೂರವೇ ಉಳಿಯಿತು, ಆದರೂ ನಾಲ್ಕು ವಿಶ್ವಕಪ್‌ಗಳಲ್ಲಿ ಪಾಲ್ಗೊಂಡ ಅವರ ಪ್ರಯಾಣ ಬ್ರೆಜಿಲ್ ಫುಟ್‌ಬಾಲ್ ಇತಿಹಾಸದ ಅವಿಭಾಜ್ಯ ಭಾಗ.

ಫುಟ್‌ಬಾಲ್ ದಿಗ್ಗಜರಿಂದ ಗೌರವ ನಮನ

ವಿದಾಯ ಸುದ್ದಿ ಹೊರಬರುತ್ತಿದ್ದಂತೆ ಫುಟ್‌ಬಾಲ್ ಲೋಕದ ಘಟಾನುಘಟಿಗಳು ನೈಮರ್‌ಗೆ ಗೌರವ ಸಲ್ಲಿಸಿದ್ದಾರೆ. ಫ್ರೆಂಚ್ ದಂತಕಥೆ ಥಿಯರಿ ಹೆನ್ರಿ, ನೈಮರ್ ಆಟದ ಶೈಲಿಯೇ ಒಂದು ಪೀಳಿಗೆಗೆ ಸ್ಫೂರ್ತಿಯಾಗಿತ್ತು ಎಂದು ಬಣ್ಣಿಸಿದ್ದಾರೆ. ಸ್ವೀಡನ್‌ನ ಮಹಾತಾರೆ ಝ್ಲಾಟಾನ್ ಇಬ್ರಾಹಿಮೋವಿಚ್, ಬಾರ್ಸಿಲೋನಾ ಮತ್ತು ಪಿಎಸ್‌ಜಿ ಎರಡು ಕ್ಲಬ್‌ಗಳಲ್ಲೂ ನೈಮರ್ ತೋರಿದ ಅಸಾಧಾರಣ ಕೌಶಲ್ಯ ಎಂದೂ ಮರೆಯಲಾಗದಂತಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ಯಾಲನ್ ಡಿ’ಓರ್ ಗೆಲ್ಲಲಾಗದ ಕೊರತೆಯ ಬಗ್ಗೆ ಪ್ರಸ್ತಾಪಿಸಿದ ಇಬ್ರಾಹಿಮೋವಿಚ್, ಇದು ಬ್ರೆಜಿಲ್ ಫುಟ್‌ಬಾಲ್‌ಗೆ ದುಃಖದ ಕ್ಷಣ ಎಂದೂ ಬಣ್ಣಿಸಿದ್ದಾರೆ.

ಈಗ ಬ್ರೆಜಿಲ್‌ಗೆ ಮುಂದೇನು?

ನೈಮರ್ ವಿದಾಯದ ಬಳಿಕ ಬ್ರೆಜಿಲ್ ತಂಡ ಸ್ಪಷ್ಟವಾಗಿ ಒಂದು ಪರಿವರ್ತನೆಯ ಘಟ್ಟದಲ್ಲಿ ನಿಂತಿದೆ. ಕೋಚ್ ಕಾರ್ಲೊ ಆಂಚೆಲೊಟ್ಟಿ, ತಂಡ ಇನ್ನು ಹೊಸ ಪೀಳಿಗೆಯ ಆಟಗಾರರ ಮೇಲೆ ಗಮನ ಕೇಂದ್ರೀಕರಿಸಬೇಕಿದೆ ಎಂದು ಸೂಚಿಸಿದ್ದಾರೆ. ವಿನಿಸಿಯಸ್ ಜೂನಿಯರ್, ಎಂಡ್ರಿಕ್‌ರಂತಹ ಯುವ ತಾರೆಯರ ಹೆಗಲ ಮೇಲೆ ಇನ್ನು ಸಾಂಬಾ ಫುಟ್‌ಬಾಲ್‌ನ ಭವಿಷ್ಯ ನಿಂತಿದೆ. ಆದರೆ ಒಂದು ಸತ್ಯ ಸ್ಪಷ್ಟ — ನೈಮರ್ ಬಿಟ್ಟುಹೋದ ಶೂನ್ಯವನ್ನು ತುಂಬುವುದು ಸುಲಭದ ಕೆಲಸವಲ್ಲ.

Continue Reading

ದೇಶ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮುಚ್ಚಳ: ಪುಣೆಗೆ ರೆಡ್ ಅಲರ್ಟ್ ಘೋಷಣೆ

Published

on

ಮುಂಬೈ: ಮಹಾರಾಷ್ಟ್ರದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಭಾರೀ ಮಳೆಯಿಂದ ಮುಂಬೈ (Mumbai) ಮತ್ತು ಪುಣೆ (Pune) ನಡುವಿನ ರಸ್ತೆ ಹಾಗೂ ರೈಲು ಸಂಪರ್ಕ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮುಂಜಾನೆ ಕರ್ಜತ್-ಲೋನಾವಾಲಾ (Karjat-Lonavala) ನಡುವಿನ ಬೋರ್ ಘಾಟ್ (Bhor Ghat) ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.

ಖಂಡಾಲಾ (Khandala) ಮತ್ತು ಮಂಕಿ ಹಿಲ್ (Monkey Hill) ನಡುವಿನ ರೈಲ್ವೆ ಹಳಿಗಳ ಮೇಲೆ ಬೃಹತ್ ಬಂಡೆಗಳು ಕುಸಿದು ಬಿದ್ದ ಪರಿಣಾಮ ಮೂರೂ ಪ್ರಮುಖ ರೈಲು ಮಾರ್ಗಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಇದರ ಪರಿಣಾಮವಾಗಿ ಡೆಕ್ಕನ್ ಕ್ವೀನ್ (Deccan Queen), ಸಿಂಹಗಡ ಎಕ್ಸ್‌ಪ್ರೆಸ್ (Sinhagad Express) ಸೇರಿದಂತೆ 16ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಸಾವಿರಾರು ಪ್ರಯಾಣಿಕರು ವಿವಿಧ ರೈಲು ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ.

ಇದೇ ವೇಳೆ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ಹೊಸ ಸುರಂಗ ಮಾರ್ಗದ ಸಮೀಪವೂ ಮಣ್ಣು ಕುಸಿದಿರುವ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು ಮುಚ್ಚಲಾಗಿದೆ. ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲೂ ಮಳೆ ನೀರು ತುಂಬಿಕೊಂಡಿದ್ದು, ವಾಹನಗಳು ಹಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿವೆ. ಹಲವೆಡೆ ಕಿಲೋಮೀಟರ್‌ಗಟ್ಟಲೆ ವಾಹನಗಳ ಸಾಲು ಕಂಡುಬಂದಿದೆ.

ಹವಾಮಾನ ಇಲಾಖೆ ಮುಂದಿನ ಕೆಲವು ಗಂಟೆಗಳ ಕಾಲ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಪುಣೆ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ. ಪರಿಸ್ಥಿತಿ ಸುಧಾರಿಸುವವರೆಗೆ ಸಾರ್ವಜನಿಕರು ಅನಗತ್ಯವಾಗಿ ಮುಂಬೈ-ಪುಣೆ ನಡುವೆ ಪ್ರಯಾಣ ಮಾಡಬಾರದು ಎಂದು ಪೊಲೀಸರು ಹಾಗೂ ಆಡಳಿತ ಎಚ್ಚರಿಕೆ ನೀಡಿದ್ದಾರೆ. ರಕ್ಷಣಾ ಸಿಬ್ಬಂದಿ ಭೂಕುಸಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ.

Continue Reading

ದೇಶ

ವಿದ್ಯಾರ್ಥಿಗಳಿಗೆ ಪಾಠವೇ? SIR ಕರ್ತವ್ಯವೇ? ದ್ವಂದ್ವದಲ್ಲಿ ಸರ್ಕಾರಿ ಶಾಲಾ ಶಿಕ್ಷಕರು

Published

on

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ Special Intensive Revision (SIR) ಅಥವಾ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕಾಗಿ ಸರ್ಕಾರಿ ಶಾಲಾ ಶಿಕ್ಷಕರನ್ನು ದೊಡ್ಡ ಪ್ರಮಾಣದಲ್ಲಿ ಬೂತ್ ಮಟ್ಟದ ಅಧಿಕಾರಿಗಳಾಗಿ (BLO) ನಿಯೋಜಿಸಿರುವುದು ಶಾಲಾ ಶಿಕ್ಷಣದ ಮೇಲೆ ಪರಿಣಾಮ ಬೀರುವ ಆತಂಕವನ್ನು ಹುಟ್ಟುಹಾಕಿದೆ. ಬೋಧನಾ ಕರ್ತವ್ಯ ಮತ್ತು ಚುನಾವಣಾ ಸಂಬಂಧಿತ ಜವಾಬ್ದಾರಿಗಳನ್ನು ಒಂದೇ ವೇಳೆ ನಿರ್ವಹಿಸಬೇಕಾದ ಕಾರಣ ಶಿಕ್ಷಕರು ತೀವ್ರ ಒತ್ತಡ ಎದುರಿಸುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬಹುತೇಕ ಶಿಕ್ಷಕರನ್ನು ಎಸ್‌ಐಆರ್ ಕಾರ್ಯಕ್ಕೆ ನಿಯೋಜಿಸಲಾಗಿದೆ. ಪರಿಣಾಮವಾಗಿ ಕೆಲವು ಶಾಲೆಗಳಲ್ಲಿ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಮಾತ್ರ ಉಳಿದಿದ್ದು, ಅವರು ಎಲ್ಲ ತರಗತಿಗಳಿಗೆ ಪಾಠ ಮಾಡುವುದರ ಜೊತೆಗೆ ಮಧ್ಯಾಹ್ನದ ಊಟ, ಹಾಲು, ಮೊಟ್ಟೆ, ಬಾಳೆಹಣ್ಣು ವಿತರಣೆ, ವಿದ್ಯಾರ್ಥಿಗಳ ಆನ್‌ಲೈನ್ ಹಾಜರಾತಿ ಹಾಗೂ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಬೇಕಾಗಿದೆ.

ಶಾಲಾ ಅವಧಿಯಲ್ಲೇ ಎಸ್‌ಐಆರ್ ಸಭೆಗಳಿಗೆ ಹಾಜರಾಗುವಂತೆ ವಾಟ್ಸಾಪ್ ಮೂಲಕ ಸೂಚನೆ ಬಂದಿರುವುದರಿಂದ ಯಾವ ಕರ್ತವ್ಯಕ್ಕೆ ಆದ್ಯತೆ ನೀಡಬೇಕು ಎಂಬ ಗೊಂದಲ ಶಿಕ್ಷಕರಲ್ಲಿ ಮೂಡಿದೆ. ಸಭೆಗೆ ಗೈರಾಗಿದ್ದರೆ ಶಿಸ್ತು ಕ್ರಮದ ಭೀತಿಯೂ ಎದುರಾಗುತ್ತಿದೆ ಎಂದು ಶಿಕ್ಷಕರು ಹೇಳುತ್ತಿದ್ದಾರೆ.

ಇನ್ನೊಂದೆಡೆ, ನಗರ ಪ್ರದೇಶಗಳಲ್ಲಿ ಮತದಾರರು ಆಗಾಗ್ಗೆ ಮನೆ ಬದಲಾಯಿಸುತ್ತಿರುವುದರಿಂದ ಮನೆ-ಮನೆ ಸಮೀಕ್ಷೆ ನಡೆಸುವುದು ಸವಾಲಾಗಿ ಪರಿಣಮಿಸಿದೆ. ಹಳೆಯ ಮತದಾರರ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಲು ಹೆಚ್ಚಿನ ಸಮಯ ಬೇಕಾಗುತ್ತಿದೆ.

ಕಡಿಮೆ ಶಿಕ್ಷಕರಿರುವ ಶಾಲೆಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಐವರು ಶಿಕ್ಷಕರಿರುವ ಶಾಲೆಯಲ್ಲಿ ನಾಲ್ವರನ್ನು ಎಸ್‌ಐಆರ್ ಕರ್ತವ್ಯಕ್ಕೆ ನಿಯೋಜಿಸಿರುವ ಉದಾಹರಣೆಗಳೂ ಇದ್ದು, ಉಳಿದ ಒಬ್ಬ ಶಿಕ್ಷಕರು ಹಲವು ತರಗತಿಗಳನ್ನು ಒಟ್ಟಿಗೆ ನಿರ್ವಹಿಸುತ್ತಿದ್ದಾರೆ. ಜೊತೆಗೆ ಕೆಲ ಶಿಕ್ಷಕರನ್ನು ತಮ್ಮ ಶಾಲೆಯಿಂದ 20 ಕಿ.ಮೀ.ಗೂ ಹೆಚ್ಚು ದೂರದ ಪ್ರದೇಶಗಳಿಗೆ ನಿಯೋಜಿಸಿರುವುದರಿಂದ ಪ್ರಯಾಣ ಹಾಗೂ ಸಮೀಕ್ಷಾ ಕಾರ್ಯದ ಒತ್ತಡವೂ ಹೆಚ್ಚಾಗಿದೆ.

Continue Reading

Trending