ರಾಜಕೀಯ
ಸಿಟಿ ರವಿ, ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಮಾತಿನ ವಿವಾದ, ಸದಸದಲ್ಲಿ ನಿಜಕ್ಕೂ ನಡೆದಿದ್ದೇನು?

ಬೆಳಗಾವಿ: ಸದನದಲ್ಲಿ ಸಿಟಿ ರವಿ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಡುವೆ ನಡೆದ ಮಾತಿನ ಚಕಾಮಕಿ ಇದೀಗ ವಿವಾದಕ್ಕೆ ಕಾರಣವಾಗಿದೆ,
ಪರಿಷತ್ ಕಲಾಪದ ವೇಳೆ ಕಾಂಗ್ರೆಸ್ ಅಂಬೇಡ್ಕರ್ ಗೆ ಅಮಿತ್ ಶಾ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿತ್ತು, ಇದರಿಂದಾಗಿ ಗದ್ದಲ ಪ್ರಾರಂಭವಾಗಿ ಕಲಾಪವನ್ನು ಮುಂದೂಡಲಾಯಿತು, ನಂತರ ಮತ್ತೆ ಕಲಾಪ ಪ್ರಾರಂಭವಾಯಿತು, ಅದಾದ ಬಳಿಕ ಪ್ರಶ್ನೋತ್ತರ ಎಲ್ಲಾ ನಡೆದ ಮೇಲೆ ಅಂಬೇಡ್ಕರ್ ವಿಚಾರವಾಗಿಯೇ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷದಿಂದಲೂ ಗದ್ದಲ ಪ್ರಾರಂಭವಾಯಿತು,
ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಿಟಿ ರವಿ ಅವರಿಗೆ ಮಾತಿನ ಸಂಘರ್ಷ ಶುರುವಾಗಿದೆ, ರವಿಕುಮಾರ್ ಅವರು ಮಾತನಾಡಿ ರಾಹುಲ್ ಗಾಂಧಿ ಅವರು ಅಪ್ರಬುದ್ಧ ಹುಡುಗಾಟಿಕೆ ಎಂದು ಹೇಳಿದ್ದಾರೆ, ಅದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಮ್ಮ ನಾಯಕರಿಗೆ ಹಾಗೇ ಯಾಕೆ ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ,
ಅದಕ್ಕೆ ಸಿಟಿ ರವಿ ಎದ್ದು ನಿಂತು ಹಾಗೇ ರಾಹುಲ್ ಗಾಂಧಿ ಅವರಿಗೆ ಹೇಳಬಾರದು, ಡ್ರಗ್ ಎಡಿಕ್ಟ್ ಎನ್ನಬೇಕು ಎಂದಿದ್ದಾರೆ, ಇದಕ್ಕೆ ಸಿಟ್ಟಿಗೆದ್ದ ಹೆಬ್ಬಾಳ್ಕರ್ ನೀವು ಈ ರೀತಿಯ ಹೇಳಿಕೆಯನ್ನು ನೀಡುವುದಾದರೇ ನೀವು 2 ಕೊಲೆಗಳನ್ನು ಮಾಡಿದ್ದೀರಾ, ಅದಕ್ಕೆ ನಿಮ್ಮನ್ನು ಕೊಲೆಗಾರ ಎಂದು ಕರೆಯಬಹುದು ಎಂದು ತಿರುಗೇಟು ನೀಡಿದ್ದಾರೆ, ಅದಕ್ಕೆ ಸಿಟಿ ರವಿ ಪ್ರತಿಕ್ರಿಯೆ ನೀಡಿ ನಿಮ್ಮನ್ನು ಹಾಗಾದರೆ ವ್ಯಭೀಚಾರಿ ಎನ್ನಬಹುದಲ್ಲ ಎಂದು ಹೇಳಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ, ಈ ಹೇಳಿಕೆಯು ಇದೀಗ ವಿವಾದವನ್ನು ಸೃಷ್ಟಿಸಿದೆ,