Connect with us

ದೇಶ

ರಜನಿಕಾಂತ್ ಸುಪ್ರೀಮ್ ಆಫ್ ಆಲ್ ಸ್ಟಾರ್ಸ್’ ಎಂದ ಬಿಗ್​ ಬಿ: ‘ಅಮಿತಾಭ್ ನೋಡಿ ಬಾಲಿವುಡ್​​ ನಕ್ಕ ದಿನ’ಇತ್ತೆಂದ ನಟ – Vettaiyan Prevue and Audio Launch

ಚೆನ್ನೈ(ತಮಿಳುನಾಡು): ಭಾರತೀಯ ಚಿತ್ರರಂಗದ ಹಿರಿಯ, ಬಹುಬೇಡಿಕೆ ನಟ ಅಮಿತಾಭ್ ಬಚ್ಚನ್ ಅವರು ಸೌತ್​ ಸೂಪರ್​ ಸ್ಟಾರ್ ರಜನಿಕಾಂತ್ ಅವರ ಮೇಲೆ ಹೊಂದಿರುವ ಅಗಾಧ ಅಭಿಮಾನ ಎಲ್ಲರಿಗೂ ತಿಳಿದಿರುವ ವಿಚಾರ. ಶುಕ್ರವಾರ ಚೆನ್ನೈನಲ್ಲಿ ನಡೆದ ಬಹುನಿರೀಕ್ಷಿತ ಚಿತ್ರ ‘ವೆಟ್ಟೈಯನ್‌’ನ ಪ್ರಿವ್ಯೂ ಮತ್ತು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಇದು ಮತ್ತೊಮ್ಮೆ ಸಾಬೀತಾಗಿದೆ.

ಸೆಪ್ಟೆಂಬರ್ 20ರಂದು ಚೆನ್ನೈನಲ್ಲಿ ನಡೆದ ಸಿನಿಮಾ ಪ್ರಮೋಶನ್​​ ಈವೆಂಟ್​ಗೆ ಬಿಗ್​ ಬಿ ಆಗಮಿಸಲು ಸಾಧ್ಯವಾಗಿಲ್ಲವಾದರೂ, ಹೃದಯಸ್ಪರ್ಶಿ ವಿಡಿಯೋ ಸಂದೇಶದ ಮೂಲಕ ಅಭಿಮಾನಿಗಳು ಮತ್ತು ಚಿತ್ರತಂಡದೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ‘ವೆಟ್ಟೈಯನ್‌’ನ ಪ್ರಿವ್ಯೂ ಮತ್ತು ಆಡಿಯೋ ರಿಲೀಸ್​ ಈವೆಂಟ್​​ನ ಕೆಲ ಹೈಲೆಟ್ಸ್ ಇಲ್ಲಿವೆ.

ಸುಪ್ರೀಮ್ ಆಫ್ ಆಲ್ ಸ್ಟಾರ್ಸ್’: ಬಿಗ್ ಬಿ

ತಮ್ಮ ವಿಡಿಯೋದಲ್ಲಿ ಬಾಲಿವುಡ್​ ಸೂಪರ್​ ಸ್ಟಾರ್ ಅಮಿತಾಭ್ ಬಚ್ಚನ್ ಅವರು ದಕ್ಷಿಣ ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್ ಅವರನ್ನು “ಸುಪ್ರೀಮ್​ ಆಫ್​​ ಆಲ್​ ಸ್ಟಾರ್ಸ್” ಎಂದು ಉಲ್ಲೇಖಿಸಿದ್ದಾರೆ. ಈ ಗುಣಗಾನ ಪ್ರೇಕ್ಷಕರಿಂದ ಹರ್ಷೋದ್ಗಾರ ಮತ್ತು ಚಪ್ಪಾಳೆಗಳನ್ನು ಸ್ವೀಕರಿಸಿತು. “ವೆಟ್ಟೈಯನ್ ನನ್ನ ಚೊಚ್ಚಲ ತಮಿಳು ಚಿತ್ರ, ಗೌರವಕರ ವಿಷಯ. ರಜನಿಕಾಂತ್ ಎಲ್ಲ ಸ್ಟಾರ್‌ಗಳಿಗಿಂತಲೂ ಸರ್ವೋಚ್ಛ” ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

‘ರಜನಿ ನೆಲದ ಮೇಲೆ ಮಲಗುತ್ತಿದ್ದರು’: 1991ರ ಬ್ಲಾಕ್‌ಬಸ್ಟರ್ ‘ಹಮ್‌’ ಚಿತ್ರದಲ್ಲಿ ರಜನಿಕಾಂತ್ ಮತ್ತು ಅಮಿತಾಭ್ ಸಹೋದರರ ಪಾತ್ರ ನಿರ್ವಹಿಸಿದ್ದರು. ವಿಡಿಯೋದಲ್ಲಿ, ಬಿಗ್​​ ಬಿ ಶೂಟಿಂಗ್​ ಕ್ಷಣಗಳನ್ನು ನೆನಪಿಸಿಕೊಂಡರು. ಹಮ್​​ ಚಿತ್ರೀಕರಣದ ವೇಳೆ ನಾನು ನನ್ನ ಎಸಿ ವಾಹನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ರಜನಿ ಬ್ರೇಕ್​​ ಟೈಮ್​ನಲ್ಲಿ ನೆಲದ ಮೇಲೆ ಮಲಗುತ್ತಿದ್ದರು. ಅವರ ಸರಳತೆ ನೋಡಿ ನಾನು ವಾಹನದಿಂದ ಹೊರಬಂದು ಹೊರಗೆ ವಿಶ್ರಾಂತಿ ಪಡೆದೆ ಎಂದು ಹಳೇ ನೆನಪುಗಳನ್ನು ಮೆಲುಕು ಹಾಕಿದರು.

‘ಬಿಗ್​ ಬಿ ಯಶಸ್ಸಿನ ಅವನತಿಗಾಗಿ ಜಗತ್ತು ಕಾದಿತ್ತು’: ಈವೆಂಟ್​ನಲ್ಲಿ, ಅಮಿತಾಭ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಕೆಲ ಸವಾಲುಗಳನ್ನು ರಜನಿ ವಿವರಿಸಿದರು. “ಅಮಿತ್ ಜಿ ಸಿನಿಮಾಗಳನ್ನು ನಿರ್ಮಿಸುವ ಸಂದರ್ಭ ಅವರು ದೊಡ್ಡ ನಷ್ಟವನ್ನು ಎದುರಿಸಿದ್ದರು. ಎಷ್ಟರ ಮಟ್ಟಿಗೆಂದರೆ ತಮ್ಮ ವಾಚ್‌ಮ್ಯಾನ್‌ಗೆ ಸಂಬಳ ಪಾವತಿಸಲು ಸಹ ಸಾಧ್ಯವಾಗಲಿಲ್ಲ. ಅವರ ಜುಹು ನಿವಾಸ ಪಬ್ಲಿಕ್​​ ಬಿಡ್ಡಿಂಗ್‌ಗೆ ಹೋಗಿತ್ತು. ಆ ಸಂದರ್ಭ ಬಾಲಿವುಡ್ ಅವರನ್ನು ನೋಡಿ ನಗುತ್ತಿತ್ತು. ಅವರ ಯಶಸ್ಸಿನ ಅವನತಿಗಾಗಿ ಜಗತ್ತು ಕಾದಿತ್ತು” ಎಂದು ತಿಳಿಸಿದರು.

‘ದಿನಕ್ಕೆ 10 ಗಂಟೆ ಕೆಲಸ ಮಾಡುತ್ತಾರೆ’: “ಕೇವಲ ಮೂರು ವರ್ಷಗಳಲ್ಲಿ, ಅಮಿತಾಭ್​​ ಅವರು ಜಾಹೀರಾತುಗಳು ಮತ್ತು ಕೆಬಿಸಿ ಯಲ್ಲಿ ಕಾಣಿಸಿಕೊಂಡರು. ಎಲ್ಲ ಹಣವನ್ನು ಮರಳಿ ಗಳಿಸಿದರು. ಜುಹು ಸೇರಿದಂತೆ ಅವರ ಮೂರು ಮನೆಗಳನ್ನು ಸಹ ಮರಳಿ ಪಡೆದರು. ಅವರದ್ದು ಸ್ಫೂರ್ತಿದಾಯಕ ವ್ಯಕ್ತಿತ್ವ. 82ರ ಹರೆಯದ ಅವರು ದಿನಕ್ಕೆ 10 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ” ಎಂದು ಪ್ರಶಂಸೆಗಳ ಸುರಿಮಳೆಯನ್ನೇ ಹರಿಸಿದರು.

ತಂದೆಯ ಜನಪ್ರಿಯತೆಯನ್ನು ಬಳಸಲಿಲ್ಲ’: ಅಮಿತಾಭ್ ಕುಟುಂಬದ ಸಾಹಿತ್ಯ ಪರಂಪರೆ ಬಗ್ಗೆಯೂ ಮಾತನಾಡಿದರು. “ಅಮಿತಾಭ್ ಅವರ ತಂದೆ ಓರ್ವ ಶ್ರೇಷ್ಠ ಬರಹಗಾರರಾಗಿದ್ದರು. ಅವರು ತಮ್ಮ ತಂದೆಯ ಜನಪ್ರಿಯತೆಯನ್ನು ಸುಲಭವಾಗಿ ಬಳಸಬಹುದಿತ್ತು. ಆದರೆ ಅವರು ತಮ್ಮದೇ ಆದ ಮಾರ್ಗ ಕಂಡುಕೊಂಡರು” ಎಂದು ತಿಳಿಸಿದರು.

ಅಮಿತಾಭ್ ಆ್ಯಕ್ಸಿಡೆಂಟ್​​ ನೆನಪಿಸಿಕೊಂಡ ರಜನಿ: ರಜನಿ ಕೆಲ ಕಠಿಣ ಕ್ಷಣಗಳನ್ನೂ ನೆನಪಿಸಿಕೊಂಡರು. “ಒಮ್ಮೆ, ಅಮಿತಾಭ್ ಅವರು ಭೀಕರ ಅಪಘಾತಕ್ಕೊಳಗಾದರು. ಆ ವೇಳೆ, ಇಂದಿರಾ ಗಾಂಧಿ ಅವರು ಸಮ್ಮೇಳನಕ್ಕಾಗಿ ವಿದೇಶದಲ್ಲಿದ್ದರು. ಅಪಘಾತದ ಬಗ್ಗೆ ತಿಳಿದ ಕೂಡಲೇ ಅವರು ಭಾರತಕ್ಕೆ ಹಿಂತಿರುಗಿದರು. ಆಗ ರಾಜೀವ್ ಗಾಂಧಿ ಮತ್ತು ಅಮಿತಾಭ್ ಜಿ ಒಟ್ಟಿಗೆ ವಿದ್ಯಾಭ್ಯಾಸ ಪಡೆದವರು ಎಂಬುದು ಎಲ್ಲರಿಗೂ ಗೊತ್ತಾಯಿತು.

ಕುಣಿದು ಕುಪ್ಪಳಿಸಿದ ರಜನಿ: ‘ವೆಟ್ಟೈಯನ್‌’ನ ಪ್ರಿವ್ಯೂ ಮತ್ತು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಂಜು ವಾರಿಯರ್, ರಾಣಾ ದಗ್ಗುಬಾಟಿಯಂತಹ ಗಣ್ಯರು ಕಾಣಿಸಿಕೊಂಡರು. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಮನಸಿಲಾಯೊ ಹಾಡಿಗೆ ಸಿಗ್ನೇಚರ್ ಸ್ಟೆಪ್‌ ಹಾಕಲು ರಜನಿಕಾಂತ್ ಅವರನ್ನು ಆಹ್ವಾನಿಸಿದರು. ಬ್ಲ್ಯಾಕ್​ ಔಟ್​​ಫಿಟ್​​ನಲ್ಲಿದ್ದ ಸೂಪರ್‌ ಸ್ಟಾರ್ ವೇದಿಕೆಯಲ್ಲಿ ಸಖತ್​ ಸ್ಟೆಪ್​ ಹಾಕಿದರು. ಅನಿರುದ್ಧ್ ಅವರ ಗಾಯನ ಈವೆಂಟ್‌ನ ಉತ್ಸಾಹ ಹೆಚ್ಚಿಸಿತ್ತು. ರಜನಿಕಾಂತ್ ಡ್ಯಾನ್ಸ್ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿವೆ.

ದೇಶ

ದೆಹಲಿ ತಲುಪಿದ DCM ಡಿಕೆ.ಶಿವಕುಮಾರ್: ಹೈಕಮಾಂಡ್ ಭೇಟಿ, ಊಹಾಪೋಹ ಶುರು..!

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಕಾಂಗ್ರೆಸ್‌ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆಯಿದ್ದು, ಭಾನುವಾರ ಸಂಜೆಯೇ ದೆಹಲಿ ತಲುಪಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ರಾಜಕೀಯ ವಲಯದಲ್ಲಿ ಊಹಾಪೋಹಗಳು ಶುರುವಾಗಿವೆ.

ಡಿಕೆ.ಶಿವಕುಮಾರ್ ಅವರ ದೆಹಲಿ ಭೇಟಿ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಜೂ.13ರಂದು ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲಿದ್ದಾರೆಂದು ತಿಳಿದುಬಂದಿದೆ.

ರಾಜ್ಯದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಇಬ್ಬರೂ ನಾಯಕರ ವರಿಷ್ಠರ ಭೇಟಿ ಮಾಡುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

ಇಂದು ಬೆಳಗ್ಗೆ 11ಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳೊದಿಗೆ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳ ಜತೆ ಆಡಳಿತ ಹಾಗೂ ಘನ ತ್ಯಾಜ್ಯ ನಿರ್ವಹಣೆ ಕುರಿತು ಡಿ.ಕೆ.ಶಿವಕುಮಾರ್‌ ಸಭೆ ನಡೆಸಲಿದ್ದಾರೆ.ಬಳಿಕ ಜಲಶಕ್ತಿ ಸಚಿವರು, ಇಂಧನ ಸಚಿವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಇದರ ನಡುವೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸೇರಿ ಇತ್ತೀಚಿನ ರಾಜ್ಯದ ಬೆಳವಣಿಗೆಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದರ ಬೆನ್ನಲ್ಲೇ ಜೂ.12ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಜೂ.13 ರಂದು ಹಣಕಾಸು ಆಯೋಗದ ಸಭೆಯಲ್ಲಿ ಭಾಗವಹಿಸಲಿದ್ದು, ಬಳಿಕ ಎಐಸಿಸಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ರಾಜ್ಯದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸ ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ದೆಹಲಿ ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ದೆಹಲಿ ಭೇಟಿ ಸಂಪೂರ್ಣವಾಗಿ ತಾಂತ್ರಿಕವಾಗಿದೆ ಎಂದು ಹೇಳಿದರು.

ಹೈದರಾಬಾದ್, ಚೆನ್ನೈ ಮತ್ತು ಈಗ ದೆಹಲಿಯಲ್ಲಿ ಈಗಾಗಲೇ ಜಾರಿಯಲ್ಲಿರುವ ಘನತ್ಯಾಜ್ಯ ನಿರ್ವಹಣಾ ತಂತ್ರಜ್ಞಾನಗಳನ್ನು ಪರಿಶೀಲಿಸಲು ನಿರ್ಧರಿಸಿದ್ದೆ. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನವನ್ನು ವೀಕ್ಷಿಸಲು ನಾನು ಹಾಗೂ ಬೆಂಗಳೂರು ಪಾಲಿಕೆಯಿಂದ ಸುಮಾರು 15 ಸದಸ್ಯರ ತಂಡ ದೆಹಲಿಗೆ ಆಗಮಿಸಿದ್ದೇವೆ. ಇಲ್ಲಿ ನಗರದ ಹೊರಭಾಗದಲ್ಲಿ ವಾಸನೆ ರಹಿತವಾಗಿ ತ್ಯಾಜ್ಯ ವಿಲೇವಾರಿ ಕೇಂದ್ರ ಮಾಡಿದ್ದಾರೆ ಎಂದು ಕೇಳಿದ್ದೇನೆ.

ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಂಬಂಧ ಟೆಂಡರ್ ಕರೆಯಲಾಗಿದ್ದು, ಕಸದಿಂದ ಇಂಧನ, ಅನಿಲ ಉತ್ಪಾದನೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಈಗಾಗಲೇ ಹೈದರಾಬಾದ್ ಹಾಗೂ ಚೆನ್ನೈಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದೇನೆ. ದೆಹಲಿಯಲ್ಲಿನ ತಂತ್ರಜ್ಞಾನ ಅಳವಡಿಕೆ ಬಗ್ಗೆ ನಮಗೆ ಪ್ರಸ್ತಾವನೆ ಬಂದಿದ್ದು, ಹೀಗಾಗಿ ಅದನ್ನು ವೀಕ್ಷಣೆ ಮಾಡುತ್ತೇವೆ. ದೆಹಲಿಯಲ್ಲಿ ನಗರ ಯೋಜನಾ ಪ್ರಾಧಿಕಾರದಲ್ಲಿ ರಸ್ತೆ ವಿಚಾರವಾಗಿ ಪ್ರತ್ಯೇಕ ನೀತಿ ಹೊಂದಿದ್ದು, ಇದನ್ನು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ಹೈಕಮಾಂಡ್ ನಾಯಕರ ಭೇಟಿ ಸಧ್ಯಕ್ಕೆ ಇಲ್ಲ. ಸಮಯ ಸಿಕ್ಕರೆ ಭೇಟಿ ಮಾಡುತ್ತೇನೆ. ಜೂನ್.10 ರಂದು ಎತ್ತಿನಹೊಳೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ. ಹೀಗಾಗಿ ನಾಳೆ ಸಂಜೆ ಬೆಂಗಳೂರಿಗೆ ವಾಪಸ್ಸಾಗುತ್ತೇವೆ ಎಂದರು

Continue Reading

ದೇಶ

ಆಪರೇಷನ್​ ಸಿಂಧೂರ್​​ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರಧಾನಿ ಮೋದಿ!

ಪಹಲ್ಗಾಮ್ ದಾಳಿಗೆ (Pahalgam Attack) ಭಾರತ ಆಪರೇಷನ್ ಸಿಂಧೂರ್ (Operation Sindoor) ಮೂಲಕ ಪ್ರತೀಕಾರ (Revenge) ತೀರಿಸಿಕೊಂಡಿತು. ಆಪರೇಷನ್ ಸಿಂಧೂರ್ ಸಮಯದಲ್ಲಿ, ಭಾರತ ಕನಿಷ್ಠ ಆರು ಪಾಕಿಸ್ತಾನಿ ಜೆಟ್‌ಗಳು (Pakistan Jet Destroy) ಮತ್ತು ಒಂದು ಮಿಲಿಟರಿ ವಿಮಾನವನ್ನು ಹೊಡೆದುರುಳಿಸಿದೆ ಎಂದು ಉನ್ನತ ರಕ್ಷಣಾ ಮೂಲಗಳು ಮಾಹಿತಿ ನೀಡಿವೆ. ಏಪ್ರಿಲ್ 23 ರಂದು, ಅಂದರೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ, ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನದ ಬಹಾವಲ್ಪುರ್ ಮತ್ತು ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಪ್ರಧಾನ ಕಚೇರಿಗಳನ್ನು ಪ್ರಮುಖ ಗುರಿಗಳಾಗಿ ಆಯ್ಕೆ ಮಾಡಿಕೊಂಡಿತ್ತು ಎಂದು ಹೇಳಲಾಗಿದೆ.

ಇನ್ನೂ ಮೇ.10 ರಂದು ಪಾಕಿಸ್ತಾನದೊಂದಿಗೆ ಕದನ ವಿರಾಮಕ್ಕೆ ಭಾರತ ಅಮೆರಿಕ ಅಥವಾ ಡೊನಾಲ್ಡ್ ಟ್ರಂಪ್‌ನಿಂದ ಒತ್ತಡಕ್ಕೆ ಒಳಗಾಗಿತ್ತು ಎಂಬುದು ಸುಳ್ಳು ಎಂದು ಉನ್ನತ ರಕ್ಷಣಾ ಮೂಲಗಳು ತಿಳಿಸಿವೆ. “ಟ್ರಂಪ್ ಮತ್ತು ಪ್ರಧಾನಿ ಮೋದಿ ಎಂದಿಗೂ ಮಾತನಾಡಲಿಲ್ಲ ಎಂಬುದೇ ಸತ್ಯ. ಜೆಡಿ ವ್ಯಾನ್ಸ್ ಕರೆ ಮಾಡಿ ಮಾತನಾಡಿದಾಗಲೂ ಪ್ರಧಾನಿ ತುಂಬಾ ದೃಢವಾಗಿದ್ದರು ಎನ್ನಲಾಗಿದೆ.

ಆಪರೇಷನ್​ ಸಿಂಧೂರ್​​ ವಿಚಾರವಾಗಿ ಕಾಂಗ್ರೆಸ್ ಮತ್ತು ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡಿದ್ದಾರೆ. ಮೋದಿಯವರು ‘ಅಮೆರಿಕದ ಒತ್ತಡಕ್ಕೆ ಮಣಿದರು’ ಎಂದು ಕಾಂಗ್ರೆಸ್​​ ನಾಯಕರು ಲೇವಡಿ ಮಾಡಿದರು. ಇದೀಗ ಇದಕ್ಕೆ ಉತ್ತರ ಕೊಟ್ಟಿದ್ದು, ಯಾವುದೇ ಕಾರಣಕ್ಕೂ ನಾವು ಟ್ರಂಪ್​ ಒತ್ತಡಕ್ಕೆ ಮಣಿದಿಲ್ಲ ಎಂದು ಬಿಜೆಪಿ ಕೇಂದ್ರ ಸರ್ಕಾರ ಹೇಳಿದೆ.

ಆಪರೇಷನ್​ ಸಿಂಧೂರ್​​ ಯೋಜನೆ ಹೇಗೆ ಮಾಡಲಾಯಿತು?

ಪಹಲ್ಗಾಮ್​ನಲ್ಲಿ ಭಯೋತ್ಪಾದಕ ದಾಳಿ ನಂತರ ಮುರಿಡ್ಕೆ ಮತ್ತು ಬಹವಾಲ್ಪುರ ಭಾರತದ ಪ್ರಮುಖ ಗುರಿಗಳಾಗಿದ್ವು ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 23 ರ ಸಭೆಯಲ್ಲಿಯೇ ಇದನ್ನು ನಿರ್ಧರಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಏಪ್ರಿಲ್ 23 ರ ಬೆಳಿಗ್ಗೆ ಮೂರು ಸೇನಾ ಮುಖ್ಯಸ್ಥರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರೊಂದಿಗೆ ದೀರ್ಘ ಸಭೆ ನಡೆಸಿದರು.

ಮುರಿಡ್ಕೆ ಮತ್ತು ಬಹವಾಲ್ಪುರದ ನಾಶದ ಯೋಜನೆಯಲ್ಲಿ ಈ ಸಭೆಯಲ್ಲಿಯೇ ನಿರ್ಧರಿಸಲಾಯ್ತು. ಇದು ಪಹಲ್ಗಾಮ್ ದಾಳಿಯ ಒಂದು ದಿನದ ನಂತರವೇ ಪ್ಲಾನ್​ ಮಾಡಲಾಗಿತ್ತು. ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯಿಸಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದು ಸೇನಾ ಮುಖ್ಯಸ್ಥರು ಈ ಸಭೆಯಲ್ಲಿ ಹೇಳಿದ್ದರು. ಏಪ್ರಿಲ್ 23ರ ಸಂಜೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆಯಲ್ಲಿ ಈ ಆಯ್ಕೆಗಳನ್ನು ಮುಂದಿಡಲಾಯಿತು ಎಂದು ಹೇಳಲಾಗಿದೆ.

ದಾಳಿ ರಾತ್ರಿ ವೇಳೆಯೇ ಏಕೆ ನಿರ್ಧರಿಸಲಾಯಿತು?

ರಕ್ಷಣಾ ಮೂಲಗಳ ಪ್ರಕಾರ, ಆಪರೇಷನ್ ಸಿಂಧೂರ್ ಅಡಿಯಲ್ಲಿ ದಾಳಿಗೆ ಹಲವಾರು ದಿನಾಂಕಗಳನ್ನು ಪರಿಗಣಿಸಲಾಗಿತ್ತು. ಮತ್ತು ಸಮಯವನ್ನು 12.30 ರಿಂದ 2 ರ ನಡುವೆ ನಿಗದಿಪಡಿಸಲಾಯಿತು. ರಾತ್ರಿಯ ಕತ್ತಲೆಯಲ್ಲಿಯೂ ಸಹ ಗುರಿಗಳ ಮೇಲೆ ಉಂಟಾದ ವಿನಾಶವನ್ನು ಕ್ಯಾಮೆರಾಗಳು ಸೆರೆಹಿಡಿಯಬಹುದೆಂದು ಖಚಿತಪಡಿಸಿಕೊಳ್ಳಲಾಯಿತು. ಅದಾಗ್ಯೂ, ಅಂತರರಾಷ್ಟ್ರೀಯ ಗಡಿ ಅಥವಾ ನಿಯಂತ್ರಣ ರೇಖೆಯನ್ನು (LoC) ದಾಟಬಾರದು ಎಂಬುದು ಸಭೆಯಲ್ಲಿ ನಿರ್ಧಾರವಾಗಿತ್ತು.

ಅಂತಿಮವಾಗಿ, ಭಾರತವು ಮೇ 7 ರಂದು ಬೆಳಗಿನ ಜಾವ 1.05 ರಿಂದ 1.30 ರ ನಡುವಿನ 22 ನಿಮಿಷಗಳ ಒಳಗೆ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಹಲವಾರು ಭಯೋತ್ಪಾದಕ ಕೇಂದ್ರಗಳ ಮೇಲೆ ದಾಳಿ ಮಾಡಿತು. ಈ ಕಾರ್ಯಾಚರಣೆಯ ಆರಂಭಿಕ ಹಂತದಲ್ಲಿ ‘ಕಾರ್ಯತಂತ್ರದ ತಪ್ಪು’ಗಳಿಂದಾಗಿ ಭಾರತ ಕೆಲವು ಜೆಟ್‌ಗಳನ್ನು ಕಳೆದುಕೊಂಡಿದೆ ಎಂದು ಸಿಡಿಎಸ್ ಇತ್ತೀಚೆಗೆ ಒಪ್ಪಿಕೊಂಡಿತು, ಆದರೆ ಎಲ್ಲಾ ಭಾರತೀಯ ಪೈಲಟ್‌ಗಳು ಸುರಕ್ಷಿತವಾಗಿ ಮರಳಿದರು.

ಪಾಕಿಸ್ತಾನಕ್ಕೆ ಎಷ್ಟು ನಷ್ಟ?

ಅದಾಗ್ಯೂ, ಮೇ 7 ಮತ್ತು ಮೇ 10 ರ ಬೆಳಿಗ್ಗೆ ಭಾರತೀಯ ದಾಳಿಯಲ್ಲಿ ಆರಕ್ಕೂ ಹೆಚ್ಚು ಪಾಕಿಸ್ತಾನಿ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಭಾರತ ದೃಢಪಡಿಸಿದೆ. ಪಾಕಿಸ್ತಾನಿ ಸೇನೆಯ C-130J ಮಿಲಿಟರಿ ಸಾರಿಗೆ ವಿಮಾನವನ್ನು ಸಹ ಹೊಡೆದುರುಳಿಸಲಾಗಿದೆ. ಇವುಗಳಲ್ಲಿ ಪಾಕಿಸ್ತಾನ ವಾಯುಪಡೆಯ F-16 ಮತ್ತು JF-17 ಫೈಟರ್ ಜೆಟ್‌ಗಳು ಮತ್ತು ಪಾಕಿಸ್ತಾನಿ SAAB-2000 AWACS ಸೇರಿವೆ ಎಂದು ಉನ್ನತ ರಕ್ಷಣಾ ಮೂಲಗಳು ತಿಳಿಸಿವೆ. ಭಾರತೀಯ ನೌಕಾಪಡೆಯು ವಾಸ್ತವವಾಗಿ ಯುದ್ಧಕ್ಕೆ ಪ್ರವೇಶಿಸಲಿಲ್ಲ, ಆದರೆ ಅದನ್ನು ಸಿದ್ಧಪಡಿಸಲಾಗಿತ್ತು. ಭಾರತೀಯ ನೌಕಾಪಡೆಯು ಕರಾಚಿ ಬಂದರಿನ ಮೇಲೆ ದಾಳಿ ಮಾಡಬಹುದೆಂದು ಪಾಕಿಸ್ತಾನ ಭಯಪಟ್ಟಿತ್ತು ಎಂದು ಮೂಲಗಳು ತಿಳಿಸಿವೆ.

Continue Reading

ದೇಶ

ನೀರಿಗಾಗಿ ಭಿಕ್ಷೆ ಬೇಡುತ್ತಿರುವ ಪಾಕಿಸ್ತಾನ- ಭಾರತಕ್ಕೆ 4 ಬಾರಿ ಪತ್ರ!

ನವದೆಹಲಿ: ಸಿಂಧೂ ನದಿ ನೀರು ಒಪ್ಪಂದವನ್ನು ಮರು ಸ್ಧಾಪಿಸುವಂತೆ ಬೇಡಿಕೊಂಡು ಇದುವರೆಗೂ ಪಾಕಿಸ್ತಾನ ಭಾರತಕ್ಕೆ ನಾಲ್ಕು ಬಾರಿ ಪತ್ರ ಬರೆದಿದೆ, ಪೂರ್ತಿಯಾಗಿ ನಡು ಬಗ್ಗಿಸಿರುವ ಪಾಕಿಸ್ತಾನ ಈಗ ಸಿಂಧೂ ನದಿಯ ನೀರಿಲ್ಲದೇ ಹೆಣಗಾಡುವ ಪರಿಸ್ಧಿತಿ ಎದುರಿಸುತ್ತಿದೆ,
ನಾಲ್ಕು ಪತ್ರಗಳ ಪೈಕಿ ಮೂರು ಪತ್ರಗಳು ಆಪರೇಷನ್ ಸಿಂಧೂರ್ ಬಳಿಕ ಕಳಿಸಲಾಗಿದೆ ಎಂದು ತಿಳಿದುಬಂದಿದೆ,
1960 ರಲ್ಲಿ ಭಾರತವು ಪಾಕಿಸ್ತಾನದೊಂದಿಗೆ ಸಿಂಧೂ ನದಿ ನೀರು ಹಂಚಿಕೆಯ ಬಗ್ಗೆ ದ್ವಿಪಕ್ಷೀಯ ಸೌಹಾರ್ದ ಒಪ್ಪಂದ ಮಾಡಿಕೊಂಡಿತ್ತು, ಆದರೆ ಪಾಕಿಸ್ತಾನದಲ್ಲಿ ಸೌಹಾರ್ದತೆ ಎಂಬ ಇಲ್ಲದಿದ್ದ ಕಾರಣ ಪಹಲ್ಗಾಮ್ ದಾಳಿಯ ಬಳಿಕ ಈ ಒಪ್ಪಂದವನ್ನು ರದ್ದುಪಡಿಸಲಾಯಿತು,

Continue Reading

Trending