ಚುನಾವಣೆ
ಕೈಲಾಗದವನ ಕೊನೆ ಅಸ್ತ್ರ ಅಪಪ್ರಚಾರ ಮಾಡುವುದು ಮುನಿರತ್ನಗೆ ರಾಮಲಿಂಗರೆಡ್ಡಿ ಟಾಂಗ್

ಬೆಂಗಳೂರು: ಸೋಲುತ್ತೇವೆ ಅಂತಾ ಅವರಿಗೆ ಗೊತ್ತಾಗಿಯೇ ನಮ್ಮ ಅಭ್ಯರ್ಥಿ ರಾಮೋಜಿಗೌಡ ವಿರುದ್ಧ ಕೆಟ್ಟ ಹೆಸರು ತರಲು ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದರು,
ಜೂ.3 ರಂದು ನಡೆಯಲಿರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಪರಿಷತ್ ಚುನಾವಣೆ ನಿಮಿತ್ತ ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನೆಡಸಿ ಮಾತನಾಡಿ ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಮಹಾರಾಷ್ಟ್ರದವರು, ಬೆಳಗಾವಿಯಲ್ಲಿ ಓಟ್ ಪಡೆದವರು ಇಲ್ಲಿ ಬಂದು ಗೌಡ ಎಂದರೆ ಗೆಲ್ಲೋಕೆ ಆಗುತ್ತಾ ಅಂತಾ ನಿನ್ನೆ ಶಾಸಕ ಮುನಿರತ್ನ ವಾಗ್ದಾಳಿ ನಡೆಸಿದ್ದರು,
ಇದಕ್ಕೆ ಟಾಂಗ್ದ ಕೊಟ್ಟಿರುವ ರಾಮಲಿಂಗಾರೆಡ್ಡಿ ರಾಮೋಜಿ ಅವರ ಕಳೆದ 20 ರಿಂದ 30 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ, ಕೈಲಾಗದವ ಕೊನೆಯ ಅಸ್ತ್ರ ಅಪಪ್ರಚಾರ ಮಾಡುವುದು, ಹೀಗಾಗಿ ನಮ್ಮ ಅಭ್ಯರ್ಥಿ ವಿರುದ್ಧ ಈ ರೀತಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು,
ಈ ಬಾರಿ ಚುನಾವಣೆಯಲ್ಲಿ ತಮ್ಮ ಆರೂ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು, ಈ ಹಿಂದೆ ಬಿಜೆಪಿ ಸರ್ಕಾರವು ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಪರಿಹಾರ ಕೊಡಲಿಲ್ಲ, ಶಿಕ್ಷಕರಿಗೆ ಪಿಂಚಣಿ ವಿಚಾರದಲ್ಲಿ ಬಿಜೆಪಿ ತೊಂದರೆ ಕೊಟ್ಟಿದೆ ಎಂದರು,