Connect with us

ದೇಶ

ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ

ಫೀನಿಕ್ಸ್ ನಲ್ಲಿ* *ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ*
ಫೀನಿಕ್ಸ್ ನಲ್ಲಿ* *ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ*

ಲೋಕ  ಕಲ್ಯಾಣ ಕ್ಕಾಗಿ  ಅಮೆರಿಕಾದ ಪ್ರಥಮ ದೇವಾಲಯವಾದ ಶ್ರೀ ವೆಂಕಟಕೃಷ್ಣ ಕ್ಷೇತ್ರ ದಲ್ಲಿ ಒಂಬತ್ತು ದಿನಗಳ ಕಾಲ ನಡೆದ ಸಂಹಿತಾ ಯಾಗ ಇಂದು ರಥೋತ್ಸವ ರಂಗಪೂಜೆಯೊಂದಿಗೆ  ವಿದ್ಯುಕ್ತವಾಗಿ ಸಮಾಪನೆ ಗೊಂಡಿತು .

ಬೆಳಿಗ್ಗೆ ಶ್ರೀ  ಶ್ರೀನಿವಾಸ ದೇವರಿಗೆ ಪ್ರಸನ್ನ ಕಲಶಾಭಿಷೇಕ ಪೂಜ್ಯ ಶ್ರೀಪಾದರು   ನೆರವೇರಿಸಿದರು.

ಬಳಿಕ ಅನೇಕ ಭಕ್ತ ಜನರ ಸಮ್ಮುಖದಲ್ಲಿ ಸಹಸ್ರ ಗಣಪತ್ಯಥರ್ವ ಶೀರ್ಷ ಯಾಗ  ಸಂಪನ್ನ ಗೊಂಡಿತು. 

ಸಾಯಂಕಾಲ ಶ್ರೀನಿವಾಸ ದೇವರಿಗೆ ರಂಗಪೂಜೆ  ರಥೋತ್ಸವ ನಡೆದು ,

ಶ್ರೀನಿವಾಸನ ಉತ್ಸವಮೂರ್ತಿಯ ಅಟ್ಟೆಪಲ್ಲಕ್ಕಿ ಕುಣಿತ ಜನರ ವಿಶೇಷ ಮೆಚ್ಚುಗೆ ಗೆ ಪಾತ್ರವಾಯಿತು .

ಈ ಉತ್ಸವದಲ್ಲಿ ಪ್ರಮುಖವಾಗಿ ವಾದನ ಸುತ್ತು ,ಚೆಂಡೆ ಸುತ್ತು ,ಹರಿಭಜನೆ ಸುತ್ತುಗಳ ನರ್ತನ ಗಳಿಂದ  ಉಡುಪಿಯ ಭವ್ಯ ಉತ್ಸವಪರಂಪರೆಯನ್ನು ಈ ನೆಲದಲ್ಲಿ ಪರಿಚಯಿಸಿದಂತಾಯಿತು .

ಪೂಜ್ಯಶ್ರೀಪಾದರು  ಈ ಕಾರ್ಯಕ್ರಮಗಳನ್ನು ಚೆನ್ನಾಗಿ ನಿರ್ವಹಿಸಿದ ವೈದಿಕ ವಿದ್ವಾಂಸರನ್ನು ಶಾಲು ಹೊದಿಸಿ  ಆಶೀರ್ವದಿಸಿದರು .

 ಒಟ್ಟಿನಲ್ಲಿ ಹತ್ತು ದಿನಗಳ ಎಡೆಬಿಡದ ಈ ಧಾರ್ಮಿಕ ಉತ್ಸವ ಕಾರ್ಯಕ್ರಮಗಳಿಂದ ಭಕ್ತಜನತೆ ಧನ್ಯಶಾಲಿಗಳಾದರು .

ದೇಶ

ಪ್ರಧಾನಿ ಮೋದಿ ಎನ್‌ಡಿಎ ಸಭೆಯಲ್ಲಿ ಆಪರೇಷನ್ ಸಿಂದೂರ್ ಕುರಿತು ಗಂಭೀರವಾಗಿ ಮಾತನಾಡಿದ್ರು!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎನ್‌ಡಿಎ (NDA) ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸಿ ಮಹತ್ವದ ವಿಷಯಗಳ ಕುರಿತು ಮಾತನಾಡಿದರು. ವಿಶೇಷವಾಗಿ ಮೇ ತಿಂಗಳಲ್ಲಿ ಆರಂಭಗೊಂಡಿದ್ದ ಆಪರೇಷನ್ ಸಿಂದೂರ್ ಕುರಿತು ವಿರೋಧ ಪಕ್ಷದ ಟೀಕೆಯನ್ನು ಗಂಭೀರವಾಗಿ ಪ್ರಶ್ನಿಸಿದ್ರು. “ಇದೊಂದು ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯ. ಈ ಬಗ್ಗೆ ಮಾತನಾಡಲು ವಿಪಕ್ಷಗಳಿಗೆ ಯೋಗ್ಯತೆ ಇಲ್ಲ,” ಎಂದು ಮೋದಿ ತೀಕ್ಷ್ಣವಾಗಿ ಟೀಕಿಸಿದರು.

ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ಎನ್‌ಡಿಎ ನಾಯಕರಿದ್ದರು. ಸಭೆಯಲ್ಲಿ ಭಾಗವಹಿಸಿದ ಸಂಸದರು, ಆಪರೇಷನ್ ಸಿಂದೂರ್‌ನ ಯಶಸ್ಸಿಗೆ ಪ್ರಧಾನಿ ಮೋದಿಗೆ ಶ್ಲಾಘನೆ ಸಲ್ಲಿಸಿ, ಅವರ ನಾಯಕತ್ವವನ್ನು ಪ್ರಶಂಸಿಸಿದರು.

ಆಪರೇಷನ್ ಸಿಂದೂರ್ ಮಾರ್ಗವಾಗಿ ದೇಶದ ಭದ್ರತೆಯ ಹಿತವನ್ನೇ ಕೇಂದ್ರಬಿಂದುವಾಗಿ ಇಟ್ಟುಕೊಂಡು ಕಾರ್ಯಚಟುವಟಿಕೆ ನಡೆಯಿತು ಎಂದು ಅಭಿಪ್ರಾಯ ವ್ಯಕ್ತವಾಯಿತು. ಪ್ರಧಾನಿ ಮೋದಿ ಅವರ “ದೃಢ ಸಂಕಲ್ಪ” ಹಾಗೂ “ದೂರದೃಷ್ಟಿ”ಯು ದೇಶದ ಜನತೆಗೆ ಹೆಮ್ಮೆಯ ಭಾವನೆ ಉಂಟುಮಾಡಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಇನ್ನು ಆಗಸ್ಟ್ 7ರಿಂದ ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. NDA ಅಭ್ಯರ್ಥಿ ಬಹುಮತದಿಂದ ಗೆಲ್ಲಲಿದ್ದಾರೆ ಎಂಬ ನಿರೀಕ್ಷೆ ಇದೆ. ಆದರೆ ಮೈತ್ರಿಕೂಟವು ಆಗಸ್ಟ್ 21 ರೊಳಗೆ ತನ್ನ ಅಭ್ಯರ್ಥಿಯನ್ನು ಘೋಷಿಸಬೇಕಾಗಿದ್ದು, ರಾಜಕೀಯವಾಗಿ ಚಟುವಟಿಕೆ ತೀವ್ರಗೊಂಡಿದೆ.

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಪ್ರಮುಖ ನಾಯಕರೊಂದಿಗೆ ಮಿತ್ರಪಕ್ಷಗಳ ಸಮನ್ವಯವೂ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.


Continue Reading

ದೇಶ

ಡೊನಾಲ್ಡ್ ಟ್ರಂಪ್ ಬೆದರಿಕೆ: ರಷ್ಯಾ ತೈಲ ಖರೀದಿಸಿದರೆ ಭಾರತಕ್ಕೆ ಸುಂಕದ ಬಿಸಿ!

ವಾಷಿಂಗ್ಟನ್: ಭಾರತ ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದರೆ, ಅದರ ವಿರುದ್ಧ ಸಂಕುಚಿತ ವಾಣಿಜ್ಯ ನಿಲುವು ತೆಗೆದುಕೊಳ್ಳುತ್ತೇವೆ ಎಂದು ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ ಎಚ್ಚರಿಕೆ ನೀಡಿದ್ದಾರೆ. ತಮ್ಮ ಟ್ರೂತ್ ಸೋಷಿಯಲ್ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿದ ಟ್ರಂಪ್, “ಭಾರತ ರಷ್ಯಾದಿಂದ ತೈಲ ಖರೀದಿಗೆ ಬ್ರೇಕ್ ಹಾಕದಿದ್ದರೆ, ಹೆಚ್ಚಿನ ಸುಂಕ (Tariff) ವಿಧಿಸುತ್ತೇವೆ” ಎಂದು ಹೇಳಿದ್ದಾರೆ.

ಭಾರತ ಪ್ರಸ್ತುತ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರರಲ್ಲಿ ಒಂದಾಗಿದೆ. 2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ನಂತರ, ಯುರೋಪಿಯನ್ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಿದ್ದವು. ಆದರೆ ಭಾರತಕ್ಕೆ ಭಾರೀ ರಿಯಾಯಿತಿ ದರದಲ್ಲಿ ತೈಲ ಮಾರಾಟ ಆರಂಭಿಸಿದ ರಷ್ಯಾ, ಈಗಲೂ ಭಾರತಕ್ಕೆ ಪ್ರಮುಖ ತೈಲ ಪೂರೈಕೆದಾರವಾಗಿದೆ.

ಟ್ರಂಪ್ ಬೆದರಿಕೆ ಏಕೆ?
ಟ್ರಂಪ್‌ನ ತೀಕ್ಷ್ಣ ಹೇಳಿಕೆಯು ರಷ್ಯಾ-ಉಕ್ರೇನ್ ಯುದ್ಧದ ಬೆನ್ನಲ್ಲೇ, ರಷ್ಯಾದಿಂದ ತೈಲ ಖರೀದಿಸುತ್ತಿರುವ ದೇಶಗಳ ವಿರುದ್ಧ ಅಮೆರಿಕದ ಅಸಮಾಧಾನವನ್ನು ತೋರುತ್ತಿದೆ. ಅವರು ಹೀಗಂದಿದ್ದಾರೆ:

“ರಷ್ಯಾದಿಂದ ತೈಲ ಖರೀದಿ ಮುಂದುವರಿದರೆ, ಭಾರತ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ.”

ಭಾರತದ ಪ್ರತಿಕ್ರಿಯೆ
ಈ ಬೆದರಿಕೆಗೆ ಭಾರತ ಕಠಿಣ ಉತ್ತರ ನೀಡಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿ, “ಜಾಗತಿಕ ಇಂಧನ ಸ್ಥಿರತೆಗೆ ಬೆಂಬಲ ನೀಡುವ ಉದ್ದೇಶದಿಂದ ರಷ್ಯಾ ತೈಲ ಖರೀದಿಯ ನಿರ್ಧಾರ ತೆಗೆದುಕೊಂಡಿದ್ದೇವೆ.” ಎಂದು ತಿಳಿಸಿದ್ದಾರೆ.

ಭಾರತದ ಹಿತಾಸಕ್ತಿ ಮೌಲ್ಯಮಾಪನ

ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ,” ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ಹೇಳಿದೆ.

Continue Reading

ದೇಶ

ಬೆಂಗಳೂರು ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ: ಮೋದಿ ಆಗಸ್ಟ್ 10ರಂದು ಚಾಲನೆ ನೀಡಲು ಆಗಮಿಸುತ್ತಿದ್ದಾರೆ!

ಬೆಂಗಳೂರು: ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ (Yellow Line) ಉದ್ಘಾಟನೆಗೆ ದಿನಾಂಕ ಫೈನಲ್ ಆಗಿದೆ. ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಮೆಟ್ರೋಗೆ ಅಧಿಕೃತವಾಗಿ ಚಾಲನೆ ನೀಡಲಿದ್ದು, ರಾಜ್ಯ ರಾಜಕಾರಣದಲ್ಲಿ ಭರ್ಜರಿ ಕಸರತ್ತು ಆರಂಭವಾಗಿದೆ.

ಮೆಟ್ರೋ ಉದ್ಘಾಟನೆ + ಮೋದಿ ರೋಡ್ ಶೋ = ಮೆಗಾ ಈವೆಂಟ್:
ಮೆಟ್ರೋ ಚಾಲನೆ ನಂತರ, ಮೋದಿ ರಾಗಿಗುಡ್ಡ ಪ್ರಸನ್ನ ಆಂಜನೇಯ ದೇವಸ್ಥಾನದಿಂದ ಶಾಲಿನಿ ಮೈದಾನದವರೆಗೆ ರೋಡ್ ಶೋ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 40 ಸಾವಿರ ಜನ ಜಮಾಯಿಸುವ ನಿರೀಕ್ಷೆ ಇದೆ.

ಅಥೆಂಡ್ ಮಾಡ್ತೀರಾ?
ಇದು ಕೇವಲ ಮೆಟ್ರೋ ಉದ್ಘಾಟನೆ ಮಾತ್ರವಲ್ಲ; ಪ್ರಧಾನಿ ಮೋದಿ ಸಾರ್ವಜನಿಕ ಸಭೆಗೂ ಪಾಲ್ಗೊಳ್ಳಲಿದ್ದಾರೆ. ಹಳದಿ ಮಾರ್ಗ ಉದ್ಘಾಟನೆಯಿಂದ 8-10 ಲಕ್ಷ ಪ್ರಯಾಣಿಕರಿಗೆ ಸೌಲಭ್ಯ ಸಿಗಲಿದೆ. ಇದರಿಂದ ಬೆಂಗಳೂರು ಟ್ರಾಫಿಕ್ ಸಮಸ್ಯೆಗೂ ಪರಿಹಾರ ಸಾಧ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜಕೀಯ ಬೆನ್ನುತುಂಬಿದ ಲೆಕ್ಕಾಚಾರ:
ಹಳದಿ ಮಾರ್ಗಕ್ಕೆ ಶಂಕುಸ್ಥಾಪನೆ ಮಾಡಿದ್ದು ಮೋದಿ ಅವರೇ. ಈಗ ಉದ್ಘಾಟನೆಗೂ ಅವರೇ ಆಗಮಿಸುತ್ತಿರುವುದು ಬಿಜೆಪಿಗೆ ರಾಜಕೀಯ ಗುರಿ ಸಾಧಿಸಲು ಸಹಕಾರಿಯಾಗಲಿದೆ.

Continue Reading

Trending