ಬೆಂಗಳೂರು
ಜಮೀರ್ ಮತ್ತು ಕುಮಾರಸ್ವಾಮಿ ಗಳಸ್ಯ ಕಂಠಸ್ಯ-ಕರಿಯಾ ಎಂದಿದ್ದಕ್ಕೆ ಪರಂ ಸ್ಪಷ್ಟನೆ.!

ಬೆಂಗಳೂರು: ಹೆಚ್ಡಿಕೆ ವಿರುದ್ಧ ಜಮೀರ್ ಅಹಮದ್ ಕರಿಯಾ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್ ಅವರಿಬ್ಬರು ಬಹಳ ಒಳ್ಳೆಯ ಸ್ನೇಹಿತರು, ಒಬ್ಬರಿಗೊಬ್ಬರು ಪರಸ್ಪರ ಮಾತನಾಡಿಕೊಳ್ಳುವುದು ಹೊಸದೇನಲ್ಲ ಎಂದು ಹೇಳಿದರು,
ಈ ಬಗ್ಗೆ ಮಾತನಾಡಿದ ಅವರು ಹೆಚ್ ಡಿ ಕುಮಾರಸ್ವಾಮಿ ಹಾಗೂ ಜಮೀರ್ ಗಳಸ್ಯ ಕಂಠಸ್ಯರಿದ್ದಂತೆ, ಬಹಳ ಉತ್ತಮ ಸ್ನೇಹಿರು ಅವದರಲ್ಲಿ ಎರಡು ಮಾತಿಲ್ಲ, ಒಬ್ಬರಿಗೊಬ್ಬರು ಪರಸ್ಪರ ಮಾತನಾಡಿಕೊಳ್ಳುವುದು ಹೊಸದೇನಲ್ಲ, ಅದು ಅವರ ವೈಯುಕ್ತಿಕ ಈ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ ಎಂದರು,
ಇದೇ ವೇಳೆ ಕೆಕೆಆರ್ಡಿಬಿ ಯಲ್ಲಿ 300 ಕೋಟಿ ಅನುದಾನ ದುರ್ಬಳಿಕೆ ಆಗಿದೆ ಅಂತ ಗೊತ್ತಾಗಿದೆ, ವರ್ಷಕ್ಕೆ ನೂರು ಕೋಟಿ ಅಂದ್ರು ಮೂರು ವರ್ಷ ಅಂದ್ರು 300 ಕೋಟಿ ಆಗಲಿದೆ, ತನಿಖೆಯ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ಪರಂ ಹೇಳಿದರು,