ದೇಶ
ಸಂಭಾಲ್ ವಿವಾದಿತ ಪ್ರದೇಶಕ್ಕೆ ರಾಹುಲ್, ಪ್ರಿಯಾಂಕಾ ಭೇಟಿ- ಮಾರ್ಗ ಮಧ್ಯದಲ್ಲೇ ತಡೆ!

ಉತ್ತರ ಪ್ರದೇಶದ ಹಿಂಸಾಚಾರ ಪೀಡಿತ ಸಂಭಾಲ್ ಕಡೆಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ದೆಹಲಿ ನೋಯ್ಡಾ ನಡುವಿನ ಗಾಜಿಪುರ ಗಡಿಯಲ್ಲಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ,
ಸಂಭಾಲ್ ನಲ್ಲಿ ಹಿಂಸಾಚಾರ ನಡೆದ ಹಿನ್ನಲೆ ಪ್ರಸ್ತುತ ನಿಷೇಧಾಜ್ಞೆ ಹೊರಡಿಸಲಾಗಿದೆ, ಈ ಮಧ್ಯೆ ನಾಯಕ ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದ ಇನ್ನಿತರು ಇಂದು ಭೇಟಿ ನೀಡಲು ಮುಂದಾಗಿದ್ದಾರೆ,
ಈ ವೇಳೆ ದೆಹಲಿ ಮತ್ತು ನೋಯ್ಡಾ ನಡುವಿನ ಗಾಜಿಪುರ ಗಡಿಯಲ್ಲಿ ಪೊಲೀಸರು ಅಡ್ಡಗಟ್ಟಿದ್ದು ಮುಂದೆ ಹೋಗಲು ಅನುಮತಿ ನೀಡಿದ ಹಿನ್ನಲೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದಾರೆ,
ಪರಿಸ್ಧಿತಿಯನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಟ್ಟಿದ್ದು ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ, ಸದ್ಯ ಸಂಭಾಲ್ ನಲ್ಲಿ ಡಿಸೆಂಬರ್ 31 ರವರೆಗೆ ಸೆಕ್ಷನ್ 163 ಜಾರಿಯಲ್ಲಿದೆ, ಈ ಹಿಂದೆ ಡಿ.1 ರ ವರೆಗೆ ನಿಷೇಧ ಹೇರಲಾಗಿತ್ತು, ಅದರೆ ಪರಿಸ್ಧಿತಿ ಹತೋಟಿಗೆ ಬಾರದ ಹಿನ್ನಲೆ ಡಿ.31 ರವರೆಗೆ ಮುಂದೂಡಲಾಗಿದೆ, ಸದ್ಯ ಗಾಜಿಪುರ ಗಡಿಯಲ್ಲಿ ರಾಹುಲ್ ಗಾಂಧಿ ಹಾಗೂ ಪೊಲೀರ ನಡುವೆ ಮಾತಿನ ಚಕಮಕಿಗೆಯಾಗಿದ್ದು ಯಾವುದೇ ಕಾರಣಕ್ಕೂ ಸಂಭಾಲ್ ಬಿಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ,