ಬೆಂಗಳೂರು
ನಾಡಿಗೆ ನಾಡೇ ಕುಣಿದು ಸಂಭ್ರವಿಸುವ ಹಬ್ಬ ದಸರಾ- ಶಾಸಕ ಎಸ್ ಟಿ ಸೋಮಶೇಖರ್

ಬೆಂಗಳೂರು: ಯಶವಂತಪುರ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್ ಅವರ ಕಚೇರಿಯಲ್ಲಿ ಅದ್ದೂರಿ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಶಾಸಕರು ಮಾತನಾಡುತ್ತ ದಸರಾ ಹಬ್ಬ ದುಷ್ಟರ ವಿರುದ್ಧ ಸತ್ಯದ ವಿಜಯವನ್ನು ಆಚರಿಸುವ ಉತ್ಸವವಾಗಿದೆ, ದಸರಾ ಹಬ್ಬ ೧೦ ದಿನಗಳ ಹಬ್ಬವಾಗಿದ್ದು ವಿಜಯದಶಮಿಗೆ ಮುಕ್ತಾಯಗೊಳ್ಳುತ್ತದೆ, ಮೈಸೂರಿನ ರಾಜಮನೆತನದವರು ಈ ನಮ್ಮ ನಾಡಹಬ್ಬವನ್ನು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ, ಅರಮನೆಯಲ್ಲಿ ಕ್ರೀಡೆ, ಕುಸ್ತಿ, ಕವಿಗೋಷ್ಠಿ, ಆಹಾರೋತ್ಸವ, ಚಲವಚಿತ್ರೋತ್ಸದ ಜೊತೆಗೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು, ನವರಾತ್ರಿಯನ್ನು ಭಾರತದಾದ್ಯಂತ ಸಂಭ್ರಮದಿAದ ಆಚರಿಸಿದರೂ ನವರಾತ್ರಿ ಸಮಯದಲ್ಲಿ ಮೈಸೂರಿನಲ್ಲಿ ನಡೆಯುವ ದಸರಾ ವೈಭವವೇ ಬೇರೆಯಾಗಿರುತ್ತದೆ,
ಒಂದು ಕಾಲಘಟ್ಟದಲ್ಲಿ ಆಳರಸರ ಮಹೋತ್ಸವಾಗಿ ಆಚರಿಸಲಾಗುತ್ತಿದ್ದ ದಸರಾ ಮಹೋತ್ಸವಕ್ಕೆ ನಾಲ್ಕು ಶತಮಾನಕ್ಕಿಂತಲೂ ಹೆಚ್ಚಿನ ಇತಿಹಾಸವಿದೆ, ಭಾರತೀಯ ಸಂಸ್ಕ್ರೃತಿಯ ಚರಿತ್ರೆಯಲ್ಲೇ ಇಷ್ಟೊಂದು ಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣಸಿಗುವುದು ಬಹಳ ಅಪರೂಪ, ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯ ಆರಾಧನೆಯೊಂದಿಗೆ ಆರಂಭವಾಗುವ ನವರಾತ್ರಿ ಹಾಗೂ ಹತ್ತನೇ ದಿನದಂದು ನಡೆಯುವ ವೈಭವದ ವಿಜಯ ದಶಮಿಯು ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕ್ರತಿಕ ಹಿನ್ನೆಲೆ ಇದೆ ಎಂದರು, ಹತ್ತು ದಿನಗಳ ಕಾಲ ಶಾಸಕರ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿದಿನ ಪೊಜೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಏರ್ಪಡಿಸಲಾಗಿದೆ ಎಂದು ತಿಳಿಸಿದರು,