ದೇಶ

ಕುಮಾರಣ್ಣನ ಭಾವಚಿತ್ರಕ್ಕೆ ಆಂಧ್ರದಲ್ಲಿ ಕ್ಷೀರಾಭಿಷೇಕ-ಯಾಕೆ ಗೊತ್ತೇ?

ಆಂಧ್ರ ಪ್ರದೇಶ: ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿ ಖಾಸಗೀಕರಣದ ಹೊಸ್ತಿನಲ್ಲಿದ್ದ ಆಂಧ್ರಪ್ರದೇಶದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆಗೆ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಆಂಧ್ರ ಪ್ರದೇಶದ ಜನ ಹಾಲಿನ ಅಭಿಷೇಕ ಮಾಡಿದರು,
ಕಳೆದ ಎರಡು ದಿನದ ಹಿಂದೆಯಷ್ಟೇ ವೈಜಾಗ್ ಉಕ್ಕಿನ ಕಾರ್ಖಾನೆಯ ಪುನಶ್ಚೇತನಕ್ಕೆ ಕೇಂದ್ರದಿಂದ ಸುಮಾರು 11,440 ಕೋಟಿ ರೂ ಘೋಷಿಸಲಾಗಿದ್ದು, ಕೆಲವೇ ತಿಂಗಳಲ್ಲಿ ಇಡೀ ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಉಕ್ಕು ಉತ್ಪಾದನೆಗೆ ಅಗತ್ಯವಾದ ಎಲ್ಲ ವ್ಯವಸ್ಧೆ ಮಾಡುತ್ತೇವೆ ಎಂದು ಸಚಿವ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದರು,
ಅದರಂತೆ ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿ ಖಾಸಗೀಕರಣದ ಹೊಸ್ತಿನಲ್ಲಿದ್ದ ಕಾರ್ಖಾನೆಗೆ ಮರು ಜನ್ಮ ನೀಡಿದ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಕುಮಾರಸ್ವಾಮಿ ಅವರಿಗೆ ಆಂಧ್ರಪ್ರದೇಶದ ಜನ ಅವರ ಘೋಟೋಗೆ ಹಾಲಿನ ಅಭಿಷೇಕ ಮಾಡಿ ಧನ್ಯವಾದ ತಿಳಿಸಿದರು,

Leave a Reply

Your email address will not be published. Required fields are marked *

Trending

Exit mobile version