Connect with us

ದೇಶ

ಭಾನುವಾರದ ಪಂಚಾಂಗ, ಭವಿಷ್ಯ: ಇಂದು ಈ ರಾಶಿಯವರು ಎಚ್ಚರದಿಂದ ನಿರ್ಧಾರ ಕೈಗೊಳ್ಳಿ! – Sunday Horoscope

ಪಂಚಾಂಗ:

08-09-2024, ಭಾನುವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ದಕ್ಷಿಣಾಯಣ

ಮಾಸ: ಭಾದ್ರಪದ

ಪಕ್ಷ: ಶುಕ್ಲ

ತಿಥಿ: ಪಂಚಮಿ

ನಕ್ಷತ್ರ: ಸ್ವಾತಿ

ಸೂರ್ಯೋದಯ: ಮುಂಜಾನೆ 06:06 ಗಂಟೆಗೆ

ಅಮೃತಕಾಲ: ಮಧ್ಯಾಹ್ನ 03:19 ರಿಂದ 04:51 ಗಂಟೆವರೆಗೆ

ವರ್ಜ್ಯಂ: ಸಂಜೆ 06.15ರಿಂದ ರಾತ್ರಿ 07.50 ಗಂಟೆ ತನಕ

ದುರ್ಮುಹೂರ್ತಂ: ಮಧ್ಯಾಹ್ನ 04:30 ರಿಂದ 05:18 ಗಂಟೆ ವರೆಗೆ

ರಾಹುಕಾಲ: ಮಧ್ಯಾಹ್ನ 04:51ರಿಂದ 06:24 ಗಂಟೆ ತನಕ

ಸೂರ್ಯಾಸ್ತ: ಸಂಜೆ 06:24 ಗಂಟೆಗೆ

ರಾಶಿಫಲ:

ಮೇಷ : ಇಂದು ನೀವು ನಿಮ್ಮ ಪ್ರೀತಿಪಾತ್ರರನ್ನು ಸಂತೋಷಗೊಳಿಸಲು ಪ್ರಯತ್ನಿಸಬಹದು, ಮತ್ತು ಹೊಸ ರೀತಿಯಲ್ಲಿ ಅವರನ್ನು ಮನ ಒಲಿಸಲೂ ಬಯಸಬಹುದು. ನಿಮ್ಮ ಮಿತ್ರರು ಮತ್ತು ಬಂಧುಗಳಿಂದ ನೀವು ಅತ್ಯಂತ ಸಂತೋಷಗೊಳ್ಳದೇ ಇರಬಹುದು, ಆದರೆ ನೀವು ಸಂಜೆ ಪಾರ್ಟಿಗೆ ಹೋಗುವ ಮೂಲಕ ಹೊಸ ಮಿತ್ರರನ್ನು ಮಾಡಿಕೊಳ್ಳುತ್ತೀರಿ.

ವೃಷಭ : ಇಂದು, ನಿಮ್ಮ ಭಾವನೆಗಳು ಮತ್ತು ಅಭಿಪ್ರಾಯಗಳು ಉನ್ನತ ಮಟ್ಟದಲ್ಲಿರುತ್ತವೆ. ನಿಮಗೆ ಹತ್ತಿರದಲ್ಲಿರುವವರೊಂದಿಗೆ ಭಾವನಾತ್ಮಕ ಭೇಟಿಯ ದೃಢವಾದ ಸಾಧ್ಯತೆ ಇದೆ. ನೀವು ಈ ಕಾರ್ಯಕ್ರಮ/ಸಭೆಯಲ್ಲಿ ಇತರರಿಂದ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ.

ಮಿಥುನ : ನೀವು ಇಂದು ಸಂಪರ್ಕಕ್ಕೆ ಬರುವ ಜನರಿಗೆ ನಿಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಶಕ್ತರಾಗುತ್ತೀರಿ. ಇದು ಅನುಮೋದನೆ ಮತ್ತು ಸಂತೃಪ್ತಿ ನೀಡುತ್ತದೆ. ಈ ದಿನ ಒಟ್ಟಾರೆ ವಿನೋದ ಮತ್ತು ಮನರಂಜನೆಯಿಂದ ಕೂಡಿರುತ್ತದೆ.

ಕರ್ಕಾಟಕ : ನೀವು ಇಂದು ಅನಗತ್ಯ ಸನ್ನಿವೇಶಗಳನ್ನು ಎದುರಿಸಬಹುದು. ಇದರ ಫಲಿತಾಂಶದಿಂದ, ಸಂಕಟ ಅನುಭವಿಸುತ್ತೀರಿ. ಆದರೂ ನೀವು ನಿಮ್ಮ ಕುಶಲತೆಯಿಂದ ಅದರಿಂದ ಹೊರಬರುತ್ತೀರಿ. ಯಶಸ್ಸು ಸುಲಭವಾಗಿ ಪಡೆಯುವುದದಲ್ಲ ಎಂದು ನೆನಪಿನಲ್ಲಿರಿಸಿಕೊಳ್ಳಿ; ಅದಕ್ಕೆ ಕಠಿಣ ಪರಿಶ್ರಮ ಅಗತ್ಯ.

ಸಿಂಹ : ಹಳೆಯ ಸಹವರ್ತಿಗಳು ಮತ್ತು ಮಿತ್ರರ ಮರುಭೇಟಿ ಮತ್ತು ಹೊಸ ಸಂಪರ್ಕಗಳನ್ನು ಸಾಧಿಸಲು ಇದು ಒಳ್ಳೆಯ ದಿನ. ನಿಮ್ಮ ಮಿತ್ರರು ಮತ್ತು ಬಂಧುಗಳು ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇದೆ. ನೀವು ನಿಮ್ಮ ಮಿತ್ರರು ಮತ್ತು ಅತಿಥಿಗಳಿಗೆ ಅದ್ಭುತ ಪಾರ್ಟಿ ಆಯೋಜಿಸುತ್ತೀರಿ.

ಕನ್ಯಾ : ವ್ಯಾಪಾರ ಮತ್ತು ಸಂತೋಷಗಳನ್ನು ಚೆನ್ನಾಗಿ ಹೊಂದಿಸಲಾಗುತ್ತದೆ. ನೀವು ಇಂದು ಚಿರಸ್ಥಾಯಿಯಾಗಿ ಕಾಣುವ ಜನಸಂದಣಿಯನ್ನು ಪ್ರಶಂಸಿಸುತ್ತೀರಿ. ನಿಮ್ಮ ಹಣಕಾಸಿನ ಹೊರಹರಿವು ನೀವು ಸುತ್ತಾಡುವ ಸಮಯಕ್ಕೆ ನೇರವಾದ ಪ್ರಮಾಣದಲ್ಲಿರುತ್ತದೆ. ಆದಾಗ್ಯೂ, ನೀವು ಎಚ್ಚರಿಕೆಯಿಂದ ಖರ್ಚು ಮಾಡಬೇಕು ಮತ್ತು ಅದರ ಕುರಿತು ಒತ್ತಡ ಮಾಡಿಕೊಳ್ಳಬಾರದು.

ತುಲಾ : ನಾಟಕೀಯವಾದ ನಿಮ್ಮತನ ಮುಂಬದಿಗೆ ಬರುತ್ತದೆ. ನೀವು ನಿಮ್ಮ ಕೆಲಸದಲ್ಲಿ ಬದ್ಧತೆಯಾಗಿರಲಿ, ಅಥವಾ ನಿಮ್ಮ ಕುಟುಂಬಕ್ಕೆ ನಿಷ್ಠೆಯಾಗಿರಲಿ ಕಾರ್ಯಸಾಧನೆ ತೋರುವುದರಲ್ಲಿ ನಿಮ್ಮದೇ ಪ್ರದರ್ಶನವಾಗಿರುತ್ತದೆ. ನಿಮ್ಮ ಪ್ರತಿಸ್ಪರ್ಧಿಗಳಿಗೆ ಚಿಂತೆ ಕಾರಣ ನೀಡುತ್ತೀರಿ.

ವೃಶ್ಚಿಕ : ತಿದ್ದುಪಡಿಗಳು ಜೀವನದ ಕೇಂದ್ರಬಿಂದು. ನಿಮ್ಮ ಪ್ರೀತಿಪಾತ್ರರು ನೀವು ಹತ್ತಿರದಲ್ಲಿರುವಾಗ ಹೇಗೆ ಭಾವಿಸುವಂತೆ ಮಾಡುತ್ತೀರಿ ಎಂದು ತಿಳಿಯುವುದು ಮುಖ್ಯ. ಅವರನ್ನು ಅಸಾಧಾರಣ ಎಂದು ಭಾವಿಸುವಂತೆ ಮಾಡಿರಿ; ಆದರೆ ಅವರನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ.

ಧನು : ನಿಮ್ಮ ತಾರೆಗಳು ಇಂದು ಪ್ರಬಲವಾಗಿವೆ ಮತ್ತು ನಿಮಗೆ ಅದ್ಭುತ ದಿನ ಮುಂದಿದೆ. ನೀವು ವೃತ್ತಿಪರರಾಗಿದ್ದೀರಿ ಇದಕ್ಕೆ ಮೆಚ್ಚುಗೆಯನ್ನೂ ಪಡೆಯುತ್ತೀರಿ. ಕೆಲಸದಲ್ಲಿ ನಿಮಗೆ ಎಲ್ಲ ಸಮಸ್ಯೆಗಳನ್ನೂ ದಾಟಿ ಹೋಗುವ ಜಾಣ್ಮೆ ಇದೆ. ನಿಮ್ಮ ಈ ವಿಧಾನವು ಖಂಡಿತಾ ನಿಮ್ಮ ಸುತ್ತಲಿನ ಜನರ ಹೃದಯಗಳನ್ನು ಗೆಲ್ಲುತ್ತದೆ.

ಮಕರ : ಕೆಲಸದಲ್ಲಿ ನಿಮಗೆ ಮಾನ್ಯತೆ ಮತ್ತು ಪುರಸ್ಕಾರಗಳು ಕಾಯುತ್ತಿವೆ, ಮತ್ತು ಬಹಳಷ್ಟು ಸಂದರ್ಭಗಳಲ್ಲಿ ಆಗುವಂತೆ ಸಹೋದ್ಯೋಗಿಗಳು ನಿಮ್ಮ ಸಂಪತ್ತು ಮತ್ತು ಪುರಸ್ಕಾರಗಳ ಕುರಿತು ಈರ್ಷ್ಯೆ ಪಡುವುದಿಲ್ಲ. ಅವರು ಹೊಸ ಹಾಗೂ ಸವಾಲಿನ ಯೋಜನೆಗಳನ್ನು ಕೈಗೊಳ್ಳಲು ಅತ್ಯಂತ ಅಗತ್ಯವಾದ ಉತ್ತೇಜನ ನೀಡುತ್ತಾರೆ. ಉದ್ಯೋಗ ಬದಲಿಸಲು ಬಯಸಿರುವವರು, ಕೊಂಚ ಕಾಯಿರಿ, ಇದು ನಿಮಗೆ ಸರಿಯಾದ ಕಾಲವಲ್ಲ.

ಕುಂಭ : ನಿಮ್ಮ ಮನೆಯಲ್ಲಿ ಶಾಂತಿಯುತ ವಾತಾವರಣ ಸೃಷ್ಟಿಸಲು ನೀವು ವಿಫಲರಾಗುತ್ತೀರಿ ಮತ್ತು ಈ ಸಮಸ್ಯೆಗೆ ಪೂರಕವಾಗಿ ನಿಮ್ಮ ಮಕ್ಕಳು ನಿಮಗೆ ನಿರ್ವಹಿಸಲೇ ಕಷ್ಟವಾಗುವಂತೆ ಸಂಗತಿಗಳನ್ನು ತರುತ್ತಾರೆ. ಕೆಲ ಕೌಟುಂಬಿಕ ವಿವಾದಗಳೂ ಉಂಟಾಗಬಹುದು, ಮತ್ತು ಅಸೂಯೆ ಹೊಂದಿರುವ ನೆರೆಹೊರೆಯವರು ಈಗಿನ ಸಮಸ್ಯೆಗಳನ್ನು ಉಲ್ಬಣಿಸಲು ಆಜ್ಯ ಹೊಯ್ಯುತ್ತಾರೆ.

ಮೀನ : ನೀವು ನಿಮ್ಮ ದೈನಂದಿನ ದಿನಚರಿಯನ್ನು ಸಂಘಟಿಸಲು ಕಠಿಣ ಪರಿಶ್ರಮ ಪಡುತ್ತೀರಿ, ನಿಮ್ಮ ಗ್ರಹಗಳ ಕೆಟ್ಟ ಜೋಡಣೆಯಿಂದ ಇಂದು ನೀವು ವಿಷಯಗಳನ್ನು ಪರಿಣಾಮಕಾರಿಯಾಗಿ ಇತ್ಯರ್ಥಪಡಿಸಲು ಸಾಧ್ಯವಿಲ್ಲ. ನೀವು ತಾಳ್ಮೆಯಿಂದ ಇರಲು ಮತ್ತು ವಿಷಯಗಳು ಅವು ಹೇಗಿರುತ್ತವೋ ಹಾಗೆಯೇ ಇರುವಂತೆ ಮಾಡಲು ಅಲ್ಲದೆ ಬದಲಾವಣೆಯ ಭಾವನೆಗಳಿಗೆ ಕೊಂಚ ತಡೆ ಹೇರುವುದು ಸೂಕ್ತ.

ದೇಶ

ನಾವು ಉಗ್ರವಾದ ಪೋಷಿಸಿದ್ದು ನಿಜ ಎಂದು ತಪ್ಪೊಪ್ಪಿಕೊಂಡ ಪಾಕ್ ನಾಯಕಿ!

ಪಾಕಿಸ್ತಾನವು ಉಗ್ರರನ್ನು ಹಾಗೂ ಉಗ್ರರ ಚಟುವಟಿಕೆಯನ್ನು ಪೋಷಿಸಿಕೊಂಡು ಬಂದಿರುವುದು ಸತ್ಯ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನಾಯಕಿ ಹಾಗೂ ಸಂಸದೆ ಶೆರ್ರಿ ರೆಹಮಾನ್ ಅವರು ಒಪ್ಪಿಕೊಂಡಿದ್ದಾರೆ,
ಸ್ಕೈ ನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಸಂಸದೆ ಶೆರ್ರಿ ರೆಹಮಾನ್ ಭಾಗಿಯಾಗಿದ್ದು, ನಿರೂಪಕಿ ಹಾಗೂ ಸಂಸದೆಯ ನಡುವೆ ಮಾತಿನ ಚಕಮಕಿ ನಡೆದಿದೆ, ಸಂದರ್ಶನದ ಬಿರುಸಿನ ನಡುವೆ ನಿರೂಪಕಿ ಸಾಕ್ಷ್ಯಾಧಾರಗಳನ್ನು ತೋರಿಸಿದ್ದು, ಈ ವೇಳೆ ಪಾಕಿಸ್ತಾನದ ಸಂಸದೆಯ ಬಾಯಿಂದ ಪಾಕಿಸ್ತಾನ ಹಾಗೂ ಉಗ್ರರಿಗೂ ಇರುವ ನಂಟಿನ ಅಸಲಿ ವಿಚಾರಗಳು ಬಹಿರಂಗೊಂಡಿದೆ,
ನಿರೂಪಕಿ ಯಾಲ್ದಾ ಹಕೀಮ್ ಬ್ರಿಗೇಡ್ 313 ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೆರ್ರಿ ರೆಹಮಾನ್ ಈ ಹಿಂದೆ ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸಿಕೊಂಡು ಬಂದಿದ್ದು ನಿಜ, ಆದರೆ ನಾವು ಈಗ ಉಗ್ರವಾದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ, ಪಾಕಿಸ್ತಾನ ರಾಷ್ಟ್ರವು ಬದಲಾಗಿದೆ ಎಂದರು,
ಇನ್ನು ಕಾಶ್ಮೀರವನ್ನು ಗುರಯಾಗಿಸಿಕೊಂಡು ಭಾರತದಲ್ಲಿ ನಡೆಯುತ್ತಿರುವ ದಾಳಿ ಬಗ್ಗೆ ನಿರೂಪಕಿ ಪ್ರಸ್ತಾಪಿಸದಾಗ ಉತ್ತರಿಸಿದ ಶೆರ್ರಿ ರೆಹಮಾನ್ ಭಾರತದಲ್ಲೂ ಆಂತರಿಕ ಸಂಘರ್ಷಗಳು ನಡೆಯುತ್ತಿವೆ, ಅಲ್ಲಿನ ಭದ್ರತೆಗೆ ಏನಾದರೂ ಸಮಸ್ಯೆಯಾದರೆ ಅದಕ್ಕೆ ನಾವು ಜವಾಬ್ದಾರರೇ? ಎಂದು ಪ್ರಶ್ನಿಸಿದರು,

Continue Reading

ಕ್ರೀಡೆ

ಒಂದೇ ತಿಂಗಳಲ್ಲಿ 6 ಕ್ರಿಕೆಟಿಗರು ನಿವೃತ್ತಿ-ಲಿಸ್ಟ್ ನಲ್ಲಿದ್ದಾರೆ ಭಾರತದ ದಿಗ್ಗಜರು!

ನವದೆಹಲಿ: ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿಯೊಂದಿಗೆ ಶುರುವಾದ ಸ್ಟಾರ್ ಆಟಗಾರರ ಗುಡ್ ಬೈ ಪರ್ವ ಮುಂದುವರೆದಿದೆ, ಅದರಲ್ಲೂ ಮೇ ಮತ್ತು ಜೂನ್ ತಿಂಗಳ ನಡುವೆ ಒಟ್ಟು 6 ಆಟಗಾರರು ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ,
ರೋಹಿತ್ ಶರ್ಮಾ: ಭಾರತದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಕಳೆದ ತಿಂಗಳು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು, ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಹಿಟ್ ಮ್ಯಾನ್ ಇನ್ಮುಂದೆ ಏಕದಿನದಲ್ಲಿ ಮಾತ್ರ ಟೀಮ್ ಇಂಡಿಯಾ ಪ್ರತಿನಿಧಿಸಲಿದ್ದಾರೆ,
ವಿರಾಟ್ ಕೊಹ್ಲಿ: ರೋಹಿತ್ ಶರ್ಮಾ ಬೆನ್ನಲ್ಲೇ ವಿರಾಟ್ ಕೊಹ್ಲಿನ ಕೂಡ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ, ಮೇ 12 ರಂದು ಟೆಸ್ಟ್ ಗೆ ನಿವೃತ್ತಿ ಪ್ರಕಟಿಸಿದ್ರು, ಕಿಂಗ್ ಕೊಹ್ಲಿ ಇನ್ನು ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ,
ಏಂಜೆಲೊ ಮ್ಯಾಥ್ಯೂಸ್: ಶ್ರೀಲಂಕಾ ತಂಡದ ಸ್ಟಾರ್ ಆಲ್‍ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ, ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್‍ವೆಲ್ ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ,
ಆದರೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮುಂದುವರೆಯಲಿದ್ದಾರೆ,
ಹೆನ್ರಿಕ್ ಕ್ಲಾಸೆನ್: ಸೌತ್ ಆಫ್ರಿಕಾದ ಹೊಡಿಬಡಿ ದಾಂಡಿಗ ಹೆನ್ರಿಕ್ ಕ್ಲಾಸೆನ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ, ಕೇವಲ 33 ವರ್ಷದ ಕ್ಲಾಸೆನ್, ಮುಂಬರುವ ದಿನಗಳಲ್ಲಿ ಟಿ20 ಲೀಗ್ ಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ,
ನಿಕೋಲಸ್ ಪೂರನ್: ವೆಸ್ಟ್ ಇಂಡೀಸ್ ನ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಕೂಡ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ, ಅದು ಕೂಡ 29 ನೇ ವಯಸ್ಸಿನಲ್ಲಿ ಎಂಬುದು ಅಚ್ಚರಿ.

Continue Reading

ಕ್ರೀಡೆ

ಬ್ಯಾಡ್ಮಿಂಟನ್ ಆಡುತ್ತಾ ಬೆಳೆದವಳಾಗಿ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ ಹೇಗೆ ರೂಪಿಸುತ್ತದೆ ನಾನು ನೇರವಾಗಿ ಅನುಭವಿಸಿದ್ದೇನೆ ದೀಪಿಕಾ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ತಂದೆ, ಬ್ಯಾಡ್ಮಿಂಟನ್ ಲೆಜೆಂಡ್​​ ಪ್ರಕಾಶ್ ಪಡುಕೋಣೆ ಅವರ 70ನೇ ಹುಟ್ಟುಹಬ್ಬವನ್ನಿಂದು ಬಹಳ ವಿಶೇಷವಾಗಿ ಆಚರಿಸಿದರು.

‘ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್’ (ಪಿಎಸ್​ಬಿ) ಬೆಂಗಳೂರು, ಎನ್​​ಸಿಆರ್, ಮುಂಬೈ, ಚೆನ್ನೈ, ಜೈಪುರ, ಪುಣೆ, ನಾಸಿಕ್, ಮೈಸೂರು, ಪಾಣಿಪತ್, ಡೆಹ್ರಾಡೂನ್, ಉದಯಪುರ, ಕೊಯಮತ್ತೂರು, ಸಾಂಗ್ಲಿ ಮತ್ತು ಸೂರತ್ ಸೇರಿದಂತೆ 18 ನಗರಗಳಲ್ಲಿ 75ಕ್ಕೂ ಹೆಚ್ಚು ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಇನ್​​​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾದ ಮಾಧ್ಯಮ ಪ್ರಕಟಣೆ ಮೂಲಕ ಹೇಳಿದ್ದಾರೆ.

“ಬ್ಯಾಡ್ಮಿಂಟನ್‌ನ ಸಂತೋಷ ಮತ್ತು ಶಿಸ್ತನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುವುದು ನಮ್ಮ ಆಶಯ” ಎಂದೂ ಸಹ ದೀಪಿಕಾ ತಿಳಿಸಿದ್ದಾರೆ. ಈ ಮೂಲಕ ಕೇಂದ್ರಗಳ ಸಂಖ್ಯೆ ವಿಸ್ತರಿಸುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್​​ನಲ್ಲಿ, “ಬ್ಯಾಡ್ಮಿಂಟನ್ ಆಡುತ್ತಾ ಬೆಳೆದವಳಾಗಿ, ಈ ಕ್ರೀಡೆಯು ಒಬ್ಬರ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೇಗೆ ರೂಪಿಸುತ್ತದೆ ಎಂಬುದನ್ನು ನಾನು ನೇರವಾಗಿ ಅನುಭವಿಸಿದ್ದೇನೆ. ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ (PSB) ಮೂಲಕ, ಬ್ಯಾಡ್ಮಿಂಟನ್‌ನ ಸಂತೋಷ ಮತ್ತು ಶಿಸ್ತನ್ನು ಎಲ್ಲಾ ಹಂತದ ಜನರಿಗೆ ತಲುಪಿಸಲು ಮತ್ತು ಆರೋಗ್ಯಕರ, ಫೋಕಸ್ಡ್​​ ಮತ್ತು ಕ್ರೀಡೆಯಿಂದ ಪ್ರೇರಿತವಾದ ಪೀಳಿಗೆಯನ್ನು ನಿರ್ಮಿಸಲು ನಾವು ಆಶಿಸುತ್ತೇವೆ. ಅಪ್ಪಾ, ನಿಮ್ಮನ್ನು ಚೆನ್ನಾಗಿ ತಿಳಿದಿರುವವರಿಗೆ ಈ ಕ್ರೀಡೆಯ ಬಗ್ಗೆ ನಿಮ್ಮ ಉತ್ಸಾಹವೂ ತಿಳಿದಿದೆ. 70ನೇ ವಯಸ್ಸಿನಲ್ಲಿಯೂ ನೀವು ಬ್ಯಾಡ್ಮಿಂಟನ್​ಗೆ ನಿಮ್ಮನ್ನು ಸಮರ್ಪಿಸಿದ್ದೀರಿ. ನಿಮ್ಮ ಉತ್ಸಾಹವನ್ನು ನಿಜವಾಗಿಸಲು ನಾವು ಬದ್ಧರಾಗಿದ್ದೇವೆ. ಎಲ್ಲರಿಗಾಗಿ ಬ್ಯಾಡ್ಮಿಂಟನ್! 70ನೇ ಹುಟ್ಟುಹಬ್ಬದ ಶುಭಾಶಯಗಳು ಪಪ್ಪಾ!” ಎಂದು ಬರೆದುಕೊಂಡಿದ್ದಾರೆ.

ನಟಿ ಶೇರ್ ಮಾಡಿದ ಪ್ರಕಟಣೆಯಲ್ಲಿ, ಪಿಎಸ್‌ಬಿಯ ಮಾರ್ಗದರ್ಶಕ ಮತ್ತು ಸಲಹೆಗಾರ ಪ್ರಕಾಶ್ ಪಡುಕೋಣೆ ತಮ್ಮ ಮನದಾಳವನ್ನೂ ಹಂಚಿಕೊಂಡರು. “ಕ್ರೀಡೆಯು ಬೆಳವಣಿಗೆಯ ಅವಿಭಾಜ್ಯ ಅಂಗವಾಗಿದೆ. ಇದು ಶಿಸ್ತು, ಸ್ಥಿತಿಸ್ಥಾಪಕತ್ವ ಮತ್ತು ಗೆಲುವಿನ ಮನಸ್ಥಿತಿಯನ್ನು ಹುಟ್ಟಿಸುತ್ತದೆ. ಪಿಎಸ್‌ಬಿಯೊಂದಿಗೆ, ಗುಣಮಟ್ಟದ ತರಬೇತಿಯನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವುದು, ತಳಮಟ್ಟದಿಂದ ಪ್ರತಿಭೆಯನ್ನು ಪೋಷಿಸುವುದು ಮತ್ತು ಭಾರತೀಯ ಬ್ಯಾಡ್ಮಿಂಟನ್‌ನ ಭವಿಷ್ಯಕ್ಕೆ ಬಲವಾದ ಅಡಿಪಾಯವನ್ನು ಹಾಕುವುದು ನಮ್ಮ ಗುರಿ” ಎಂದು ಹೇಳಿದರು.

ಭಾರತದ 18 ನಗರಗಳಲ್ಲಿ 75 ಕೇಂದ್ರಗಳು ಆರಂಭಗೊಂಡಿದ್ದು, ಈ ವರ್ಷದ ಕೊನೆಗೆ 100 ಕೇಂದ್ರಗಳು ಮತ್ತು 2027ರ ಹೊತ್ತಿಗೆ 250 ಕೇಂದ್ರಗಳಿಗೆ ವಿಸ್ತರಿಸುವ ಗುರಿಯನ್ನು ‘ಪಡುಕೋಣೆ ಸ್ಕೂಲ್​ ಆಫ್​​ ಬ್ಯಾಡ್ಮಿಂಟನ್’ ಹೊಂದಿದೆ. ದೀಪಿಕಾ ಪಡುಕೋಣೆ ಇದರ ಸಂಸ್ಥಾಪಕಿಯಾದರೆ, ಪ್ರಕಾಶ್​ ಪಡುಕೋಣೆ ಮಾರ್ಗದರ್ಶಕರಾಗಿ ಪಿಎಸ್​ಬಿಯ ಭಾಗವಾಗಿದ್ದಾರೆ

Continue Reading

Trending