ರಾಜಕೀಯ
ನನ್ನ ಕಂಡ್ರೆ ಅವರಿಗೆ ಹೊಟ್ಟೆ ಉರಿ, ಅದಕ್ಕೆ ಮುಡಾ…ಮುಡಾ ಅಂತಾರೆ-ಸಿಎಂ

ಮೈಸೂರು: ಮುಡಾ..ಮುಡಾ ಹಗರಣ ಎಂದು ಸುಳ್ಳು ಆರೋಪ ಮಾಡುವ ಕುಮಾರಸ್ವಾಮಿ ಯಡಿಯೂರಪ್ಪ, ಅಶೋಕ್, ವಿಜೇಯೇಂದ್ರ ಪ್ರಹ್ಲಾದ್ ಜೋಶಿಗೆ ನನ್ನ ಕಂಡರೆ ಹೊಟ್ಟೆ ಕಿಚ್ಚು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು,
ಸ್ವಕ್ಷೇತ್ರ ವರುಣಾದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಇಂದು ಶಂಕುಸ್ಧಾಪನೆ ನೆರವೇರಿಸಿ ಮಾತನಾಡಿದ ಸಿಎಂ ಮುಡಾ ಹಗರಣ ಅಂತಾ ಆರೋಪ ಮಾಡುತ್ತಿದ್ದಾರೆ, ನನ್ನ ಭಾಮೈದ ತೆಗೆದುಕೊಂಡ ಜಮೀನನ್ನು ತನ್ನ ತೆಂಗಿಗೆ ಕೊಟ್ಟಿದ್ದಾನೆ, ಅದಕ್ಕೆ ಸೈಟ್ ಬಂದಿದ್ದವು, ಅದನ್ನೇ ದೊಡ್ಡ ವಿವಾದ ಮಾಡಿದರು, ಅದಕ್ಕೇ ಬೇಡವೇ ಬೇಡ ಎಂದು ಮುಡಾಗೆ ಸೈಟ್ ವಾಪಸ್ ಕೊಟ್ಟಿದ್ದೇವೆ, ನಾನು ಒಬ್ಬ ಸಿಎಂ ಆಗಿ ಈಗ ಮೈಸೂರಿನಲ್ಲಿ ಮನೆ ಕಟ್ಟುತ್ತಿದ್ದೇನೆ, ಈವರೆಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ, 40 ವರ್ಷಗಳಿಂದ ನನಗೆ ಸ್ವಂತ ಮನೆಯೂ ಇಲ್ಲ ಎಂದರು,
ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳಿಂದ ಯಾವ ಕಾರಣಕ್ಕೂ ಧೃತಿಗೆಡಲ್ಲ, ಯಾರಿಗೂ ಜಗ್ಗಲ್ಲ- ಬಗ್ಗುವುದೂ ಇಲ್ಲ ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ವಿಪಕ್ಷದವರು ವಿರುದ್ಧ ಸಿಎಂ ಹರಿಹಾಯ್ದರು..