Connect with us

ಬೆಂಗಳೂರು

ಪಂಚತಂತ್ರ ಕಥೆಗಳಿಗೆ ಆಧುನಿಕ ಟ್ವಿಸ್ಟ್: ಮಕ್ಕಳ ಕ್ರಿಯೇಟಿವಿಟಿಗೆ ಪ್ರೇಕ್ಷಕರು ಫಿದಾ

Published

on

ಬೆಂಗಳೂರು: Param Foundation ಆಯೋಜಿಸಿದ್ದ ‘ಸ್ಟಾಪ್ ಮೋಷನ್ ಅನಿಮೇಷನ್’ ಬೇಸಿಗೆ ಶಿಬಿರವು ಮೇ 9ರಂದು ಜಯನಗರದ ಯುವಪಥ ವಿವೇಕ್ ಸಭಾಂಗಣದಲ್ಲಿ ಅದ್ಧೂರಿಯಾಗಿ ಮುಕ್ತಾಯಗೊಂಡಿತು. ಮೂರು ವಾರಗಳ ಕಾಲ ನಡೆದ ಈ ಶಿಬಿರದಲ್ಲಿ 6ರಿಂದ 16 ವರ್ಷದ ಮಕ್ಕಳಿಗೆ ಅನಿಮೇಷನ್‌ನ ಮೂಲಭೂತ ಹಾಗೂ ಆಧುನಿಕ ತಂತ್ರಗಳನ್ನು ಪರಿಚಯಿಸಲಾಯಿತು.

ಏಪ್ರಿಲ್ 20ರಿಂದ ಆರಂಭವಾದ ಶಿಬಿರದಲ್ಲಿ ಮಕ್ಕಳು ಫ್ಲಿಪ್‌ಬುಕ್ ಮತ್ತು ಜೂಯೆಟ್ರೋಪ್‌ಗಳ ಮೂಲಕ ಚಿತ್ರಕ್ಕೆ ಚಲನೆ ನೀಡುವ ಕಲೆ ಕಲಿತರು. ನಂತರ ತಾವೇ ‘DIY ಸ್ಟುಡಿಯೋ’ ನಿರ್ಮಿಸಿ ಸ್ಮಾರ್ಟ್‌ಫೋನ್ ಬಳಸಿ ವೃತ್ತಿಪರ ಗುಣಮಟ್ಟದ ಕಿರುಚಿತ್ರಗಳನ್ನು ಸೃಷ್ಟಿಸಿದರು. ಸ್ಟೋರಿಬೋರ್ಡಿಂಗ್, ಧ್ವನಿ ಸಂಯೋಜನೆ, ಎಡಿಟಿಂಗ್ ಮತ್ತು ಅನಿಮೇಷನ್ ಫ್ರೇಮ್ ನಿರ್ಮಾಣದಂತಹ ತಾಂತ್ರಿಕ ಕೌಶಲಗಳನ್ನು ಮಕ್ಕಳು ಅಭ್ಯಾಸ ಮಾಡಿದರು.

ಶಿಬಿರದ ವಿಶೇಷ ಆಕರ್ಷಣೆಯಾಗಿ ಖ್ಯಾತ ಸಂಗೀತ ನಿರ್ದೇಶಕ Raghu Dixit ಮಕ್ಕಳಿಗೆ ಸಿನೆಮಾದಲ್ಲಿ ಧ್ವನಿ ಮತ್ತು ಭಾವನೆಗಳ ಮಹತ್ವವನ್ನು ವಿವರಿಸಿದರು. ಗಾಯಕಿಯರಾದ M. D. Pallavi ಹಾಗೂ ಶ್ವೇತಾ ಧ್ವನಿ ಸಂಯೋಜನೆ ಕುರಿತಾಗಿ ತರಬೇತಿ ನೀಡಿದರು. ನಿರ್ದೇಶಕ ಕಾರ್ತಿಕ್ ಸರಗೂರು ಮತ್ತು ಸಿದ್ಧಾರ್ಥ್ ಭರತ್ ಮಕ್ಕಳಿಗೆ ದೃಶ್ಯಕಾವ್ಯ ಹಾಗೂ ಸೃಜನಶೀಲತೆ ಕುರಿತು ಮಾರ್ಗದರ್ಶನ ನೀಡಿದರು.

‘ಸ್ಟಾಪ್ ಮೋಷನ್ ಶೋಕೇಸ್-2026’ ಕಾರ್ಯಕ್ರಮದಲ್ಲಿ ಮಕ್ಕಳಿಂದ ತಯಾರಾದ ಕಿರುಚಿತ್ರಗಳನ್ನು ಸುಮಾರು 200 ಪ್ರೇಕ್ಷಕರ ಎದುರು ಪ್ರದರ್ಶಿಸಲಾಯಿತು. ಪಂಚತಂತ್ರ ಕಥೆಗಳಿಗೆ ‘ಡಿಸ್ಇನ್ಫರ್ಮೇಶನ್’ ಮತ್ತು ‘ಜಲ ಮಾಲಿನ್ಯ’ದಂತಹ ಆಧುನಿಕ ಸಮಸ್ಯೆಗಳನ್ನು ಬೆರೆಸಿ ಮಕ್ಕಳು ನೀಡಿದ ಹೊಸ ರೂಪ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ P. Gowri Shankar ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅಭಿನಂದಿಸಿದರು.

ದೇಶ

ಕೆಎಸ್‌ಆರ್‌ಟಿಸಿ ಸಿಬ್ಬಂದಿಯಿಂದ ಸರ್ಕಾರಕ್ಕೆ ಡೆಡ್‌ಲೈನ್

Published

on

ಬೆಂಗಳೂರು: Karnataka ರಾಜ್ಯ ಸರ್ಕಾರ ಹೊರಡಿಸಿರುವ ವೇತನ ಪರಿಷ್ಕರಣೆ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಾರಿಗೆ ನೌಕರರು ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದ ರಾಜ್ಯಾದ್ಯಂತ ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ರಾಜ್ಯ ಸರ್ಕಾರವು ಸಾರಿಗೆ ನಿಗಮಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಶೇ.12.5ರಷ್ಟು ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿತ್ತು. ಆದರೆ KSRTC Staff and Workers Federation ಸೇರಿದಂತೆ ಸಾರಿಗೆ ಸಂಸ್ಥೆಗಳ ಜಂಟಿ ಕ್ರಿಯಾ ಸಮಿತಿ ಇದನ್ನು ಏಕಪಕ್ಷೀಯ ನಿರ್ಧಾರ ಎಂದು ಟೀಕಿಸಿದೆ.

ನೌಕರರ ಪ್ರಮುಖ ಬೇಡಿಕೆ ಎಂದರೆ ಮೂಲ ವೇತನದೊಂದಿಗೆ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಹಾಗೂ ಅದನ್ನು 2024ರ ಜನವರಿ 1ರಿಂದಲೇ ಜಾರಿಗೆ ತರಬೇಕು ಎಂಬುದು. ಆದರೆ ಸರ್ಕಾರ 2025ರ ಏಪ್ರಿಲ್‌ನಿಂದ ಅನ್ವಯವಾಗುವಂತೆ ಶೇ.12.5ರಷ್ಟು ಮಾತ್ರ ಹೆಚ್ಚಳ ಘೋಷಿಸಿರುವುದು ನೌಕರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇದಲ್ಲದೆ, 2020ರಿಂದ ಬಾಕಿ ಉಳಿದಿರುವ ಸುಮಾರು ₹1,272 ಕೋಟಿ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ. ಫೆಡರೇಷನ್ ಅಧ್ಯಕ್ಷ ಜ್ಯೋತಿ ಅನಂತ ಸುಬ್ಬರಾವ್ ಮಾತನಾಡಿ, “ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವ ನಿಯಮವನ್ನು ಸರ್ಕಾರ ಪಾಲಿಸುತ್ತಿಲ್ಲ. ಹಲವು ಸುತ್ತಿನ ಮಾತುಕತೆಗಳ ಬಳಿಕವೂ ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಲಾಗಿದೆ” ಎಂದು ಆರೋಪಿಸಿದರು.

ಮುಷ್ಕರವನ್ನು ಹತ್ತಿಕ್ಕಲು ಸರ್ಕಾರ Essential Services Maintenance Act (ಎಸ್ಮಾ) ಜಾರಿ ಮಾಡಿದರೂ ಹಿಂದೆ ಸರಿಯುವುದಿಲ್ಲ ಎಂದು ನೌಕರರ ಸಮಿತಿ ಎಚ್ಚರಿಕೆ ನೀಡಿದೆ.

Continue Reading

ದೇಶ

ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಕೊರತೆ: ರೋಗಿಗಳ ಪರದಾಟ

Published

on

ದೇವನಹಳ್ಳಿ: Karnataka ಸರ್ಕಾರದ ಗ್ಯಾರಂಟಿ ಯೋಜನೆಗಳ ನಡುವೆ ಬಡವರ ಆರೋಗ್ಯ ಸೇವೆಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ. Devanahalli ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಗಳ ತೀವ್ರ ಕೊರತೆ ಉಂಟಾಗಿದ್ದು, ಚಿಕಿತ್ಸೆಗೆ ಬರುವ ಬಡ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ಪ್ರತಿದಿನ ನೂರಾರು ಜನರು ಆಸ್ಪತ್ರೆಗೆ ಬರುತ್ತಿದ್ದರೂ, ಜ್ವರ ಹಾಗೂ ಸಾಮಾನ್ಯ ಕಾಯಿಲೆಗಳ ಮಾತ್ರೆಗಳನ್ನು ಹೊರತುಪಡಿಸಿ ಪ್ರಮುಖ ಆಂಟಿಬಯೋಟಿಕ್ ಔಷಧಗಳು ಲಭ್ಯವಿಲ್ಲ ಎನ್ನಲಾಗಿದೆ. ವೈದ್ಯರು ಬರೆದುಕೊಡುವ ಅನೇಕ ಔಷಧಿಗಳು ಆಸ್ಪತ್ರೆಯ ಫಾರ್ಮಸಿಯಲ್ಲಿ ಸಿಗದೇ, ರೋಗಿಗಳು ಖಾಸಗಿ ಮೆಡಿಕಲ್‌ ಅಂಗಡಿಗಳಿಂದ ದುಬಾರಿ ಬೆಲೆಗೆ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಆಂಟಿಬಯೋಟಿಕ್ ಇಂಜೆಕ್ಷನ್‌ಗಳ ಕೊರತೆಯೂ ತೀವ್ರವಾಗಿದ್ದು, ಲಭ್ಯವಿರುವ ಅಲ್ಪ ಪ್ರಮಾಣದ ಚುಚ್ಚುಮದ್ದುಗಳಿಂದಲೇ ಆಸ್ಪತ್ರೆ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಇದರಿಂದ ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವ ಬಡ ರೋಗಿಗಳು ಹೆಚ್ಚಿನ ಸಂಕಷ್ಟ ಎದುರಿಸುತ್ತಿದ್ದಾರೆ.

ಇನ್ನೊಂದೆಡೆ, ಆಸ್ಪತ್ರೆಯಲ್ಲಿ ಎಕ್ಸ್‌ರೇ ಫಿಲ್ಮ್ ಗ್ರಾಫ್‌ ಶೀಟ್‌ಗಳ ಕೊರತೆಯೂ ಕಾಣಿಸಿಕೊಂಡಿದೆ. ಪರಿಣಾಮವಾಗಿ, ಎಕ್ಸ್‌ರೇ ಮಾಡಿಸಿಕೊಂಡ ರೋಗಿಗಳು ತಮ್ಮ ಮೊಬೈಲ್‌ನಲ್ಲಿ ಸ್ಕ್ರೀನ್ ಫೋಟೋ ತೆಗೆದುಕೊಂಡು ಹೋಗುವ ದುಸ್ಥಿತಿ ಎದುರಾಗಿದೆ.

Karnataka Health Department ಗೆ ಹಲವು ಬಾರಿ ಬೇಡಿಕೆ ಸಲ್ಲಿಸಿದ್ದರೂ ಅಗತ್ಯ ಔಷಧ ಹಾಗೂ ಸಾಮಗ್ರಿಗಳ ಸರಬರಾಜು ಆಗಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಔಷಧ ಹಾಗೂ ಎಕ್ಸ್‌ರೇ ಶೀಟ್‌ಗಳನ್ನು ಪೂರೈಸಿ ಆರೋಗ್ಯ ಸೇವೆಯನ್ನು ಸುಧಾರಿಸಬೇಕೆಂದು ಆಗ್ರಹಿಸಿದ್ದಾರೆ.

Continue Reading

ದೇಶ

ಬೆಂಗಳೂರಿಗರಿಗೆ 6ನೇ ಗ್ಯಾರಂಟಿ: ‘ಭೂ ಗ್ಯಾರಂಟಿ’ ಘೋಷಿಸಿದ ಸರ್ಕಾರ

Published

on

ಬೆಂಗಳೂರು: Karnataka ಸರ್ಕಾರವು ಬೆಂಗಳೂರಿನ ಜನರಿಗೆ “ಭೂ ಗ್ಯಾರಂಟಿ” ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದು, ಇದನ್ನು 6ನೇ ಗ್ಯಾರಂಟಿಯಾಗಿ ಬಿಂಬಿಸಲಾಗಿದೆ. ಪ್ರಮುಖವಾಗಿ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗಿದ್ದು, ಆಸ್ತಿ ಮಾಲೀಕರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ D. K. Shivakumar, “ಬೆಂಗಳೂರು ನಗರದಲ್ಲಿರುವ 23 ಲಕ್ಷ ಆಸ್ತಿಗಳ ಪೈಕಿ 16 ಲಕ್ಷ ಎ ಖಾತಾ ಮತ್ತು 7 ಲಕ್ಷ ಬಿ ಖಾತಾಗಳಾಗಿವೆ. ಬಿ ಖಾತಾ ಹೊಂದಿರುವವರಿಗೆ ಬ್ಯಾಂಕ್ ಸಾಲ, ಮಾರಾಟ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿದ್ದವು. ಇದನ್ನು ಸರಿಪಡಿಸಲು ‘ನನ್ನ ಖಾತಾ – ನನ್ನ ಹಕ್ಕು’ ಅಭಿಯಾನ ಆರಂಭಿಸಲಾಗಿದೆ” ಎಂದು ಹೇಳಿದರು.

ಹೊಸ ನಿಯಮದ ಪ್ರಕಾರ, ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಗೆ ಗೈಡೆನ್ಸ್ ವ್ಯಾಲ್ಯೂನ ಶೇ.2ರಷ್ಟು ದಂಡ ಪಾವತಿಸಿದರೆ ಅವಕಾಶ ದೊರೆಯಲಿದೆ. ಈ ಹಿಂದೆ ಶೇ.5ರಷ್ಟು ದಂಡ ವಿಧಿಸಲಾಗುತ್ತಿತ್ತು. ಅರ್ಜಿ ಸಲ್ಲಿಸಿದ ಬಳಿಕ ಅಧಿಕಾರಿಗಳು ಆಸ್ತಿ ಪರಿಶೀಲನೆ ನಡೆಸಿ, ಒಂದು ವರ್ಷದೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಮೇ 16ರಿಂದ ಪ್ರತಿ ಶನಿವಾರ 5 ನಗರ ಪಾಲಿಕೆಗಳ 50 ಕೇಂದ್ರಗಳಲ್ಲಿ “ನನ್ನ ಖಾತಾ – ನನ್ನ ಹಕ್ಕು” ಅಭಿಯಾನ ನಡೆಯಲಿದ್ದು, ಅಂತಿಮ ಇ-ಖಾತಾ, ಹೊಸ ಇ-ಖಾತಾ ಹಾಗೂ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಸೇರಿದಂತೆ ಮೂರು ಸೇವೆಗಳು ಲಭ್ಯವಾಗಲಿವೆ.

ಇದೇ ವೇಳೆ, ಕಟ್ಟಡ ಉಲ್ಲಂಘನೆ ಮಿತಿಯನ್ನು ಶೇ.5ರಿಂದ ಶೇ.15ಕ್ಕೆ ಹೆಚ್ಚಿಸುವ ಮೂಲಕ ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಸಮಸ್ಯೆಗೂ ಸರ್ಕಾರ ಪರಿಹಾರ ನೀಡಿದೆ. ಇದರಿಂದ ಲಕ್ಷಾಂತರ ಕಟ್ಟಡ ಮಾಲೀಕರಿಗೆ ಭಾರಿ ನೆರವಾಗಲಿದೆ.

Continue Reading

Trending