ಬೆಂಗಳೂರು

ಅಪ್ಪು ಕಂಚಿನ ಪುತ್ಧಳಿ ಲೋಕಾರ್ಪಣೆ-ಅಶ್ವಿನಿ ಪುನೀತ್, ಆರ್. ಅಶೋಕ್ ಭಾಗಿ!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮರೆಯಾಗಿ 3 ವರ್ಷ ಕಳೆದಿದೆ, ಅಪ್ಪು ಫ್ಯಾನ್ಸ್ ಮಾತ್ರ ಇವತ್ತಿಗೂ ಪುನೀತ್ ನೆನಪಿನಲ್ಲಿ ಬದುಕುತ್ತಿದ್ದಾರೆ, ಈ ಮಧ್ಯೆ ಬೆಂಗಳೂರಿನ ಯಡಿಯೂರ್ ವಾರ್ಡ್ ನಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಕಂಚಿನ ಪುತ್ಧಳಿಯನ್ನು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಲೋಕರ್ಪಣೆ ಮಾಡಿದ್ದಾರೆ, ಈ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿದರು, ದೇಶದ ಪ್ರತಿಭಾವಂತ ನಟ ಎಂದು ಖ್ಯಾತಿ ಗಳಿಸಿರುವ ಪುನೀತ್ ರಾಜ್ ಕುಮಾರ್ ರವರ ಪುತ್ಧಳಿ ಪಾರ್ವತಮ್ಮ ರಾಜಕುಮಾರ್ ರಸ್ತೆಯಲ್ಲಿ ಸ್ಧಾಪಿಸಲಾಗಿದೆ, ಪುನೀತ್ ರಾಜ್ ಕುಮಾರ್ ಅಗಲಿಕೆಯಾಗಿ ಮೂರು ವರ್ಷವಾಯಿತು ಅದರು ಅವರ ಹೆಸರು ಚಿರಸ್ಧಾಯಿಯಾಗಿ ಉಳಿದಿದೆ, ಪುನೀತ್ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು, ಕಲಾವಿದ ಮತ್ತು ಮಾನವೀಯತೆ ಮೂಲಕ ಜನರ ಪ್ರೀತಿ ಗಳಿಸಿದ ಮೆಚ್ಚಿನ ಹೃದಯವಂತ ನಾಯಕ ಪುನೀತ್ ರಾಜ್ ಕುಮಾರ್ ಸರಳತೆ, ವಿನಯತೆ ಮೂಲಕ ಜನರ ಹೃದಯಗೆದ್ದರು, ನಾನು ಸಹ ರಾಜ್ ಕುಮಾರ್ ಅವರ ಅಭಿಮಾನಿ ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು,
ಯಡಿಯೂರ್ ವಾರ್ಡ್ ಇಡೀ ಏಷಿಯಾದಲ್ಲೇ ಅಭಿವೃದ್ಧಿಯಾದ ನಂಬರ್ 1 ವಾರ್ಡ್ ಎಂದು ಕೀರ್ತಿಗಳಿಸಿದೆ, ಇದೇ ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಕೂಡ ಇದ್ದರು,

Leave a Reply

Your email address will not be published. Required fields are marked *

Trending

Exit mobile version