ಅಪರಾಧ
ದೇವ್ರಾಣೆ ನಾನು ಅತ್ಯಾಚಾರ ಮಾಡಿಲ್ಲ ಮಾಡಿದ್ರೆ ರಕ್ತ ಕಾರಿ ಸಾಯ್ತೀನಿ-ಮುನಿರತ್ನ

ಬೆಂಗಳೂರು: ಕಾಲಬೈರವನ ಆಣೆಗೂ ನಾನು ಅತ್ಯಾಚಾರ ಮಾಡಿಲ್ಲ, ಮಾಡಿದ್ರೆ ರಕ್ತ ಕಾರಿ ಸಾಯುವೆ ಎಂದು ಬಿಜೆಪಿ ಶಾಸಕ ಮುನಿರತ್ನ ನಾಯ್ಡು ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ,
ರಾಜರಾಜೇಶ್ವರಿ ಕ್ಷೇತ್ರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿ ಸುಳ್ಳು ದೂರನ್ನು ಕೊಟ್ಟಿದ್ದಾರೆ, ನಾನು ಮಹಿಳೆಯರನ್ನು ಗೌರವದಿಂದ ಮಾತನಾಡಿಸುತ್ತೇವೆ, ಯಾರೇ ನನ್ನ ಬಳಿ ಬಂದರೂ ಏನಮ್ಮ ಹೇಳಿ ತಾಯಿ ಎಂದೇ ಪದ ಬಳಸುತ್ತೇನೆ, ಆದರೆ ಈ ರೀತಿ ನನ್ನ ವಿರುದ್ಧ ಸುಳ್ಳು ದೂರು ಕೊಡಬಾರದಿತ್ತು, ದೇವರ ಆಣೆಗೂ ನಾನು ಯಾವುದೇ ತಪ್ಪನ್ನು ಮಾಡಿಲ್ಲ, ನೀವು ಕೊಟ್ಟ ಮತಗಳ ಭಿಕ್ಷೆಯಿಂದ ನಾನು ಎಂಎಲ್ಎ ಆಗಿದ್ದು, ನೀವು ರಾಜೀನಾಮೆ ಕೊಡಿ ಎಂದರೆ ಈಗಲೇ ಕೊಡುವೆ ಎಂದು ಮುನಿರತ್ನ ತಿಳಿಸಿದ್ದಾರೆ,
ಇತ್ತೀಚಿಗೆ ಷರತ್ತುಬದ್ಧ ಜಾಮೀನಿನ ಮೇಲೆ ಮುನಿರತ್ನ ಜೈಲಿನಿಂದ ಹೊರ ಬಂದಿದ್ದಾರೆ, ಕಗ್ಗಲೀಪುರ ಠಾಣೆಯಲ್ಲಿ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪದಡಿ ಸಂತ್ರಸ್ತೆಯೋರ್ವಳು ಎಫ್ಐಆರ್ ದಾಖಲಿಸಿದ್ದಾರೆ,