ಬೆಂಗಳೂರು
ಬೆಂಗಳೂರಿನ ರಸ್ತೆಯಲ್ಲಿ ಮೀನುಗಾರಿಕೆ ತುಂಬಿ ಹರಿದ ಕೆಂಗೇರಿ ರೇಲ್ವೇ ಸ್ಟೇಷನ್ ಹಾಗೂ ಶಿರ್ಕೆ ಬಡವಾಣೆ !

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಳೆ ದೊಡ್ಡ ಅವಾಂತರವನ್ನೇ ಸೃಷ್ಟಿಮಾಡಿದೆ, ಪ್ರತಿಷ್ಠಿತ ಆರ್ ಆರ್ ನಗರದಲ್ಲಿ ನದಿಯಂತೆ ನೀರು ಹರಿಯುತ್ತಿದ್ದು ಜನರು ಬಲೆ ಹಾಕಿ ಮೀನು ಹಿಡಿಯುತ್ತಿದ್ದಾರೆ, ಮಳೆ ವ್ಯಾಪಕವಾಗಿ ಬಿದ್ದ ಕಾರಣ ರಸ್ತೆಯಲ್ಲಿ ದೊಡ್ಡಮಟ್ಟದ ನೀರು ಸಂಗ್ರಹಣೆ ಆಗಿದೆ, ಮೀನುಗಳು ತೇಲಿಬಂದಿದ್ದು, ಜನರು ಮೀನುಗಳನ್ನು ಹಿಡಿದು, ಖುಷಿ ಪಟ್ಟಿದ್ದಾರೆ,
ಮತ್ತೊಂದೆಡೆ ಮಳೆಯಿಂದಾಗಿ ಜಯನಗರದ 32 ಇ ಕ್ರಾಸ್ ನಲ್ಲಿ ಮರಬಿದ್ದಿದ್ದು, ಅರವಿಂದ ಜಂಕ್ಷನ್ ಕನೆಕ್ಟಿಂಗ್ ರಸ್ತೆ ಕಂಪ್ಲೀಟ್ ಕ್ಲೋಸ್ ಆಗಿದೆ, ಕೆಂಗೇರಿಯ ಶಿರ್ಕೆ ಅಪಾಟ್ರ್ಮೆಂಟ್ ಮೊನ್ನೆ ತಡರಾತ್ರಿ ಸುರಿದ ಜಲ ಗಂಡಾಂತರ ಎದುರಾಗಿತ್ತು, ಬೇಸ್ ಮೆಂಟ್ ನೀರು ಹೊರಹಾಕಲು ನಿವಾಸಿಗಳು ಹರಸಾಹಸ ಪಟ್ಟರು. ಬಿಬಿಎಂಪಿಗೆ ಜನರು ಹಿಡಿಶಾಪ ಹಾಕಿದ್ದರು, ವಾಹನ ಚಾಲನೆ ದೊಡ್ಡ ಸವಾಲಾಗಿದೆ,, ಕೆಂಗೇರಿ ರೈಲು ನಿಲ್ದಾಣ ಸಂಪೂರ್ಣ ಜಲಮಯವಾಗಿದ್ದು ಮುಂಡಿಯದ್ದ ನೀರು ತುಂಬಿದೆ,