ದೇಶ

ಬೆಲೆ ಏರಿ ಸಿದ್ದು ಅಷ್ಟೇ ಕಾಂಗ್ರೆಸ್ ಸಾಧನೆ – ಬಿಜೆಪಿ ಲೇವಡಿ!

ಬೆಂಗಳೂರು; ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಹಾಗೂ ತರಕಾರಿ ಬೆಲೆಗಳು ಏರಿಕೆಯಾಗುತ್ತಿರುವುದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ,
ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ದಿಢೀರನೆ ಏರಿಕೆಯಾಗಿವೆ, ಟೊಮ್ಯಾಟೋ ರೇಟ್ ಶತಕ ದಾಟಿದ್ರ, ಬೀನ್ಸ್ ಬೆಲೆ ಇನ್ನೂರು ರೂಪಾಯಿ ದಾಟಿದೆ, ಕಳೆದ ವಾರಕ್ಕಿಂತ ಈ ವಾರ ಬಹುತೇಕ ತರಕಾರಿ ದರ ದುಪ್ಪಟ್ಟು ಮೂರು ಪಟ್ಟು ಜಾಸ್ತಿಯಾಗಿದೆ, ಇದು ಶ್ರೀಸಾಮಾನ್ಯರ ಕೈ ಸುಟ್ಟಿದೆ,
ಬೆಲೆ ಏರಿಕೆ ವಿರುದ್ಧ ವ್ಯಕ್ತಪಡಿಸಿರುವ ಬಿಜೆಪಿ ತರಕಾರಿ ಬೆಲೆಗಳನ್ನು ಸೆಂಚುರಿ ಹೊಡೆ ಸಿದ್ದು, ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ಮಕಾಡೆ ಮಲಗಿ” ಸಿದ್ದು”, ಕರ್ನಾಟಕದಲ್ಲಿ ಅರಾಜಕತೆಯನ್ನು ಹೆಚ್ಚಿ”ಸಿದ್ದು” ಇದೇ ಸಿಎಂ ಸಿದ್ದರಾಮಯ್ಯ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ಸಾದಿ”ಸಿದ್ದು” ಎಂದು ಟೀಕಿಸಿದೆ, ಕಾಂಗ್ರೆಸ್ ಸರ್ಕಾರಗಳನ್ನು ಟೀಕಿಸುವ ಎರಡು ವಿಶೇಷ ವ್ಯಂಗ್ಯ ಚಿತ್ರಗಳನ್ನು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದೆ ಬಿಜೆಪಿ.

Trending

Exit mobile version