ಬೆಂಗಳೂರು

ಮಾಯದಂಥಾ ಮಳೆ ಬಂತಣ್ಣ-ಜನರ ಕರೆದೊಯ್ಯಲು ಟ್ರಾಕ್ಟರ್ ಬಂತಾಣ್ಣ!

ಬೆಂಗಳೂರು: ಬೆಂಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನ ಜೀವನ ಅಕ್ಷರಶಃ ನಲುಗಿ ಹೋಗಿದ್ದು, ಮಹಾಮಳೆಗೆ ನಗರವೆಲ್ಲ ಜಲದಿಗ್ಭಂಧನಕ್ಕೆ ಒಳಗಾಗಿದೆ, ಈ ನಡುವೆ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‍ಮೆಂಟ್ ನಿವಾಸಿಗಳು ಕೆಲಸಕ್ಕೆ ತೆರಳಲು ಹರಸಾಹಸ ಪಡುತ್ತಿದ್ದಾರೆ, ಮಂಗಳವಾರ ದಿನವಿಡೀ ಹಾಗೂ ಬುಧವಾರ ಮುಂಜಾನೆಯಿಂದ ಧಾರಾಕಾರ ಮಳೆ ಸುರಿದಿದ್ದ ಪರಿಣಾಮ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‍ಮೆಂಟ್ ಬಳಿ ಮೂರ್ನಾಲ್ಕು ಅಡಿ ನೀರು ನಿಂತಿದೆ,
ಈ ನಡುವೆ ಕೆಲಸಕ್ಕೆ ಹೋಗುವವರು ಮನೆಯಿಂದ ಹೊರಬರುವುದಕ್ಕೆ ಹರಸಾಹಸ ಪಡುತ್ತಿದ್ದು, ಅವರನ್ನು ಟ್ರ್ಯಾಕ್ಟರ್ ಸಹಾಯದಿಂದ ಹೊರ ಕರೆತರಲಾಗಿದೆ,

Leave a Reply

Your email address will not be published. Required fields are marked *

Trending

Exit mobile version