ಬೆಂಗಳೂರು
ವಿಶೇಷ ರೀತಿಯಲ್ಲಿ ಪರಿಸರ ದಿನಾಚರಣೆ-ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರಾಗಿ ಮಾಡಿದ ಬಳಿಕ ನಗರದ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ಡಿಸಿಎಂ ಡಿಕೆ ಶಿವಕುಮರ್ ಈ ಬಾರಿಯ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ, ಈ ಬಗ್ಗೆ ತಿಳಿಸಲು ಪತ್ರಿಕಾಗೋಷ್ಠಿಯನ್ನ ನಡೆಸಿದ್ದಾರೆ,
ಈ ಬಗ್ಗೆ ಮಾತನಾಡಿದ ಅವರು ಉತ್ತಮ ಬೆಂಗಳೂರಿಗಾಗಿ ನಮ್ಮ ಹಸಿರು ಪ್ರಾಮುಖ್ಯತೆ ನೀಡಬೇಕು, ನಾವು ಸಾವಿರಾರು ಎಲೆಕ್ಟ್ರಿಕ್ ಬಸ್ಗಳನ್ನು ಪ್ರಾರಂಭಸಿದ್ದೇವೆ, ಜೂನ್ 6 ರಂದು ನಾನು ಸ್ವಚ್ಛ ಬೆಂಗಳೂರು ಎಂಬ ಧ್ವೇಯ ವಾಕ್ಯ ಘೋಷಿಸುತ್ತಿದ್ದೇನೆ ಎಂದರು,
ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಅನ್ನು ನಿಷೇಧಿಸಲು ನಾವು ಸಹ ಕ್ರಮವನ್ನು ಕೈಗೊಂಡಿದ್ದೇವೆ, ಬೆಂಗಳೂರಿನ ನದಿ, ರಾಜಕಾಲುವೆಗಳು ಸುತ್ತ ಬೇಲಿ ಹಾಕಲು 38 ಕೋಟಿ ರೂ ಗಳಿಗೂ ಹೆಚ್ಚು ಹಣವನ್ನು ಇಡಲಾಗಿದೆ ಸದ್ಯದಲ್ಲೇ ಬೇಲಿ ಹಾಕುವ ಕಾರ್ಯ ನಡೆಸಲಾಗುತ್ತದೆ ಎಂದು ಡಿಕೆ ಹೇಳಿದರು.
ಹಸಿರು ಬೆಂಗಳೂರಿಗೆ ಎಲ್ಲಾ ಸಂಸ್ಧೆಗಳು, ಎಜುಕೇಷನ್ ಸಂಸ್ಧೆಗಳಿಗೆ ಭಾಗಿಯಾಗುವಂತೆ ಸ್ವಾಗತಿಸುತ್ತೇನೆ, ಇವೆಲ್ಲವನ್ನೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಲಾಗುತ್ತದೆ, ಮಕ್ಕಳು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಸಿ ನೆಡುವ ಮೂಲಕ ಪರಿಸರ ದಿನವನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ಶಿವಕುಮಾರ್ ತಿಳಿಸಿದರು,