ಬೆಂಗಳೂರು
ಹೆಣ್ಮಗಳಿಗೆ ಅನ್ಯಾಯವಾಗಿದ್ರೆ ಸಹಾಯ ಮಾಡ್ಬೋದಿತ್ತು-ದರ್ಶನ್ ಪತ್ನಿ ಭೇಟಿ ಬಳಿಕ ಡಿಕೆಶಿ ಹೇಳಿದ್ದು ಹೀಗೆ

ಬೆಂಗಳೂರು; ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದಾರೆ, ಇತ್ತ ಪತ್ನಿ ವಿಜಯಲಕ್ಷ್ಮಿ ಪರದಾಡುತ್ತಿದ್ದಾರೆ, ಈ ನಡುವೆ ಇಂದು ಉಪಮುಖ್ಯಮಂತ್ರಿ ಡಿಕೆಶಿ ಅವರನ್ನು ವಿಜಯಲಕ್ಷ್ಮಿ ಹಾಗೂ ದರ್ಶನ್ ಸಹೋದರ ದಿನಕರ್ ತೂಗದೀಪ್ ಭೇಟಿಯಾಗಿ ಕೆಲ ಕಾಲ ಚರ್ಚೆ ನಡೆಸಿದ್ದಾರೆ,
ಸದಾಶಿವನಗರದಲ್ಲಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ನಿನ್ನೆ ಕೆಂಪೇಗೌಡ ಜಯಂತಿಗೆ ಹೋದಾಗ ಭೇಟಿ ಮಾಡಲು ಬಂದಿದ್ದರು, ಆಗ ನಾನು ನಾಳೆ ಬಂದು ಭೇಟಿ ಮಾಡುವಂತೆ ಹೇಳಿದ್ದೆ, ಹೀಗಾಗಿ ಇಬ್ಬರೂ ಇಂದು ನನ್ನ ಭೇಟಿಯಾಗಿದ್ದಾರೆ ಎಂದರು,
ಅವರ ಮಗ ಮೊದಲು ನಮ್ಮ ಸ್ಕೂಲ್ ನಲ್ಲಿಯೇ ಓದುತ್ತಾ ಇದ್ದ ಅದರೆ ಕೆಲ ದಿನಗಳ ಹಿಂದೆ ಶಿಫ್ಟ್ ಮಾಡಿದ್ರ, ಇದೀಗ ಮತ್ತೆ ನಮ್ಮ ಸ್ಕೂಲ್ ನಲ್ಲಿಯೇ ಸೀಟ್ ಬೇಕು ಅಂತ ಕೇಳುತ್ತಿದ್ದಾರೆ, ಇದಕ್ಕೆ ನಮ್ಮ ಸ್ಕೂಲ್ ಪ್ರಾಂಶುಪಾಲರು ಒಪ್ಪಿರಲಿಲ್ಲ, ಹೀಗಾಗಿ ಅವರು ಈ ಕುರಿತು ನನ್ನ ಬಳಿ ಮಾತುಕತೆ ನಡೆಸಲು ಬಂದಿದ್ದರು, ಬಳಿಕ ನಾನು ಫೋನ್ ಮಾಡಿ ಪ್ರಿನ್ಸಿಪಾಲರಿಗೆ ಸಹಕಾರ ನೀಡಲು ಹೇಳಿದ್ದೇನೆ ಎಂದು ತಿಳಿಸಿದರು,
ಒಟ್ಟಿನಲ್ಲಿ ವಿಜಯಲಕ್ಷ್ಮಿ ಅವರು ಮಗನ ಸ್ಕೂಲ್ ಸೀಟ್ ವಿಚಾರವಾಇ ಮಾತಾಡಿದ್ದಾರೆಯೇ ಹೊರತು ದರ್ಶನ್ ಪ್ರಕರಣದ ಕುರಿತು ಮಾತಾಡಿಲ್ಲ, ನಾನು ಕೂಡ ಅವರ ಬಳಿ ಈ ಬಗ್ಗೆ ಏನು ಕೇಳಿಲ್ಲ, ಹೆಣ್ಣು ಮಗಳು ಅನ್ಯಾಯವಾಗಿದೆ ಅಂದ್ರೆ ಏನೋ ಒಂದು ಸಹಾಯ ಮಾಡಬಹುದಿತ್ತು, ಅದರೆ ಇದು ಪೊಲೀಸ್ ವಿಚಾರವಾಗಿದೆ ಹೀಗಾಗಿ ನಾನು ಮಧ್ಯೆ ಪ್ರವೇಶ ಮಾಡಲು ಆಗಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದರು,