ದೇಶ

Breaking News ರಾಜಕಾರಣಿಗಳು ಗೋಲ್ಗಪ್ಪಾ ಮಾರಬೇಕಾ? ಸ್ವಾಮೀಜಿಗೆ ಕಂಗನಾ ತಿರುಗೇಟು,

ನವದೆಹಲಿ: ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ನಂಬಿಕೆ ದ್ರೋಹದ ಬಲಿಪಶು ಆಗಿದ್ದಾರೆ ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿಕೆ ನೀಡಿದ್ದರು, ಇದಕ್ಕೆ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರನೌತ್ ಗುರುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಬೆಂಬಲಿಸಿ ತಿರುಗೇಟು ನೀಡಿದ್ದಾರೆ,
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕಂಗನಾ, ಸ್ವಾಮಿ ಅವಿಮುಕ್ತೇಶ್ವರಾನಂದರು ಶಿಂಧೆ ಅವರನ್ನು ದೇಶದ್ರೋಹಿ ಎಂದು ಕರೆಯುವ ಮೂಲಕ ಎಲ್ಲರ ಭಾವನೆಗಳನ್ನು ನೋಯಿಸಿದ್ದಾರೆ ಎಂದಿದ್ದಾರೆ,
ರಾಜಕೀಯದಲ್ಲಿ ಮೈತ್ರಿ ಒಡಂಬಡಿಕೆಗಳು ಮತ್ತು ವಿಭಜನೆಯಾಗುವುದು ತೀರಾ ಸಾಮಾನ್ಯ ಮತ್ತು ರಾಜಕಾರಣಿಗಳು ರಾಜಕೀಯ ಮಾಡದೆ ಗೋಲ್ಗಪ್ಪಾ ಮಾರುತ್ತಾರಾ? ಎಂದು ಕಂಗನಾ ಎಕ್ಸ್ ಪೋಸ್ಟ್‍ನಲ್ಲಿ ಟಕ್ಕರ್ ನೀಡಿದ್ದಾರೆ,

Leave a Reply

Your email address will not be published. Required fields are marked *

Trending

Exit mobile version