Connect with us

ಬೆಂಗಳೂರು

ಡಿಕೆಶಿ ಮಾಸ್ಟರ್‌ ಪ್ಲ್ಯಾನ್ ಬಿಬಿಎಂಪಿ ವಿಭಜನೆ; ಬೆಂಗಳೂರು ದಕ್ಷಿಣದತ್ತ ರಾಮನಗರ

Published

on

ಕಾವೇರಿ ನೀರು ಹರಿಸುವ ಪರಿಸ್ಧಿತಿಯಲ್ಲಿ ನಾವಿಲ್ಲ ಡಿಕೆ ಶಿವಕುಮಾರ್
ಡಿಕೆಶಿ ಮಾಸ್ಟರ್‌ ಪ್ಲ್ಯಾನ್! ಬಿಬಿಎಂಪಿ ವಿಭಜನೆ; ಬೆಂಗಳೂರು ದಕ್ಷಿಣದತ್ತ ರಾಮನಗರ

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಕನಕಪುರವನ್ನು ಸರ‍್ಪಡೆ ಮಾಡುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿರುವ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳು ಅಡಗಿದೆ ಎನ್ನಲಾಗಿದೆ. ಅಲ್ಲದೆ, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಚಿಂತನೆಯಲ್ಲಿದ್ದಾರಾ ಎಂಬ ಅನುಮಾನವನ್ನೂ ಮೂಡಿಸಿದೆ. ಕನಕಪುರವನ್ನು ಬೆಂಗಳೂರಿಗೆ ಸೇರಿಸಿ, ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಪ್ಲ್ಯಾನ್ ಅನ್ನು ಅವರು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ತನ್ನ ತಂತ್ರಗಾರಿಕೆಯನ್ನು ವಿರೋಧ ಮಾಡಿದೆ. ಇದಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮರು ನಾಮಕರಣದ ಪ್ರಸ್ತಾಪದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಆಪ್ತ ವಲಯದಲ್ಲಿ ಈ ರ‍್ಚೆ ಜೋರಾಗಿದೆ. ಬಿಬಿಎಂಪಿ ಚುನಾವಣೆಯನ್ನು ಮುಂದೂಡುವುದರ ಜತೆಗೆ ಬಿಬಿಎಂಪಿ ವಿಭಜನೆ ಸಂರ‍್ಭದಲ್ಲಿ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣದ ಚಿಂತನೆ ನಡೆಸಲಾಗಿದೆ.
ಒಂದು ವೇಳೆ ರ‍್ಕಾರ ಸಮಿತಿಯ ಶಿಫಾರಸನ್ನು ಒಪ್ಪಿದರೆ, ವರ‍್ಡ್ ಮರುವಿಂಗಡಣೆ ಆಗಬೇಕು. ಇದಕ್ಕಾಗಿ ಬಿಬಿಎಂಪಿ ಚುನಾವಣೆ ಸಹ ಮುಂದೂಡಿಕೆ ಆಗಲಿದೆ. ಹಾಗಾಗಿ ಬಿಬಿಎಂಪಿ ವಿಭಜನೆ ಸಂರ‍್ಭದಲ್ಲಿ ರಾಮನಗರಕ್ಕೆ ಮರು ನಾಮಕರಣ ಮಾಡುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಬಿಬಿಎಂಪಿ ವಿಭಜನೆಗೆ ಬಿ.ಎಸ್. ಪಾಟೀಲ್ ನೇತೃತ್ವದಲ್ಲಿ ಸಮಿತಿ ಈಗಾಗಲೇ ಒಂದು ಸುತ್ತಿನ ವರದಿಯನ್ನು ರ‍್ಕಾರಕ್ಕೆ ಸಲ್ಲಿಸಿಯಾಗಿದೆ. ಆ ವರದಿಗೆ ಪುರ‍್ಜನ್ಮ ನೀಡುವುದು ಡಿ.ಕೆ. ಶಿವಕುಮಾರ್ ಪ್ಲ್ಯಾನ್ ಆಗಿದೆ. ಬಿಬಿಎಂಪಿಯನ್ನು ನಾಲ್ಕು ಅಥವಾ ಐದು ಭಾಗಗಳಾಗಿ ವಿಂಗಡಿಸುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಿ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ಚಿಂತನೆಯನ್ನು ನಡೆಸಲಾಗಿದೆ. ಐದು ವಲಯಗಳಾದರೆ ಐವರು ಮೇಯರ್, ಐವರು ಆಯುಕ್ತರನ್ನು ನೇಮಕ ಮಾಡುವ ಪ್ಲ್ಯಾನ್ ಅನ್ನೂ ಹೊಂದಲಾಗಿದೆ.
ಐದು ವಲಯಗಳಲ್ಲೂ ಕನಿಷ್ಠ ೭೦ ಹಾಗೂ ಗರಿಷ್ಠ ೧೦೦ ವರ‍್ಡ್ ಇರುವಂತೆ ನೋಡಿಕೊಳ್ಳುವುದು. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಸರ‍್ಪಡೆ ಆಗುತ್ತಿರುವ ಮಾಜಿ ಕರ‍್ಪೊರೇರ‍್ಗಳಿಗೆ ಎಲ್ಲರಿಗೂ ಅವಕಾಶ ಸಿಗಲಿದೆ ಎಂದು ಡಿ.ಕೆ. ಶಿವಕುಮಾರ್ ಅಭಯ ನೀಡುತ್ತಿದ್ದಾರೆ.
ಒಂದು ವೇಳೆ ಬಿಬಿಎಂಪಿ ವಿಭಜನೆ ಪ್ರಕ್ರಿಯೆಗೆ ರಾಜ್ಯ ರ‍್ಕಾರ ಮುಂದಾದರೆ ಸದ್ಯಕ್ಕೆ ಬಿಬಿಎಂಪಿ ಚುನಾವಣೆ ನಡೆಯುವುದಿಲ್ಲ. ಬಿಬಿಎಂಪಿ ಚುನಾವಣೆ ಮುಂದೂಡುವ ಭಾಗವಾಗಿ ಬಿ.ಎಸ್. ಪಾಟೀಲ್ ವರದಿ ಅನುಷ್ಠಾನ ಮಾಡಲು ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ದೇಶ

ತಿಪಟೂರಲ್ಲಿ ಕೊಬ್ಬರಿ ಬೆಲೆ ಐತಿಹಾಸಿಕ ಏರಿಕೆ: ಕ್ವಿಂಟಾಲ್‌ಗೆ ₹32,218 ದಾಖಲೆಯ ಗರಿ!

Published

on

By

Tiptur: ತೆಂಗು ಬೆಳೆಗಾರರು ಅಡಕೆ ಕೃಷಿಯತ್ತ ಮುಖ ಮಾಡುತ್ತಿರುವುದು, ಇಳುವರಿ ಕುಸಿತ ಹಾಗೂ ಉತ್ತರ ಭಾರತದಿಂದ ಹೆಚ್ಚಿದ ಬೇಡಿಕೆಯ ಪರಿಣಾಮವಾಗಿ ತಿಪಟೂರಿನಲ್ಲಿ ಕೊಬ್ಬರಿ ಬೆಲೆ ಐತಿಹಾಸಿಕ ಗರಿಯನ್ನು ತಲುಪಿದೆ. ಸೋಮವಾರದ ಹರಾಜಿನಲ್ಲಿ ಕ್ವಿಂಟಾಲ್‌ಗೆ ₹32,218 ದರ ದಾಖಲಾಗಿದ್ದು, ಇದುವರೆಗೆ ಗರಿಷ್ಠವಾಗಿದ್ದ ₹31,606 ದಾಖಲೆಯನ್ನು ಮೀರಿ ಹೊಸ ಇತಿಹಾಸ ನಿರ್ಮಾಣವಾಗಿದೆ.

ತಿಪಟೂರು ಎಪಿಎಂಸಿ ಮಾರುಕಟ್ಟೆಗೆ 3,771 ಚೀಲ (1621 ಕ್ವಿಂಟಾಲ್) ಕೊಬ್ಬರಿ ಆವಕವಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ₹28,000ರಿಂದ ₹31,000ರವರೆಗೆ ತೂಗುಯ್ಯಾಲೆಯಾಡುತ್ತಿದ್ದ ಬೆಲೆ ಇದೀಗ ಏರಿಕೆಯ ಹಾದಿ ಹಿಡಿದಿದೆ.

2025ರಿಂದ ಕೊಬ್ಬರಿಗೆ ಶುಭಕಾಲ ಆರಂಭವಾಗಿದೆ. ಏಪ್ರಿಲ್‌ನಲ್ಲಿ ₹20,000 ದಾಟಿದ ಬೆಲೆ, ಜೂನ್ ವೇಳೆಗೆ ₹31,606 ತಲುಪಿತ್ತು. ಬಳಿಕ ಸ್ವಲ್ಪ ಏರಿಳಿತ ಕಂಡರೂ, ಇದೀಗ ಮತ್ತೆ ಗರಿಷ್ಠ ಮಟ್ಟಕ್ಕೆ ಏರಿದೆ.

ಧಾರಣೆ ಏರಿಕೆಗೆ ಪ್ರಮುಖ ಕಾರಣಗಳು:

  • ಇಳುವರಿ ಕುಸಿತ: ರೋಗಬಾಧೆಯಿಂದ ಶೇ.50ರವರೆಗೆ ಉತ್ಪಾದನೆ ಇಳಿಕೆ
  • ಅಡಕೆ ಕೃಷಿಗೆ ಒತ್ತು: ತೆಂಗಿನ ಬದಲು ರೈತರು ಅಡಕೆಗೆ ತಿರುಗು
  • ಎಳನೀರು ಬೇಡಿಕೆ: ಕೊಬ್ಬರಿ ಬದಲು ನೇರ ತೆಂಗಿನಕಾಯಿ ಮಾರಾಟ ಹೆಚ್ಚಳ
  • ಎಪಿಎಂಸಿ ನಿಯಂತ್ರಣ: ಸೆಕೆಂಡ್ಸ್ ಕೊಬ್ಬರಿ ಮೇಲೆ ಕಡಿವಾಣ
  • ಬೇಡಿಕೆ ಹೆಚ್ಚಳ: ಉತ್ತರ ಭಾರತ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆ ಏರಿಕೆ

ರೈತ ಬಿಳಿಗೆರೆ ನಾಗೇಶ್ ಅವರ ಪ್ರಕಾರ, ಇಳುವರಿ ಕುಸಿತ ಮತ್ತು ಬೇಡಿಕೆ ಹೆಚ್ಚಳದಿಂದ ಬೆಲೆ ಏರಿಕೆಯಾದರೂ ಇದು ಶಾಶ್ವತವಾಗಿಲ್ಲ. ಉತ್ಪಾದನಾ ವೆಚ್ಚದ ಹಿನ್ನಲೆಯಲ್ಲಿ ಲಾಭ ಕಡಿಮೆ ಇದ್ದರೂ ನಷ್ಟ ತಪ್ಪಿದೆ ಎಂಬುದು ಸಮಾಧಾನಕರ ಅಂಶ ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಬೆಲೆ ಕಾವಲು ಸಮಿತಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಕೆಳಹಟ್ಟಿ, ತೆಂಗು ಬೆಳೆಗಳಲ್ಲಿ ಹೆಚ್ಚುತ್ತಿರುವ ರೋಗಬಾಧೆ ಬಗ್ಗೆ ಸರ್ಕಾರ ವೈಜ್ಞಾನಿಕ ಸಮೀಕ್ಷೆ ನಡೆಸಿ ಪರಿಹಾರ ಕಂಡುಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.

ಮುಖ್ಯಾಂಶಗಳು:

  • ತಿಪಟೂರಲ್ಲಿ ಕೊಬ್ಬರಿ ಬೆಲೆ ₹32,218 ಗರಿ
  • 2025ರಲ್ಲಿ ನಿರಂತರ ಏರಿಕೆ
  • ಇಳುವರಿ ಕುಸಿತದಿಂದ ಪೂರೈಕೆ ಕೊರತೆ
  • ಉತ್ತರ ಭಾರತದಿಂದ ಹೆಚ್ಚಿದ ಬೇಡಿಕೆ
  • ರೈತರಿಗೆ ಮಿಶ್ರ ಪ್ರತಿಕ್ರಿಯೆ
Continue Reading

ದೇಶ

“ಸುಳ್ಳು ಹೇಳ್ತಾರೆ” – ಪ್ರಧಾನಿ ವಿರುದ್ಧ ಡಿಕೆಶಿ ಆರೋಪ

Published

on

By

ಹುಬ್ಬಳ್ಳಿ: ಕರ್ನಾಟಕ ರಾಜಕೀಯದಲ್ಲಿ ತನ್ನ ತಂತ್ರಜ್ಞಾನ ಮತ್ತು ತೀಕ್ಷ್ಣ ಪ್ರತಿಕ್ರಿಯೆಗಳಿಂದಲೇ ಗಮನ ಸೆಳೆಯುವ D. K. Shivakumar ಅವರು ಇದೀಗ ಮತ್ತೆ ಅಸ್ತ್ರ ಪ್ರಯೋಗ ಮಾಡಿದ್ದಾರೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳ ಜೊತೆಗೆ ಅಸ್ಸಾಂ ಮತ್ತು ಕೇರಳ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅವರು, ಗ್ಯಾರಂಟಿ ಯೋಜನೆಗಳ ಕುರಿತು ಪ್ರಧಾನಿ Narendra Modi ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್‌, “ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತಂದ ಏಕೈಕ ರಾಜ್ಯ ಕರ್ನಾಟಕ. ಈ ವಿಷಯದಲ್ಲಿ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ” ಎಂದು ಆರೋಪಿಸಿದರು. ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನೇರ ಟಕ್ಕರ್ ನೀಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸವನ್ನು ಒತ್ತಿ ಹೇಳಿದ ಅವರು, “ಮಹಾರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಅವರು ವಿಫಲರಾದರು. ಈಗ ಕೇರಳದಲ್ಲೂ ಬಿಜೆಪಿ ಸುಳ್ಳು ಭರವಸೆ ನೀಡುತ್ತಿದೆ” ಎಂದು ಗುಡುಗಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ಮಾತನಾಡಿದಾಗಲೂ, ರಾಜ್ಯದಲ್ಲಿ ಉಂಟಾಗಿರುವ ಎಲ್‌ಪಿಜಿ ಕೊರತೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಡಿಕೆಶಿ ಒತ್ತಾಯಿಸಿದ್ದರು. ಈ ಹೇಳಿಕೆಯ ಮೂಲಕ ಜನಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೂ ಅವರು ಪ್ರಸ್ತಾಪಿಸಿದ್ದಾರೆ.

ಕೇರಳ ವಿಧಾನಸಭೆ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್‌, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ, ಗ್ಯಾರಂಟಿ ಯೋಜನೆಗಳನ್ನು ಕೇಂದ್ರದ ವಿರುದ್ಧ ಪ್ರಮುಖ ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿರುವ ಡಿಕೆ ಶಿವಕುಮಾರ್‌, ಚುನಾವಣೆಗಳ ಮುನ್ನ ಮತ್ತೊಮ್ಮೆ ರಾಜಕೀಯ ಸಮರಕ್ಕೆ ಚೈತನ್ಯ ತುಂಬಿದ್ದಾರೆ.

Continue Reading

ದೇಶ

ಸಂಕಷ್ಟದ ಹೊತ್ತಿನಲ್ಲಿ ನೆರವಾದ ದಂಪತಿ: ಶಿವನಪಾಳ್ಯದಲ್ಲಿ ಮಾನವೀಯತೆ

Published

on

By

ಬೆಂಗಳೂರು: ನಗರದಲ್ಲಿ ತೀವ್ರಗೊಂಡಿರುವ ಎಲ್‌ಪಿಜಿ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ನೆರವಾಗಲು ಸಾಮಾಜಿಕ ವಲಯದಿಂದ ಸಹಾಯದ ಹಸ್ತ ಮುಂದಾಗಿದೆ. ದಿನಗೂಲಿ ನಂಬಿಕೊಂಡಿರುವ ಚಾಲಕರ ಜೀವನವೇ ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ ಮಾನವೀಯತೆ ಮೆರೆದ ಘಟನೆ ಗಮನ ಸೆಳೆಯುತ್ತಿದೆ.

ಇದೇ ವೇಳೆ ಶಿವನಪಾಳ್ಯ ವಾರ್ಡ್‌ನಲ್ಲಿ ಜಿಬಿಎ (GBA) ಆಸಕ್ತ ಅಭ್ಯರ್ಥಿ Mahesh Bheemanakuppe ಹಾಗೂ ಅವರ ಪತ್ನಿ Savitha Mahesh ಸಂಕಷ್ಟದಲ್ಲಿರುವ ಬಡ ಆಟೋ ಚಾಲಕರ ನೆರವಿಗೆ ಸ್ವಯಂಪ್ರೇರಿತರಾಗಿ ಮುಂದಾಗಿದ್ದಾರೆ. ಎಲ್‌ಪಿಜಿ ಅಭಾವದಿಂದ ದಿನನಿತ್ಯದ ಆದಾಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಅವರು ಆಹಾರ ಕಿಟ್‌ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಮಹೇಶ್ ಅವರು, “ಬಡವರ ನೆರವಿಗೆ ನಿಲ್ಲುವುದು ನನ್ನ ಪ್ರಥಮ ಕರ್ತವ್ಯ. ನನ್ನ ಶಿವನಪಾಳ್ಯ ವಾರ್ಡ್‌ನ ಯಾವುದೇ ಕುಟುಂಬ ಇಂತಹ ಸಂಕಷ್ಟಕ್ಕೆ ಒಳಗಾಗಬಾರದು ಎಂಬುದು ನನ್ನ ಬದ್ಧತೆ” ಎಂದು ತಿಳಿಸಿದ್ದಾರೆ. ಅವರ ಈ ಮಾತುಗಳು ಸ್ಥಳೀಯರಲ್ಲಿ ವಿಶ್ವಾಸ ಮೂಡಿಸಿದ್ದು, ಸೇವಾ ಮನೋಭಾವಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ನಗರದಲ್ಲಿ ಗ್ಯಾಸ್ ಕೊರತೆ ದಿನೇ ದಿನೇ ಗಂಭೀರವಾಗುತ್ತಿರುವ ನಡುವೆಯೇ, ಆಟೋ ಚಾಲಕರ ಆರ್ಥಿಕ ಸ್ಥಿತಿ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲೇ ಮಹೇಶ್–ಸಾವಿತಾ ದಂಪತಿಯ ಸೇವಾ ಮನೋಭಾವ ಇತರರಿಗೆ ಸ್ಪೂರ್ತಿಯಾಗಿದೆ.

ಸ್ಥಳೀಯರು ಈ ಕಾರ್ಯವನ್ನು ಶ್ಲಾಘಿಸಿ, “ಬಡ ಆಟೋ ಚಾಲಕರ ಸಂಕಷ್ಟ ಅರಿತು ನೆರವಾದ ಈ ದಂಪತಿಗಳಿಗೆ ಅಭಿನಂದನೆಗಳು. ಇತರರೂ ಇವರ ಮಾದರಿಯನ್ನು ಅನುಸರಿಸಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ, ಸಂಕಷ್ಟದ ಸಂದರ್ಭದಲ್ಲಿ ಮಾನವೀಯತೆ ಮೆರೆದ ಈ ಕಾರ್ಯ ಸಮಾಜದಲ್ಲಿ ಸಕಾರಾತ್ಮಕ ಸಂದೇಶವನ್ನು ಹರಡುತ್ತಿದೆ.

Continue Reading

Trending