ಬೆಂಗಳೂರು
ರಾಜ್ಯದಲ್ಲಿ ಅಧಿಕ ಮಳೆ-ತರಕಾರಿ ಹೂ ಬೆಲೆಯಲ್ಲಿ ಏರಿಕೆ

ಬೆಂಗಳೂರು: ರಾಜ್ಯಾದ್ಯಾಂತ ವರುಣನ ಆರ್ಭಟ ಹೋರಾಗಿದೆ, ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳಿಗೆ ಹಾನಿಯಾಗುತ್ತಿದ್ದು ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಹೂಗಳ ಬೆಲೆಯಲ್ಲಿ ಏರಿಕೆಯಾಗಿದೆ ಸೇವಂತಿಗೆ ಹೂವು ಇದೀಗ ಸಗಟು ಮಾರುಕಟ್ಟೆಯಲ್ಲಿಯೇ 250-300 ರೂಗೆ ಮಾರಟವಾಗುತ್ತಿದ್ದರೆ, ಚಿಲ್ಲರೆ ಮಾರಾಟಗಾರರು ಕಾಲು ಕೆ.ಜಿ ಸೇವಂತಿ ಹೂವಿಗೆ 100 ರೂ ಮಾರುತ್ತಿದ್ದಾರೆ, ಇನ್ನು ಕೆಜಿಗೆ 400 ರೂ ನಿಗದಿ ಮಾಡಲಾಗಿದೆ, ಸದ್ಯ ಕಾಕಡ 500, ಮಲ್ಲಿಗೆ 300, ಕನಕಾಂಬರ 800, ಗುಲಾಬಿ 200 ರೂ.ಗೆ ಮಾರಾಟವಾಗುತ್ತಿದೆ,
ಜೊತೆಗೆ ತರಕಾರಿಗಳ ಬೆಲೆಯೂ ಏರಿಕೆಯಗಿದ್ದು ಟೊಮೊಟೊ ದರ ಕೆಜಿಗೆ 100 ಸಮೀಪ ಬಂದು ನಿಂತಿದೆ, ಇನ್ನು ಉಳಿದ ಕ್ಯಾರೆಟ್, ಈರುಳ್ಳಿ ಬೆಲೆಯು ಜಾಸ್ತಿಯಾಗಿದೆ, ಹೆಚ್ಚು ಮಳೆಯಾಗುತ್ತಿರುವದರಿಂದ ತರಕಾರಿಗಳು ಕೊಳೆತು ಹೋಗುತ್ತಿದ್ದು, ಮಾರುಕಟ್ಟೆಗೆ ಹೆಚ್ಚು ತರಕಾರಿಗಳು ಪೂರೈಕೆಯಾಗುತ್ತಿಲ್ಲ,
ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದ್ರೆ ತರಕಾರಿಗಳ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ,