ದೇಶ
ಈ ಸಲ ಕಪ್ ನಮ್ದೇ ಎಂದ ಡಿಕೆಶಿ!!

ಬೆಂಗಳೂರು: ಐಪಿಎಲ್ ಆರಂಭವಾಗಿ 17 ವರ್ಷಗಳೇ ಕಳೆದರೂ ಆರ್ ಸಿ ಬಿ ತಂಡ ಮಾತ್ರ ಒಂದು ಕೂಡ ಟ್ರೋಫಿ ಗೆದ್ದಿಲ್ಲ, ಈ ಬೇಜಾರು ತಂಡಕ್ಕೆ ಮಾತ್ರವಲ್ಲ ಆರ್ ಸಿಬಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ,
ಇದೀಗ ಫೈನಲ್ ಪಂದ್ಯದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದ ಅದೆಷ್ಟೋ ವರ್ಷಗಳ ಕಾಯುವಿಕೆಯ ಬಳಿಕ ಆರ್ ಸಿಬಿ ತಂಡವು ಫೈನಲ್ ಪ್ರವೇಶಿಸಿದೆ, ಇದಕ್ಕಿಂತ ಉತ್ತಮ ವಿಷಯ ಬೇರೋದಿಲ್ಲ, ಆರ್ ಸಿಬಿಯ ಸಾಧನೆಯ ಶಿಖರಕ್ಕೆ ಇನ್ನೊಂದೆ ಹೆಜ್ಜೆ ಬಾಕಿ ಇದೆ ಎಂದರು,
ಇಡೀ ಟೂರ್ನಿಯುದ್ಧಕ್ಕೂ ಬಹಳ ಉತ್ತಮವಾಗಿ ಕಾಣಿಸಿಕೊಂಡಿರುವ ಆರ್ ಸಿಬಿಯು ಇನ್ನೊಂದೇ ಒಂದು ಪಂದ್ಯದಲ್ಲಿ ಗೆಲುವನ್ನು ಸಾಧಿಸಿದರೆ 17 ವರ್ಷಗಳ ವನವಾಸಕ್ಕೆ ಬ್ರೇಕ್ ಬಿದ್ದಂತೆ ಆಗುತ್ತದೆ, ಅದೇನೇ ಆಗಲಿ ಈ ಬಾರಿ ಆರ್ ಸಿಬಿ ಗೆಲ್ಲಲೇಬೇಕು ಕಪ್ ಬೆಂಗಳೂರಿಗೆ ತರಲೇಬೇಕು ಎಂದು ಡಿಕೆ ತಿಳಿಸಿದರು,
ಆರ್ ಸಿಬಿ ಯೊಂದಿಗೆ ಇಡೀ ಅಭಿಮಾನಿ ಬಳಗ ಮಾತ್ರವಲ್ಲ, ಕರ್ನಾಟಕ ಸರ್ಕಾರ ಕೂಡ ನಿಮ್ಮೊಂದಿಗೆ ಇದೆ, ನಿಮ್ಮ ಒಂದು ಹೆಜ್ಜೆಗೆ ಇಡೀ ಕರ್ನಾಟಕ ಮಾತ್ರವಲ್ಲ ಪ್ರಪಂಚವೇ ಕಾತುರದಿಂದ ಕಾಯುತ್ತಿದೆ, ನನಗೆ ಸಂಪೂರ್ಣ ನಂಬಿಕೆ ಇದೆ, ದೇವರಿದ್ದಾನೆ ಒಳ್ಳೇದೇ ಆಗುತ್ತೆ ಎಂದು ಡಿಕೆ ಹೇಳಿದರು,