ಬೆಂಗಳೂರು

ಬಿಜೆಪಿ ಪಾದಯಾತ್ರೆಗೆ ಪ್ರತ್ಯುತ್ತರ ಕೊಡೋದು ಗೊತ್ತಿದೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಹೆಸರು ಕೇಳಿಬಂದಿರುವ ವಿಚಾರದಲ್ಲಿ ಬಿಜೆಪಿ ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷದವರು ಅವರವರ ರಾಜಕಾರಣ ಮಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ, ಬಿಜೆಪಿ ಪಾದಯಾತ್ರೆ ಮಾಡುವುದಾದ್ರೆ ಮಾಡಲಿ, ನಮ್ಮದೇನು ಅಭ್ಯಂತರವಿಲ್ಲ ನಾವು ಅದಕ್ಕೆ ಪ್ರತಿಯಾಗಿ ಕಾರ್ಯತಂತ್ರ ರೂಪಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ, ಜೆಡಿಎಸ್ ನಾಯಕ ಸಚಿವ ಕುಮಾರಸ್ವಾಮಿ ಪಾದಯಾತ್ರೆಯಿಂದ ಹಿಂದೆ ಸರಿದಿರುವ ಬಗ್ಗೆ ಮಾಧ್ಯಮದವರು ಕೇಳಿದಾಗ ಕುಮಾರಸ್ವಾಮಿಯವರಿಗೆ ಮತ್ತು ಅವರ ಪಕ್ಷಕ್ಕೆ ಅಸ್ತಿತ್ವದ ಪ್ರಶ್ನೆ ಎದುರಾಗುವ ಆತಂಕ ಇದೆ, ಅವರ ಅಸ್ತಿತ್ವನ್ನು ಅವರು ಕಾಪಾಡಿಕೊಳ್ಳುವುದಕ್ಕೆ ಈ ರೀತಿಯ ರಾಜಕೀಯ ಮಾಡುತ್ತಿದ್ದಾರೆ, ಮೈಸೂರು, ಮಂಡ್ಯಗಳಲ್ಲಿ ಬಿಜೆಪಿಗಿಂತ ಅವರದೇ ಪ್ರಭಾವ ಬೇರೆ ಇದೆ, ಬಿಜೆಪಿ ತಮಟೆ ಹೊಡೆದುಕೊಂಡು ನಾಯಕತ್ವ ವಹಿಸಿಕೊಳ್ಳುವುದಕ್ಕೆ ಅವರು ಬಿಡುತ್ತಾರಾ ಎಂದು ಡಿಸಿಎಂ ಪ್ರಶ್ನಿಸಿದ್ದಾರೆ,
ಮೊದಲು ನೀವು ಪೆನ್ ಡ್ರೈವ್ ಹಂಚಿದ್ದೀರೆಮದು ಆರೋಪಿಸಿದ್ದ ಕುಮಾರಸ್ವಾಮಿಯವರು ಈಗ ನೇರವಾಗಿ ಪ್ರೀತಂ ಗೌಡ ವಿರುದ್ಧ ಆರೋಪಿಸುತ್ತಿದ್ದಾರಲ್ವ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಈಗ ಅದೆಲ್ಲ ಬೇಡ ಈಗ ಬಿಜೆಪಿಯವರ ಪಾದಯಾತ್ರೆ ಏನುಮ ಎತ್ತ ಎಂಬ ಬಗ್ಗೆ ನಾವು ಗಮನ ಹರಿಸುತ್ತಿದ್ದು, ನಾವು ಸೂಕ್ತ ಉತ್ತರ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದರು,

Trending

Exit mobile version