ರಾಜಕೀಯ
ಬಿಜೆಪಿ ಆರೋಪಗಳ ಬಗ್ಗೆ ನಾವು ತಲೆಕಡಿಸಿಕೊಂಡಿಲ್ಲ-ಜಿ.ಪರಮೇಶ್ವರ್

ಮೈಸೂರು: ಮುಖ್ಯಮಂತ್ರಿ ಪತ್ನಿಗೆ ಮುಡಾ 14 ನಿವೇಶನ ಕೊಟ್ಟಿರುವ ಕಾರಣಕ್ಕೆ ಪಾದಯಾತ್ರೆ ಮಾಡುವುದಾಗಿ ಬಿಜೆಪಿ ಘೋಷಿಸಿತ್ತು, ಮುಖ್ಯಮಂತ್ರಿಯವರು ಸಿಎಂ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ಮುಡಾ ಮೇಲೆ ಪ್ರಭಾವ ಬೀರಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು, ನಾವು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಮತ್ತು ನಮ್ಮನ್ನು ಪ್ರಶ್ನಿಸುವ ಹಕ್ಕು ಅವರಿಗಿದೆ ಎಂಬ ಅರಿವು ನಮಗಿದೆ ಎಂದು ಕರ್ನಾಟಕ ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ,
ಅ.14 ಸೈಟ್ಗಳ ವಿಚಾರದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿಗೆ ವಿವರಣೆ ಕೇಳಿದರು, ನಾವು ಮೌನ ವಹಿಸಿದ್ದು, ವಿಚಾರಣೆ ಮತ್ತು ಕಾನೂನು ವ್ಯವಸ್ಧೆಯು ತನ್ನ ಕ್ರಮವನ್ನು ತೆಗೆದುಕೊಳ್ಳಲಿ, ಬಿಜೆಪಿ ಪಾದಯಾತ್ರೆ ಘೋಷಿಸಿದ ಸ್ಧಳಗಳನ್ನು ತಲುಪುವ ಮೊದಲ ನಾವು ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಾರಂಭಿಸಿದ್ದೇವೆ, ಬೃಹತ್ ರ್ಯಾಲ್ಯಯನ್ನು ಆಯೋಜಿಸಿದ್ದೇವೆ 1.5 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು,
ಮುಡಾ ಸೈಟ್ ಹಂಚಿಕೆ ಸಂಬಂಧ ಯಾವುದೇ ಪೇಪರ್ ಗಳಲ್ಲಿ ಸಿಎಂ ಸಿದ್ದರಾಮಯ್ಯನವರ ಸಹಿ ಇಲ್ಲ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಗೆ ಆರೋಪ ಮಾಡುತ್ತಿದ್ದಾರೆ, ಈ ಘಟನೆ ನಡೆದಾಗ ಬಿಜೆಪಿಯವರೇ ಆಡಳಿತ ನಡೆಸುತ್ತಿದ್ದರು, ಮುಡಾ ಮುಖ್ಯಸ್ಧರಾಗಿ ಬಿಜೆಪಿಯವರೇ ಕಾರ್ಯ ನಿರ್ವಹಿಸಿದ್ದರು ಎಂಬ ಸತ್ಯ ಭಾಗವಹಿಸಿದ್ದ ಜನರಿಗೆ ಗೊತ್ತಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ,